ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ ಸುಡುವ ಬಿಸಿಲು, ಬೆವರು, ಬಾಯಾರಿಕೆ, ಗರಂ ಚಹಾ ಮತ್ತು ಮಿರ್ಚಿ ಬಜ್ಜಿ ಎಲ್ಲವೂ ಸಹಜ ಜೀವನದ ಭಾಗವೇ. ಗರಿಷ್ಟ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದರೂ ಬಿಸಿಗಾಳಿ ಸೂಸುವ ಬಿಸಿಲಿನ ಬಗ್ಗೆ ಚಿಂತಿಸುವುದಿಲ್ಲ, ಗೊಣಗುವುದಿಲ್ಲ, ಶಾಪ ಹಾಕುವುದಿಲ್ಲ. ನಡು ಮಧ್ಯಾಹ್ನದಲ್ಲೂ ‘ಬರ್ರೀ, ಚಹಾ ಕುಡಿಯೋಣ’ ಎನ್ನುವ ಆಹ್ವಾನ ಕೂಡ ಇಲ್ಲಿ ಸಹಜವೇ!