<p><strong>ಕವಿತೆ</strong></p>.<p>1<br /> ಧ್ಯಾನಸ್ಥ ಮನ<br /> ಮೌನದಲ್ಲಿ ಹೆಪ್ಪುಗಟ್ಟಿದ<br /> ನೋವ ನುಂಗುತ್ತಿದೆ!<br /> ಗೋಡೆಯ ಮೇಲಿನ ಹಲ್ಲಿ<br /> ಹೊಂಚು ಹಾಕಿ, ಸಂಚು ಹೂಡಿ<br /> ನುಂಗುವಂತೆ ನೊಣ ನೊರಜು<br /> ಕೀಟ ಪರಿವಾರವ!</p>.<p>ಪಹರೆ ಕಾದಂತೆ ಕಾದು<br /> ರಕ್ಷಕ ಜೀವವೇ<br /> ಜೀವವನು ಹಿಡಿದು<br /> ಸಾವಿಗೆ ಭಕ್ಷೀಸು ಕೊಟ್ಟಂತೆ ಭಕ್ಷಿಸುತ್ತಿದೆ!</p>.<p>ಧ್ಯಾನಸ್ಥ ಮನ<br /> ಮೌನದಲ್ಲಿ ಹೆಪ್ಪುಗಟ್ಟಿದ<br /> ನೋವ ನುಂಗುತ್ತಿದೆ!</p>.<p> 2<br /> ತನ್ನೊಡಲ ನೂಲಿನಿಂದಲೇ ಜೇಡ<br /> ತನ್ನ ಸಾವಿನ ಬಲೆಯ<br /> ತಾನೇ ನೇದುಕೊಂಡಂತೆ<br /> ದೇಹಾಲಯದೊಳಗೇ<br /> ಬಂಧಿಯಾಗಿದೆ ಆತ್ಮ<br /> ದೇವನಾಗುವ<br /> ಪರಿಪಕ್ವತೆಯ ಸಿದ್ಧಿಗೆ<br /> ಹಾಕಬೇಕು ಹಲವು ಪಟ್ಟು<br /> ನಮಾಜು ಕೂತು,<br /> ಕುಂಡೆ ಮೇಲಕ್ಕೆತ್ತಿ<br /> ಅಂಡೂರಿ ನಮಸ್ಕರಿಸಿ<br /> ಸಾಷ್ಟಾಂಗದಿಂದ ಅಷ್ಟಾಂಗದವರೆಗಿನ<br /> ಅಭ್ಯಾಸಗತ ಸಂಧೀವಾತ ಪೀಡಿತ<br /> ದೇವಮಾನವರಿಗೆಲ್ಲ<br /> ಗ್ಯಾಸ್ಟ್ರೈಟೀಸು - ಹುಳಿತೇಗು<br /> ಕೂತುಂಡ ಸುಖದ<br /> ಮೂಲವ್ಯಾಧಿ ಮೊಳೆರೋಗ!<br /> ಆಮೂಲಾಗ್ರ ಕಿತ್ತು, ಕೆತ್ತಿ<br /> ಎಸೆಯದ ಹೊರತು<br /> ಇಲ್ಲ ಮುಕ್ತಿ!<br /> 3<br /> ತಿಮಿರಾಂಧ ಘನದ<br /> ಗಾಢ ಕತ್ತಲ ಕೂಪದಲ್ಲಿ<br /> ಆತ್ಮಸಾಕ್ಷಿಯ ಕತ್ತು ಹಿಚುಕಲು ಬರುವ<br /> ಹಲಾಲುಖೋರ ಪಾಪಪ್ರಜ್ಞೆಗಳು!</p>.<p>ಲಾಕಪ್ಡೆತ್ತಿಗೆ ಬಲಿಯಾದ<br /> ಕೈದಿಗಳ ಕೈಫಿಯತ್ತಿನಂತೆ<br /> ಕಾಯುತ್ತಿದೆ ಆತ್ಮಸಾಕ್ಷಿ<br /> ಕಾಲಪುರುಷನ ತೀರ್ಪಿಗೆ<br /> ಸಾಕ್ಷಿ ನುಡಿಯಲು!</p>.<p>ಚುನಾವಣಾ ಪ್ರಚಾರಕ್ಕೆ ಬಂದ<br /> ಗಾಂಧೀ ವೇಷಧಾರಿಗಳ<br /> ಗುಂಡಿಟ್ಟು ಕೊಲ್ಲಲು<br /> ಕಾದಿರುವ ಗೋಡ್ಸೆಗಳ<br /> ಬಂದೂಕಿನ ತುಂಬೆಲ್ಲಾ<br /> ತಣ್ಣಗೆ ಕಾದಿರುವ<br /> ಮತೀಯ ಗುಂಡುಗಳು!</p>.<p>4<br /> ಗಾಂಧಿಯ ಕನ್ನಡಕ ತೊಟ್ಟು<br /> ಹುಡುಕುತ್ತಿದ್ದೇನೆ<br /> ರಾಮನ ಮಂದಿರ<br /> ಬುದ್ಧನ ಸ್ಥೂಪ<br /> ಕ್ರಿಸ್ತನ ಇಗರ್ಜಿ<br /> ಅಲ್ಲಾನ ಮಸೀದಿಗಳ ಮೇಲೆಲ್ಲಾ<br /> ನೆತ್ತರ ಗುರುತುಗಳನ್ನು ಮಾಡಿದ<br /> ಪಾಪಿಗಳ ಪಾಪದ ಕೊಡ<br /> ಇನ್ನೂ ತುಂಬಲಿಲ್ಲವೇ ಪ್ರಭು ?<br /> ಎಂದು,<br /> ಮಂಡಿಯೂರಿ ಕೇಳುತ್ತಿದ್ದೇನೆ.</p>.<p>ನನ್ನ ಬೆನ್ನಿಗೇ ಗುರಿಯಿಟ್ಟ<br /> ಬಂದೂಕಿನ ನಳಿಕೆಯಿಂದ<br /> ಗುಂಡು ಸಿಡಿಯುವ ಮುನ್ನ<br /> ನಾನೊಂದು ಬೇಡುವೆನು<br /> ನಿಮ್ಮ ಧ್ಯಾನಸ್ಥ<br /> ಮನಸುಗಳ ಕತ್ತಲಲ್ಲಿ<br /> ಸಂಚು ಹೂಡುವ<br /> ಆತ್ಮಸಾಕ್ಷಿಗಳ ವಿಚಾರಣೆ<br /> ಇನ್ನಾದರೂ<br /> ಶುರುವಾಗಲಿ<br /> ಎಂದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತೆ</strong></p>.<p>1<br /> ಧ್ಯಾನಸ್ಥ ಮನ<br /> ಮೌನದಲ್ಲಿ ಹೆಪ್ಪುಗಟ್ಟಿದ<br /> ನೋವ ನುಂಗುತ್ತಿದೆ!<br /> ಗೋಡೆಯ ಮೇಲಿನ ಹಲ್ಲಿ<br /> ಹೊಂಚು ಹಾಕಿ, ಸಂಚು ಹೂಡಿ<br /> ನುಂಗುವಂತೆ ನೊಣ ನೊರಜು<br /> ಕೀಟ ಪರಿವಾರವ!</p>.<p>ಪಹರೆ ಕಾದಂತೆ ಕಾದು<br /> ರಕ್ಷಕ ಜೀವವೇ<br /> ಜೀವವನು ಹಿಡಿದು<br /> ಸಾವಿಗೆ ಭಕ್ಷೀಸು ಕೊಟ್ಟಂತೆ ಭಕ್ಷಿಸುತ್ತಿದೆ!</p>.<p>ಧ್ಯಾನಸ್ಥ ಮನ<br /> ಮೌನದಲ್ಲಿ ಹೆಪ್ಪುಗಟ್ಟಿದ<br /> ನೋವ ನುಂಗುತ್ತಿದೆ!</p>.<p> 2<br /> ತನ್ನೊಡಲ ನೂಲಿನಿಂದಲೇ ಜೇಡ<br /> ತನ್ನ ಸಾವಿನ ಬಲೆಯ<br /> ತಾನೇ ನೇದುಕೊಂಡಂತೆ<br /> ದೇಹಾಲಯದೊಳಗೇ<br /> ಬಂಧಿಯಾಗಿದೆ ಆತ್ಮ<br /> ದೇವನಾಗುವ<br /> ಪರಿಪಕ್ವತೆಯ ಸಿದ್ಧಿಗೆ<br /> ಹಾಕಬೇಕು ಹಲವು ಪಟ್ಟು<br /> ನಮಾಜು ಕೂತು,<br /> ಕುಂಡೆ ಮೇಲಕ್ಕೆತ್ತಿ<br /> ಅಂಡೂರಿ ನಮಸ್ಕರಿಸಿ<br /> ಸಾಷ್ಟಾಂಗದಿಂದ ಅಷ್ಟಾಂಗದವರೆಗಿನ<br /> ಅಭ್ಯಾಸಗತ ಸಂಧೀವಾತ ಪೀಡಿತ<br /> ದೇವಮಾನವರಿಗೆಲ್ಲ<br /> ಗ್ಯಾಸ್ಟ್ರೈಟೀಸು - ಹುಳಿತೇಗು<br /> ಕೂತುಂಡ ಸುಖದ<br /> ಮೂಲವ್ಯಾಧಿ ಮೊಳೆರೋಗ!<br /> ಆಮೂಲಾಗ್ರ ಕಿತ್ತು, ಕೆತ್ತಿ<br /> ಎಸೆಯದ ಹೊರತು<br /> ಇಲ್ಲ ಮುಕ್ತಿ!<br /> 3<br /> ತಿಮಿರಾಂಧ ಘನದ<br /> ಗಾಢ ಕತ್ತಲ ಕೂಪದಲ್ಲಿ<br /> ಆತ್ಮಸಾಕ್ಷಿಯ ಕತ್ತು ಹಿಚುಕಲು ಬರುವ<br /> ಹಲಾಲುಖೋರ ಪಾಪಪ್ರಜ್ಞೆಗಳು!</p>.<p>ಲಾಕಪ್ಡೆತ್ತಿಗೆ ಬಲಿಯಾದ<br /> ಕೈದಿಗಳ ಕೈಫಿಯತ್ತಿನಂತೆ<br /> ಕಾಯುತ್ತಿದೆ ಆತ್ಮಸಾಕ್ಷಿ<br /> ಕಾಲಪುರುಷನ ತೀರ್ಪಿಗೆ<br /> ಸಾಕ್ಷಿ ನುಡಿಯಲು!</p>.<p>ಚುನಾವಣಾ ಪ್ರಚಾರಕ್ಕೆ ಬಂದ<br /> ಗಾಂಧೀ ವೇಷಧಾರಿಗಳ<br /> ಗುಂಡಿಟ್ಟು ಕೊಲ್ಲಲು<br /> ಕಾದಿರುವ ಗೋಡ್ಸೆಗಳ<br /> ಬಂದೂಕಿನ ತುಂಬೆಲ್ಲಾ<br /> ತಣ್ಣಗೆ ಕಾದಿರುವ<br /> ಮತೀಯ ಗುಂಡುಗಳು!</p>.<p>4<br /> ಗಾಂಧಿಯ ಕನ್ನಡಕ ತೊಟ್ಟು<br /> ಹುಡುಕುತ್ತಿದ್ದೇನೆ<br /> ರಾಮನ ಮಂದಿರ<br /> ಬುದ್ಧನ ಸ್ಥೂಪ<br /> ಕ್ರಿಸ್ತನ ಇಗರ್ಜಿ<br /> ಅಲ್ಲಾನ ಮಸೀದಿಗಳ ಮೇಲೆಲ್ಲಾ<br /> ನೆತ್ತರ ಗುರುತುಗಳನ್ನು ಮಾಡಿದ<br /> ಪಾಪಿಗಳ ಪಾಪದ ಕೊಡ<br /> ಇನ್ನೂ ತುಂಬಲಿಲ್ಲವೇ ಪ್ರಭು ?<br /> ಎಂದು,<br /> ಮಂಡಿಯೂರಿ ಕೇಳುತ್ತಿದ್ದೇನೆ.</p>.<p>ನನ್ನ ಬೆನ್ನಿಗೇ ಗುರಿಯಿಟ್ಟ<br /> ಬಂದೂಕಿನ ನಳಿಕೆಯಿಂದ<br /> ಗುಂಡು ಸಿಡಿಯುವ ಮುನ್ನ<br /> ನಾನೊಂದು ಬೇಡುವೆನು<br /> ನಿಮ್ಮ ಧ್ಯಾನಸ್ಥ<br /> ಮನಸುಗಳ ಕತ್ತಲಲ್ಲಿ<br /> ಸಂಚು ಹೂಡುವ<br /> ಆತ್ಮಸಾಕ್ಷಿಗಳ ವಿಚಾರಣೆ<br /> ಇನ್ನಾದರೂ<br /> ಶುರುವಾಗಲಿ<br /> ಎಂದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>