ಇವು ತುಂಬಾ ಅಪರೂಪದ ಸೃಷ್ಟಿ. ಆದರೆ ನಮ್ಮ ಸಯಾಮಿ ಅವಳಿಗಳಷ್ಟೇ ಸಾಮಾನ್ಯದವು. ಆದರೆ ಅದಕ್ಕೆ ಭಾರತದಲ್ಲಿ ದೈವತ್ವವನ್ನು ಅಂಟಿಸಲಾಗಿದೆ.
ಸಾಮಾನ್ಯವಾಗಿ ಅವು ಹೆಚ್ಚು ದಿನ ಬದುಕಲಾರವು. ಕಾರಣ ಎರಡಕ್ಕೂ ಒಂದೇ ಸಲ ಹಸಿವಾಗಿದೆ ಎಂಬ ಭಾವನೆ ಬರಬೇಕು.
ಎರಡೂ ಒಂದೇ ಸಲಕ್ಕೆ ಆಹಾರ ಸೇವಿಸಲು ಮನಸ್ಸು ಮಾಡಬೇಕು. ಅಲ್ಲದೇ ಎರಡರಲ್ಲಿ ಯಾವುದು ಆಹಾರವನ್ನು ನುಂಗಬೇಕು ಎಂಬಲ್ಲಿಯತನಕ ಒಗ್ಗಟ್ಟು ಇರಬೇಕು. ಕೊಂಚ ಆ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಬಂದರೂ ಸಾವು ಖಚಿತ. ಸಾಮಾನ್ಯವಾಗಿ ಆಹಾರದ ವಿಚಾರಕ್ಕೆ ಕಿತ್ತಾಡಿಯೇ ಇವು ಸಾಯುತ್ತವೆ ಎನ್ನಲಾಗುತ್ತದೆ.