ಆ.21ರ ಸಾಪ್ತಾಹಿಕ ಪುರವಣಿ ಮುಸ್ಲಿಮರ ಹಬ್ಬದ ಚಿತ್ತಾರದಂತೆ ಮೂಡಿಬಂದಿದೆ. ಬಿ.ಎಂ.ಹನೀಫ್ ಅವರ `ಅಲ್ಲಾಹು ಅಕ್ಬರ್~ ಉತ್ತಮ ಲೇಖನ. ಮುಸ್ಲಿಂ ಬಾಂಧವರ ಹಬ್ಬದ ಉದ್ದೇಶ ಮತ್ತು ಆಚರಣೆಯ ವಿಧಾನವನ್ನು ಸಾಕಷ್ಟು ತಿಳಿಸಿತು. ಆದರೆ ಉಪವಾಸ ಏಕೆ ಮಾಡಬೇಕು ಎಂಬುದನ್ನು ಇನ್ನೂ ವಿವರವಾಗಿ ತಿಳಿಸಬೇಕಿತ್ತು.
`ಬೇಕಿರುವುದು ಬಳ್ಳಿಗಳು, ಬಾವುಟಗಳಲ್ಲ~ ಲೇಖನದಲ್ಲಿ ರಹಮತ್ ತರೀಕೆರೆಯವರು ಹಂಪಿಯ ಕಟ್ಟಿಗೆಖಾನ ಮಸೀದಿಯಲ್ಲಿರುವ ಕನ್ನಡ ಶಾಸನ ಮತ್ತು ಪಾವಜೀ ಅವರ ಕೈಬರಹವನ್ನು ಚಿತ್ರ ಸಹಿತ ಮಾಹಿತಿ ನೀಡಿದ್ದಾರೆ.
ಬಿ.ಎಸ್.ಮುಳ್ಳೂರ, ಹಲಗತ್ತಿ