<p><strong>ಭಾರತದ ಸಾಹಿತಿಗಳಿಗೆ ಕೊಡಮಾಡುವ ಉನ್ನತ ಪ್ರಶಸ್ತಿ ಜ್ಞಾನಪೀಠ. ಅದನ್ನು ಸ್ಥಾಪಿಸಿದ್ದು ಯಾರು?<br /> </strong><br /> 1961ರಲ್ಲಿ ಸಾಹು ಶಾಂತಿಪ್ರಸಾದ್ ಜೈನ್ ಹಾಗೂ ಅವರ ಪತ್ನಿ ರಮಾ ಜೈನ್ ಈ ಪ್ರಶಸ್ತಿಯನ್ನು ಸ್ಥಾಪಿಸಿದರು. ಅವರು `ದಿ ಟೈಮ್ಸ ಆಫ್ ಇಂಡಿಯಾ~ದ ಪ್ರಕಾಶಕರು. ಭಾರತೀಯ ಜ್ಞಾನಪೀಠ ಎಂಬ ಟ್ರಸ್ಟ್ ಹುಟ್ಟುಹಾಕಿ ಜ್ಞಾನಪೀಠ ಪ್ರಶಸ್ತಿ ನೀಡುವ ಪರಿಪಾಠವನ್ನು ಅವರು ಪ್ರಾರಂಭಿಸಿದರು. <br /> <br /> <strong>ಪ್ರಶಸ್ತಿಗೆ ಯಾರು ಅರ್ಹರು?<br /> </strong><br /> ಯಾವುದೇ ಭಾರತೀಯ ಭಾಷೆಯಲ್ಲಿ ಬರೆಯುವ ಭಾರತದ ಪೌರರೂ ಆಗಿರುವ ಸಾಹಿತಿ ಈ ಪ್ರಶಸ್ತಿ ಪರಿಗಣನೆಯ ವ್ಯಾಪ್ತಿಗೆ ಬರುತ್ತಾರೆ. ಮೊದಲು ಸಾಹಿತಿಗಳ ನಿರ್ದಿಷ್ಟ ಕೃತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಸಂದದ್ದು ಇದೆ. ಈಗ ದೀರ್ಘಕಾಲ ಅವರ ಬರವಣಿಗೆಯನ್ನು ಗಮನಿಸಿ ಪ್ರಶಸ್ತಿ ನೀಡಲಾಗುತ್ತದೆ. <br /> <br /> <strong>ಮೊದಲ ಜ್ಞಾನಪೀಠ ಪ್ರಶಸ್ತಿ ಸಂದದ್ದು ಯಾರಿಗೆ?<br /> <br /> </strong>ಮಲಯಾಳ ಸಾಹಿತಿ ಜಿ.ಸಂಕರ ಕುರುಪ್ ಮೊದಲ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದರು. ಒಡಕ್ಕುಳಲ್ (ಬಿದಿರಿನ ಕೊಳಲು) ಎಂಬ ಕವನ ಸಂಕಲನಕ್ಕೆ 1965ರಲ್ಲಿ ಅವರಿಗೆ ಪ್ರಶಸ್ತಿ ಸಂದಿತು. <br /> <br /> <strong>ಪ್ರಶಸ್ತಿಯು ಏನೇನನ್ನು ಒಳಗೊಂಡಿರುತ್ತದೆ?<br /> </strong><br /> ಏಳು ಲಕ್ಷ ರೂಪಾಯಿ, ಬಿನ್ನವತ್ತಳೆ ಹಾಗೂ ಸರಸ್ವತಿಯ ಕಂಚಿನ ಮೂರ್ತಿಯನ್ನು ಪ್ರಶಸ್ತಿಯು ಒಳಗೊಂಡಿದೆ. <br /> <br /> <strong>ಇತ್ತೀಚೆಗೆ ಯಾರಿಗೆ ಈ ಪ್ರಶಸ್ತಿ ಸಂದಿದೆ?<br /> </strong><br /> 2009ನೇ ಸಾಲಿನ ಪ್ರಶಸ್ತಿಯು ಹಿಂದಿ ಸಾಹಿತಿಗಳಾದ ಅಮರ್ಕಾಂತ್ ಹಾಗೂ ಶ್ರೀಲಾಲ್ ಶುಕ್ಲಾ ಅವರಿಗೆ ಸಂದಿತು. 2010ರ ಪ್ರಶಸ್ತಿಯ ಗೌರವ ಕನ್ನಡದ ಸಾಹಿತಿ ಚಂದ್ರಶೇಖರ ಕಂಬಾರರದ್ದಾಯಿತು. <br /> <br /> ಈ ವರ್ಷ ಜ್ಞಾನಪೀಠದ ಗೌರವಕ್ಕೆ ಒಂದು ಭಾಷೆಯ ಸಾಹಿತಿ ಆಯ್ಕೆಯಾಗುತ್ತಾರೆಂದಿಟ್ಟುಕೊಳ್ಳಿ. ಇನ್ನು ಮೂರು ವರ್ಷ ಆ ಭಾಷೆಯ ಯಾವ ಸಾಹಿತಿಯನ್ನೂ ಪ್ರಶಸ್ತಿಗೆ ಪರಿಗಣಿಸುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತದ ಸಾಹಿತಿಗಳಿಗೆ ಕೊಡಮಾಡುವ ಉನ್ನತ ಪ್ರಶಸ್ತಿ ಜ್ಞಾನಪೀಠ. ಅದನ್ನು ಸ್ಥಾಪಿಸಿದ್ದು ಯಾರು?<br /> </strong><br /> 1961ರಲ್ಲಿ ಸಾಹು ಶಾಂತಿಪ್ರಸಾದ್ ಜೈನ್ ಹಾಗೂ ಅವರ ಪತ್ನಿ ರಮಾ ಜೈನ್ ಈ ಪ್ರಶಸ್ತಿಯನ್ನು ಸ್ಥಾಪಿಸಿದರು. ಅವರು `ದಿ ಟೈಮ್ಸ ಆಫ್ ಇಂಡಿಯಾ~ದ ಪ್ರಕಾಶಕರು. ಭಾರತೀಯ ಜ್ಞಾನಪೀಠ ಎಂಬ ಟ್ರಸ್ಟ್ ಹುಟ್ಟುಹಾಕಿ ಜ್ಞಾನಪೀಠ ಪ್ರಶಸ್ತಿ ನೀಡುವ ಪರಿಪಾಠವನ್ನು ಅವರು ಪ್ರಾರಂಭಿಸಿದರು. <br /> <br /> <strong>ಪ್ರಶಸ್ತಿಗೆ ಯಾರು ಅರ್ಹರು?<br /> </strong><br /> ಯಾವುದೇ ಭಾರತೀಯ ಭಾಷೆಯಲ್ಲಿ ಬರೆಯುವ ಭಾರತದ ಪೌರರೂ ಆಗಿರುವ ಸಾಹಿತಿ ಈ ಪ್ರಶಸ್ತಿ ಪರಿಗಣನೆಯ ವ್ಯಾಪ್ತಿಗೆ ಬರುತ್ತಾರೆ. ಮೊದಲು ಸಾಹಿತಿಗಳ ನಿರ್ದಿಷ್ಟ ಕೃತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಸಂದದ್ದು ಇದೆ. ಈಗ ದೀರ್ಘಕಾಲ ಅವರ ಬರವಣಿಗೆಯನ್ನು ಗಮನಿಸಿ ಪ್ರಶಸ್ತಿ ನೀಡಲಾಗುತ್ತದೆ. <br /> <br /> <strong>ಮೊದಲ ಜ್ಞಾನಪೀಠ ಪ್ರಶಸ್ತಿ ಸಂದದ್ದು ಯಾರಿಗೆ?<br /> <br /> </strong>ಮಲಯಾಳ ಸಾಹಿತಿ ಜಿ.ಸಂಕರ ಕುರುಪ್ ಮೊದಲ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದರು. ಒಡಕ್ಕುಳಲ್ (ಬಿದಿರಿನ ಕೊಳಲು) ಎಂಬ ಕವನ ಸಂಕಲನಕ್ಕೆ 1965ರಲ್ಲಿ ಅವರಿಗೆ ಪ್ರಶಸ್ತಿ ಸಂದಿತು. <br /> <br /> <strong>ಪ್ರಶಸ್ತಿಯು ಏನೇನನ್ನು ಒಳಗೊಂಡಿರುತ್ತದೆ?<br /> </strong><br /> ಏಳು ಲಕ್ಷ ರೂಪಾಯಿ, ಬಿನ್ನವತ್ತಳೆ ಹಾಗೂ ಸರಸ್ವತಿಯ ಕಂಚಿನ ಮೂರ್ತಿಯನ್ನು ಪ್ರಶಸ್ತಿಯು ಒಳಗೊಂಡಿದೆ. <br /> <br /> <strong>ಇತ್ತೀಚೆಗೆ ಯಾರಿಗೆ ಈ ಪ್ರಶಸ್ತಿ ಸಂದಿದೆ?<br /> </strong><br /> 2009ನೇ ಸಾಲಿನ ಪ್ರಶಸ್ತಿಯು ಹಿಂದಿ ಸಾಹಿತಿಗಳಾದ ಅಮರ್ಕಾಂತ್ ಹಾಗೂ ಶ್ರೀಲಾಲ್ ಶುಕ್ಲಾ ಅವರಿಗೆ ಸಂದಿತು. 2010ರ ಪ್ರಶಸ್ತಿಯ ಗೌರವ ಕನ್ನಡದ ಸಾಹಿತಿ ಚಂದ್ರಶೇಖರ ಕಂಬಾರರದ್ದಾಯಿತು. <br /> <br /> ಈ ವರ್ಷ ಜ್ಞಾನಪೀಠದ ಗೌರವಕ್ಕೆ ಒಂದು ಭಾಷೆಯ ಸಾಹಿತಿ ಆಯ್ಕೆಯಾಗುತ್ತಾರೆಂದಿಟ್ಟುಕೊಳ್ಳಿ. ಇನ್ನು ಮೂರು ವರ್ಷ ಆ ಭಾಷೆಯ ಯಾವ ಸಾಹಿತಿಯನ್ನೂ ಪ್ರಶಸ್ತಿಗೆ ಪರಿಗಣಿಸುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>