<p>ಅಜಿತ್ ಗಾಜಿನ ಲೋಟವನ್ನು ಕೆಳಕ್ಕೆ ಬೀಳಿಸಿದ. ಅಮ್ಮ ನೋಡಿದಾಕ್ಷಣ `ಸಾರಿ~ ಅಮ್ಮ ಎಂದು ಹೇಳಿ ಹೊರಟು ಹೋದ. `ಗಾಜಿನ ಚೂರುಗಳನ್ನು ಎತ್ತಿ ನೆಲವನ್ನು ಸ್ವಚ್ಛಗೊಳಿಸು~ ಎಂದು ಅಮ್ಮ ಹೇಳಿದ್ದಕ್ಕೆ ಅವನು ಪ್ರತಿಕ್ರಿಯಿಸಲಿಲ್ಲ.<br /> <br /> ಅವನು ಹೀಗೆ ಮಾಡುತ್ತಿರುವುದು ಇದು ಮೊದಲೇನಲ್ಲ. ಏನೇ ತಪ್ಪು ಮಾಡಿದರೂ `ಸಾರಿ~ ಕೇಳಿದಾಕ್ಷಣ ತನ್ನ ಕೆಲಸ ಮುಗಿಯಿತು ಎಂದುಕೊಂಡು ಸುಮ್ಮನಾಗುತ್ತಿದ್ದ. <br /> ಅವನ ಗುಣವನ್ನು ಅಮ್ಮ ಎಷ್ಟೇ ತಿದ್ದಲು ಪ್ರಯತ್ನಿಸಿದರೂ ಅವನು ಸರಿಹೋಗಿರಲಿಲ್ಲ.<br /> <br /> ಒಂದು ದಿನ ಅವನ ತಾಯಿ ಬೇಕಂತಲೇ ಅವನಿಗೆ ಸುಡುಸುಡುವ ಬಿಸಿ ನೀರನ್ನು ಕುಡಿಯಲು ಕೊಟ್ಟರು. ಅದನ್ನು ಕುಡಿದು ಗಂಟಲು ಸುಟ್ಟಿತು ಎಂದು ಅವನು ಸಿಡುಕಿದ. ಆಗ ಅವನ ತಾಯಿ `ಸಾರಿ ಕಣೋ ಪುಟ್ಟ~ ಎಂದರು. <br /> <br /> `ಅಮ್ಮ ನನಗೆ ಗಂಟಲು ತುಂಬಾ ಉರಿಯುತ್ತಿದೆ~ ಎಂದ. <br /> `ಸಾರಿ~ ಎಂದು ಮತ್ತೊಮ್ಮೆ ಉಚ್ಚರಿಸಿದರು.<br /> ಅವನಿಗೆ ಸಿಟ್ಟು ಬಂದು `ಅಮ್ಮ ಸಾರಿ ಎಂದಷ್ಟೇ ಹೇಳಿದರೆ ಸಾಕೆ?~ ಎಂದ.<br /> <br /> ಆಗ ಅವರು `ಸಾರಿ ಹೇಳಿ ಸುಮ್ಮನಾಗಬಾರದು. ತಪ್ಪನ್ನು ಸರಿ ಮಾಡಲು ಕೊಂಚ ಪ್ರಯತ್ನಿಸಬೇಕು. ಇನ್ನು ಮುಂದೆ ಆ ತಪ್ಪು ಆಗದಂತೆ ಎಚ್ಚರವಹಿಸಬೇಕು. ಹೌದಲ್ಲ?~ ಎಂದರು.<br /> <br /> ಅವನು ಸಮ್ಮನಿದ್ದ.<br /> `ನಿನಗೆ ನೆನಪಿದೆಯೇ? ನೀನು ಹೀಗೆ ತುಂಬಾ ಸಲ `ಸಾರಿ~ ಎಂದಷ್ಟೇ ಹೇಳಿ ತಪ್ಪು ಒಪ್ಪಿಕೊಂಡಿರುವೆ. ಆದರೆ ಎಂದೂ ಆ ತಪ್ಪನ್ನು ಸ್ವಲ್ಪ ಮಟ್ಟಿಗಾದರೂ ಸರಿ ಮಾಡುವ ಪ್ರಯತ್ನ ಮಾಡಿಲ್ಲ. ಸಾರಿ ಎಂಬ ಪದ ಸಾರ್ಥಕವಾಗುವುದೇಆಗ~ ಎಂದರು.<br /> ಅಜಿತನಿಗೆ ತಪ್ಪಿನ ಅರಿವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಜಿತ್ ಗಾಜಿನ ಲೋಟವನ್ನು ಕೆಳಕ್ಕೆ ಬೀಳಿಸಿದ. ಅಮ್ಮ ನೋಡಿದಾಕ್ಷಣ `ಸಾರಿ~ ಅಮ್ಮ ಎಂದು ಹೇಳಿ ಹೊರಟು ಹೋದ. `ಗಾಜಿನ ಚೂರುಗಳನ್ನು ಎತ್ತಿ ನೆಲವನ್ನು ಸ್ವಚ್ಛಗೊಳಿಸು~ ಎಂದು ಅಮ್ಮ ಹೇಳಿದ್ದಕ್ಕೆ ಅವನು ಪ್ರತಿಕ್ರಿಯಿಸಲಿಲ್ಲ.<br /> <br /> ಅವನು ಹೀಗೆ ಮಾಡುತ್ತಿರುವುದು ಇದು ಮೊದಲೇನಲ್ಲ. ಏನೇ ತಪ್ಪು ಮಾಡಿದರೂ `ಸಾರಿ~ ಕೇಳಿದಾಕ್ಷಣ ತನ್ನ ಕೆಲಸ ಮುಗಿಯಿತು ಎಂದುಕೊಂಡು ಸುಮ್ಮನಾಗುತ್ತಿದ್ದ. <br /> ಅವನ ಗುಣವನ್ನು ಅಮ್ಮ ಎಷ್ಟೇ ತಿದ್ದಲು ಪ್ರಯತ್ನಿಸಿದರೂ ಅವನು ಸರಿಹೋಗಿರಲಿಲ್ಲ.<br /> <br /> ಒಂದು ದಿನ ಅವನ ತಾಯಿ ಬೇಕಂತಲೇ ಅವನಿಗೆ ಸುಡುಸುಡುವ ಬಿಸಿ ನೀರನ್ನು ಕುಡಿಯಲು ಕೊಟ್ಟರು. ಅದನ್ನು ಕುಡಿದು ಗಂಟಲು ಸುಟ್ಟಿತು ಎಂದು ಅವನು ಸಿಡುಕಿದ. ಆಗ ಅವನ ತಾಯಿ `ಸಾರಿ ಕಣೋ ಪುಟ್ಟ~ ಎಂದರು. <br /> <br /> `ಅಮ್ಮ ನನಗೆ ಗಂಟಲು ತುಂಬಾ ಉರಿಯುತ್ತಿದೆ~ ಎಂದ. <br /> `ಸಾರಿ~ ಎಂದು ಮತ್ತೊಮ್ಮೆ ಉಚ್ಚರಿಸಿದರು.<br /> ಅವನಿಗೆ ಸಿಟ್ಟು ಬಂದು `ಅಮ್ಮ ಸಾರಿ ಎಂದಷ್ಟೇ ಹೇಳಿದರೆ ಸಾಕೆ?~ ಎಂದ.<br /> <br /> ಆಗ ಅವರು `ಸಾರಿ ಹೇಳಿ ಸುಮ್ಮನಾಗಬಾರದು. ತಪ್ಪನ್ನು ಸರಿ ಮಾಡಲು ಕೊಂಚ ಪ್ರಯತ್ನಿಸಬೇಕು. ಇನ್ನು ಮುಂದೆ ಆ ತಪ್ಪು ಆಗದಂತೆ ಎಚ್ಚರವಹಿಸಬೇಕು. ಹೌದಲ್ಲ?~ ಎಂದರು.<br /> <br /> ಅವನು ಸಮ್ಮನಿದ್ದ.<br /> `ನಿನಗೆ ನೆನಪಿದೆಯೇ? ನೀನು ಹೀಗೆ ತುಂಬಾ ಸಲ `ಸಾರಿ~ ಎಂದಷ್ಟೇ ಹೇಳಿ ತಪ್ಪು ಒಪ್ಪಿಕೊಂಡಿರುವೆ. ಆದರೆ ಎಂದೂ ಆ ತಪ್ಪನ್ನು ಸ್ವಲ್ಪ ಮಟ್ಟಿಗಾದರೂ ಸರಿ ಮಾಡುವ ಪ್ರಯತ್ನ ಮಾಡಿಲ್ಲ. ಸಾರಿ ಎಂಬ ಪದ ಸಾರ್ಥಕವಾಗುವುದೇಆಗ~ ಎಂದರು.<br /> ಅಜಿತನಿಗೆ ತಪ್ಪಿನ ಅರಿವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>