ಹಿಂದೂಸ್ತಾನಿ ಸಂಗೀತದ ದಿಗ್ಗಜ ಪಂಡಿತ್ ಭೀಮಸೇನ ಜೋಶಿ ಅವರ ಬಗ್ಗೆ ಕನ್ನಡದಲ್ಲಿ ಈಗಾಗಲೇ ಕೆಲವು ಕೃತಿಗಳು ಹೊರಬಂದಿವೆ. ಸಂಗೀತಾಸಕ್ತರಾಗಿದ್ದು, ಈ ಕ್ಷೇತ್ರದ ಮೇರು ಗಾಯಕರಾದ ಕುಮಾರ ಗಂಧರ್ವ, ರಾಮಭಾವು ವಿಜಾಪುರೆ, ಬಸವರಾಜ ರಾಜಗುರು ಅವರ ಜೀವನಚರಿತ್ರೆಗಳನ್ನು ಬರೆದಿರುವ ಶಿರೀಷ್ ಜೋಶಿ ಅವರು ‘ಭಾರತ ರತ್ನ ಭೀಮಣ್ಣ’ ಕೃತಿಯಲ್ಲಿ ಭೀಮಸೇನ ಜೋಶಿ ಅವರ ಸಂಗೀತ ರಸಯಾನದ ಮೈಲುಗಲ್ಲುಗಳನ್ನು ಕಟ್ಟಿಕೊಟ್ಟಿದ್ದಾರೆ.