ಗ್ರಾಮ್ಯಭಾರತದಲ್ಲಿ ಇನ್ನೂ ಬರೆಯಬಹುದಾದ ಎಷ್ಟೊಂದು ಕಥೆಗಳಿವೆ ಎನ್ನುವುದನ್ನು ಗಮನಿಸಿದಾಗ ಅಚ್ಚರಿ ಉಂಟಾಗುತ್ತದೆ. ಗ್ರಾಮೀಣ ಬದುಕಿನ ನೋವು, ನಲಿವು, ದುಗುಡಗಳಿಗೆ ಧ್ವನಿ ನೀಡುವಾಗ ಕಥೆಗಾರರು ಅಲ್ಲಿಯ ಭಾಷಾಸೊಗಡನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇಲ್ಲಿಯ ಕಥೆಗಳಲ್ಲಿ ಘಟನೆಗಳು ಯಥೇಚ್ಛವಾಗಿವೆ. ಘಟನೆಗಳನ್ನು ಸ್ವಾರಸ್ಯ ಕೆಡದಂತೆ ಬರೆಯುವ ಕಲೆಯೂ ಕಥೆಗಾರರಿಗೆ ಸಿದ್ಧಿಸಿದೆ.