ಜೋಖಾಮೇಳ, ಜನಾಬಾಯಿ, ಕಬೀರ್, ರವಿದಾಸ್, ತುಕಾರಾಂ, ಕರ್ತಾಭಜ, ಫುಲೆ, ಅಯೋತಿ ದಾಸ್, ಪಂಡಿತಾ ರಮಾಬಾಯಿ, ಪೆರಿಯಾರ್, ಅಂಬೇಡ್ಕರ್ ಅವರ ಮೂಲಕ ದಲಿತ, ಬಹುಜನ ಮತ್ತು ಅನೇಕ ಮಹಿಳಾ ಬುದ್ಧಿಜೀವಿಗಳು ಜಾತಿರಹಿತ, ವರ್ಗರಹಿತ ಸಮಾಜದ ಆದರ್ಶವನ್ನು ಹೇಗೆ ಕಟ್ಟಿದರು ಎಂಬುದನ್ನು ಲೇಖಕರು ಬೇಗಂಪುರದಲ್ಲಿ ದಾಖಲಿಸಿದ್ದಾರೆ. ಜತೆಗೆ ಗಾಂಧೀ ಅವರ ರಾಮರಾಜ್ಯ ಹಾಗೂ ನೆಹರೂ ಅವರ ಆದರ್ಶದ ಪರಿಕಲ್ಪನೆಯನ್ನೂ ಸಮೀಕರಿಸಲಾಗಿದೆ.