ವ್ಯಕ್ತಿಯೊಬ್ಬನ ನೈಜ ಕಥೆಯಂತೆ ನಿರೂಪಣೆ ಸಾಗುತ್ತದೆ. ‘ಕಟ್ಟು ಕಥೆಯ ವ್ಯಾಪ್ತಿಯಿಂದ ಒಟ್ಟು ಕಥೆಯನ್ನು ಹೊರಗಿಡುವ ಎರಡು ಆಯಾಮಗಳನ್ನು ಇಲ್ಲಿನ ಕಥಾಶಿಲ್ಪದಿಂದ ಪ್ರತ್ಯೇಕಿಸಿ ಗುರುತಿಸಿದಾಗ ಹಾಲಾಡಿಯವರ ಕಥನ ಕಲೆಯ ವೈವಿಧ್ಯ ಮತ್ತು ವೈಶಿಷ್ಟ್ಯ ಮನದಟ್ಟಾಗುತ್ತದೆ. ಅಬ್ಬೆ ಜೇಡ, ಫ್ಲಾಮಿಂಗೋ ಹಕ್ಕಿಗಳು, ಕಲ್ಕೆರೆಯ ಕೆರೆ ಏರಿಯ ಮರದಲ್ಲಿ ಗೂಡು ಕಟ್ಟಿಕೊಂಡಿರುವ ಕೊಕ್ಕರೆಗಳಂತಹ ಸಾಕಷ್ಟು ಪ್ರಾಣಿ, ಪಕ್ಷಿಗಳು, ಬೆಟ್ಟ–ಗುಡ್ಡಗಳ ವಿವರಣೆ ಕಥೆಯ ಜೊತೆಗೆ ಸಿಗುತ್ತದೆ’ ಎಂದು ಬೆಳಗೋಡು ರಮೇಶ ಭಟ್ಟರು ಕೃತಿಯ ಬೆನ್ನುಡಿಯಲ್ಲಿ ಬರೆಯುತ್ತಾರೆ. ಸರಳ ಕಥೆಯೊಂದಿಗೆ ಸಾಕಷ್ಟು ಮಾಹಿತಿ ಒಳಗೊಂಡಿರುವ ಕೃತಿಯಿದು.