<p>ಚಿತ್ರದುರ್ಗ ಜಿಲ್ಲೆಯ ಜಡೇಕುಂಟೆ ಮೂಲದ ಮಂಜುನಾಥ್ ಅವರ ಎರಡನೇ ಕಥಾ ಸಂಕಲನ ‘ಕಾಡು ಕಾಯುವ ಮರ’. ಬಯಲುಸೀಮೆಯ ಜನರ ಬದುಕು, ಬವಣೆ, ಕಷ್ಟ-ಸುಖ, ಜನಜೀವನವು ಇಲ್ಲಿ ಕತೆಯ ಸ್ವರೂಪ ಪಡೆದಿವೆ. ಕತೆಗಾರರೇ ಮುನ್ನುಡಿಯಲ್ಲಿ ಹೇಳಿಕೊಂಡಿರುವಂತೆ ಗ್ರಾಮೀಣ ಬದುಕಿನ ಸಂಬಂಧಗಳು, ಅಲ್ಲಿನ ಜಾತಿ ವ್ಯವಸ್ಥೆ, ಜಿದ್ದು, ವೈಷಮ್ಯಗಳು ಈ ಕಥಾ ಸಂಕಲನದ ಎಲ್ಲಾ ಕತೆಗಳಲ್ಲೂ ಕಾಣಸಿಗುತ್ತದೆ.</p>.<p>ಅಪ್ಪನ ತಪ್ಪಡಿ, ದೇಗುಲದ ಗಂಟೆ ಮೊಳಗಲಿಲ್ಲ ಕತೆಗಳು ಗ್ರಾಮೀಣ ಭಾಗದ ದಲಿತರು ಹಾಗೂ ಮೇಲ್ಜಾತಿಯ ನಡುವಿನ ದೇವರ ಸಂಬಂಧವನ್ನು ಅನಾವರಣ ಮಾಡುತ್ತವೆ. ಈ ಕತೆಗಳು ದೇವರನ್ನು ಕೂಡ ಜಾತಿಯ ಹಿಡಿತದಲ್ಲಿಟ್ಟುರುವುದನ್ನು ಕಟ್ಟಿಕೊಡುತ್ತವೆ. <br>ಕಾಡು ಕಾಯುವ ಮರ, ಉಯ್ಯಾಲೆ ಕತೆಗಳು ಗ್ರಾಮೀಣ ಭಾಗದ ವಿಭಿನ್ನ ರೀತಿಯ ಪ್ರೇಮ ಕತೆಗಳಿಂದ ಗಮನ ಸೆಳೆಯುತ್ತವೆ.</p>.<p>ಮೊಳಕೆಯೊಡೆಯಿತು ಬೀಜ, ಗಂಗಣ್ಣನ ಸೈಕಲ್ ಶಾಪ್, ಕವಲು ದಾರಿಯ ತಿರುವು ಕತೆಗಳು ಗ್ರಾಮೀಣ ಭಾಗದಿಂದ ಜೀವನ ಸಾಗಿಸಲು ನಗರ ಬದುಕಿಗೆ ತಿರುಗಿಕೊಂಡವರ ಬದುಕಿನ ಬವಣೆಗಳ ಸುತ್ತಾ ಸುತ್ತುತ್ತವೆ.</p>.<p>ಅಪ್ಪನ ತಪ್ಪಡಿ, ಕಳೆದು ಹೋದವಳ ಗುರುತು, ದೇಗುಲದ ಗಂಟೆ ಮೊಳಗಲಿಲ್ಲ, ಕಾಡು ಕಾಯುವ ಮರ, ಗಂಗಣ್ಣನ ಸೈಕಲ್ ಶಾಪ್ ಕತೆಗಳು ಈ ಸಂಕಲನದ ಉತ್ತಮ ಕತೆಗಳಾಗಿವೆ.</p>.<p>ಸಂಕಲನದ ಒಂದೆರಡು ಕತೆಗಳ ನಿರೂಪಣಾ ಶೈಲಿಯನ್ನು ಬದಲಾವಣೆ ಮಾಡಿದ್ದರೆ, ಇನ್ನೂ ಉತ್ತಮ ಕತೆಗಳಾಗುವ ಸಾಧ್ಯತೆಯಿತ್ತು. ಬಯಲುಸೀಮೆಯ ಗ್ರಾಮೀಣ ಭಾಷೆ ಮತ್ತು ಕಥಾ ವಸ್ತುಗಳನ್ನು ಈ ಸಂಕಲನದ ಕತೆಗಳು ಹೊಂದಿವೆ. ದಲಿತ ಬಂಡಾಯ ಸಾಹಿತ್ಯದ ನೆಲೆಗಟ್ಟಿನಲ್ಲಿ ಈ ಕಥನಗಳು ರೂಪುಗೊಂಡಿವೆ.</p>.<p><strong>ಪುಸ್ತಕ:</strong> ಕಾಡು ಕಾಯುವ ಮರ </p><p><strong>ಲೇ:</strong> ಜಡೇಕುಂಟೆ ಮಂಜುನಾಥ್</p><p><strong>ಪ್ರ:</strong> ಮೈತ್ರಿ ಪುಸ್ತಕ ಮನೆ</p><p><strong>ಸಂ</strong>: 9380593488</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರದುರ್ಗ ಜಿಲ್ಲೆಯ ಜಡೇಕುಂಟೆ ಮೂಲದ ಮಂಜುನಾಥ್ ಅವರ ಎರಡನೇ ಕಥಾ ಸಂಕಲನ ‘ಕಾಡು ಕಾಯುವ ಮರ’. ಬಯಲುಸೀಮೆಯ ಜನರ ಬದುಕು, ಬವಣೆ, ಕಷ್ಟ-ಸುಖ, ಜನಜೀವನವು ಇಲ್ಲಿ ಕತೆಯ ಸ್ವರೂಪ ಪಡೆದಿವೆ. ಕತೆಗಾರರೇ ಮುನ್ನುಡಿಯಲ್ಲಿ ಹೇಳಿಕೊಂಡಿರುವಂತೆ ಗ್ರಾಮೀಣ ಬದುಕಿನ ಸಂಬಂಧಗಳು, ಅಲ್ಲಿನ ಜಾತಿ ವ್ಯವಸ್ಥೆ, ಜಿದ್ದು, ವೈಷಮ್ಯಗಳು ಈ ಕಥಾ ಸಂಕಲನದ ಎಲ್ಲಾ ಕತೆಗಳಲ್ಲೂ ಕಾಣಸಿಗುತ್ತದೆ.</p>.<p>ಅಪ್ಪನ ತಪ್ಪಡಿ, ದೇಗುಲದ ಗಂಟೆ ಮೊಳಗಲಿಲ್ಲ ಕತೆಗಳು ಗ್ರಾಮೀಣ ಭಾಗದ ದಲಿತರು ಹಾಗೂ ಮೇಲ್ಜಾತಿಯ ನಡುವಿನ ದೇವರ ಸಂಬಂಧವನ್ನು ಅನಾವರಣ ಮಾಡುತ್ತವೆ. ಈ ಕತೆಗಳು ದೇವರನ್ನು ಕೂಡ ಜಾತಿಯ ಹಿಡಿತದಲ್ಲಿಟ್ಟುರುವುದನ್ನು ಕಟ್ಟಿಕೊಡುತ್ತವೆ. <br>ಕಾಡು ಕಾಯುವ ಮರ, ಉಯ್ಯಾಲೆ ಕತೆಗಳು ಗ್ರಾಮೀಣ ಭಾಗದ ವಿಭಿನ್ನ ರೀತಿಯ ಪ್ರೇಮ ಕತೆಗಳಿಂದ ಗಮನ ಸೆಳೆಯುತ್ತವೆ.</p>.<p>ಮೊಳಕೆಯೊಡೆಯಿತು ಬೀಜ, ಗಂಗಣ್ಣನ ಸೈಕಲ್ ಶಾಪ್, ಕವಲು ದಾರಿಯ ತಿರುವು ಕತೆಗಳು ಗ್ರಾಮೀಣ ಭಾಗದಿಂದ ಜೀವನ ಸಾಗಿಸಲು ನಗರ ಬದುಕಿಗೆ ತಿರುಗಿಕೊಂಡವರ ಬದುಕಿನ ಬವಣೆಗಳ ಸುತ್ತಾ ಸುತ್ತುತ್ತವೆ.</p>.<p>ಅಪ್ಪನ ತಪ್ಪಡಿ, ಕಳೆದು ಹೋದವಳ ಗುರುತು, ದೇಗುಲದ ಗಂಟೆ ಮೊಳಗಲಿಲ್ಲ, ಕಾಡು ಕಾಯುವ ಮರ, ಗಂಗಣ್ಣನ ಸೈಕಲ್ ಶಾಪ್ ಕತೆಗಳು ಈ ಸಂಕಲನದ ಉತ್ತಮ ಕತೆಗಳಾಗಿವೆ.</p>.<p>ಸಂಕಲನದ ಒಂದೆರಡು ಕತೆಗಳ ನಿರೂಪಣಾ ಶೈಲಿಯನ್ನು ಬದಲಾವಣೆ ಮಾಡಿದ್ದರೆ, ಇನ್ನೂ ಉತ್ತಮ ಕತೆಗಳಾಗುವ ಸಾಧ್ಯತೆಯಿತ್ತು. ಬಯಲುಸೀಮೆಯ ಗ್ರಾಮೀಣ ಭಾಷೆ ಮತ್ತು ಕಥಾ ವಸ್ತುಗಳನ್ನು ಈ ಸಂಕಲನದ ಕತೆಗಳು ಹೊಂದಿವೆ. ದಲಿತ ಬಂಡಾಯ ಸಾಹಿತ್ಯದ ನೆಲೆಗಟ್ಟಿನಲ್ಲಿ ಈ ಕಥನಗಳು ರೂಪುಗೊಂಡಿವೆ.</p>.<p><strong>ಪುಸ್ತಕ:</strong> ಕಾಡು ಕಾಯುವ ಮರ </p><p><strong>ಲೇ:</strong> ಜಡೇಕುಂಟೆ ಮಂಜುನಾಥ್</p><p><strong>ಪ್ರ:</strong> ಮೈತ್ರಿ ಪುಸ್ತಕ ಮನೆ</p><p><strong>ಸಂ</strong>: 9380593488</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>