ಕನ್ನಡ ರಂಗಭೂಮಿಯ ಆಸ್ತಿಯೇ ಆಗಿದ್ದ ಏಣಗಿ ಬಾಳಪ್ಪನವರ ಆತ್ಮಕಥನವಿದು. ಆ ದಿನದ ನಾಟಕ, ಅದರ ಗಳಿಕೆ, ಅವರು ಭೇಟಿಯಾದ ವ್ಯಕ್ತಿಗಳ ಕುರಿತು, ತಾವು ಭೇಟಿ ನೀಡಿದ ಊರು, ಸ್ಥಳಗಳ ಬಗ್ಗೆ ತಮ್ಮ ಆತ್ಮಕಥನದಲ್ಲಿ ಬಾಳಪ್ಪ ದಾಖಲಿಸಿದ್ದಾರೆ.
ಕುಟುಂಬದ ಪ್ರೀತಿ; ರಂಗಸಂಸ್ಥೆಗಳೊಂದಿಗಿನ ಒಡನಾಟ; ಭಾಷಣ–ಪ್ರಶಸ್ತಿಗಳು; ಹೀಗೆ ಮೂರು ಭಾಗಗಳಾಗಿ ಅವರ ರಂಗಯಾತ್ರೆಯ ನೆನಪುಗಳು ಈ ಕೃತಿಯಲ್ಲಿ ಆವರಿಸಿಕೊಂಡಿವೆ. ಏಣಗಿ ಬಾಳಪ್ಪ ಅವರ ಕುರಿತು ಇದುವರೆಗೆ ಪ್ರಕಟವಾದ ಕೃತಿಗಳಿಗಿಂತ ಇದು ವಿಭಿನ್ನ ಮತ್ತು ವಿಶಿಷ್ಟವಾಗಿದೆ ಎನ್ನಬಹುದು. ಏಕೆಂದರೆ ಬಾಳಪ್ಪ ಅವರ ನೆನಪುಗಳನ್ನು ಸ್ವತಃ ದಾಖಲಿಸಿದ್ದು, ಪಾರ್ಶ್ವವಾಯುವಿಗೆ ತುತ್ತಾದ ನಂತರ ರಂಗಚಟುವಟಿಕೆಯ ಅನುಭವಗಳನ್ನು ಅವರು ತಮ್ಮ ಮೊಮ್ಮಕ್ಕಳ ನೆರವಿನಿಂದ ದಾಖಲು ಮಾಡಿದ್ದಾರೆ.