ಬಿಹಾರ ರಾಜ್ಯಕ್ಕೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ಹಾಗೂ 36 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿದ್ದರೂ, ಕರ್ಪೂರಿ ಅವರ ಬಳಿ ಕೊನೆಯಲ್ಲಿದ್ದಿದ್ದು ₹ 33 ಸಾವಿರ ಮಾತ್ರ! ಸಮಾಜವಾದಿ ಆಂದೋಲನದ ಅಲೆಮಾರಿಯಾಗಿದ್ದ ಕರ್ಪೂರಿ ಅವರು ಬಿಹಾರದ ಕುಗ್ರಾಮದಲ್ಲಿದ್ದ ಅವರ ಗುಡಿಸಲ ಮನೆಯನ್ನು ಪಕ್ಕಾ ಮನೆಯನ್ನಾಗಿ ಮಾಡಿಸಲಾಗದೆ ನಿರ್ಗಮಿಸಿದ ನಿಸ್ವಾರ್ಥ ಜನ ಹೋರಾಟಗಾರ. ರಾಜಕೀಯ ಎಂಬ ಶಬ್ದ ಬೇರೆಯೇ ಕಲ್ಪನೆ ನೀಡುವ ಈ ಕಾಲಘಟ್ಟದಲ್ಲಿ ಕರ್ಪೂರಿ ಠಾಕೂರ್ ಅವರ ಬದುಕು ಮತ್ತು ಹೋರಾಟ ಕುರಿತ ಈ ಕೃತಿ ಅವರ ಹೋರಾಟ ಮತ್ತು ಆಲೋಚನೆಗಳ ಪರಿಚಯ ಮಾಡಿಕೊಡಲಿದೆ.