<p>ಗ್ರಾಮ ಭಾರತದ ಸಮಕಾಲೀನ ಮಾನವೀಯ ಘಟನೆಗಳನ್ನು ಕತೆಯಾಗಿಸಿ ಮಕ್ಕಳಿಗೆ ತಿಳಿಸುವ ಯತ್ನ ವಿರಳವೇ. ಪಿ. ಸಾಯಿನಾಥ್ ಅವರ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (PARI) ಅಂತಹ ಕೆಲಸವನ್ನು ವೆಬ್ ಪೋರ್ಟಲ್ ಮೂಲಕ ಅದಾಗಲೇ ಪ್ರಾರಂಭಿಸಿದೆ. ಆ ಕಥಾಸರಣಿಯ ಐದನ್ನು ಬಹುರೂಪಿ ಪ್ರಕಾಶನ ಕಿರು ಪುಸ್ತಕಗಳಾಗಿ ಕನ್ನಡಕ್ಕೆ ತಂದಿದೆ.</p>.<p>ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ‘ಮರಳಿ ಮಣ್ಣಿಗೆ’ (ಪ್ರೀತಿ ಡೇವಿಡ್, ಕನ್ನಡಕ್ಕೆ: ರಾಜಾರಾಂ ತಲ್ಲೂರು, ಬೆಲೆ: ₹125), ಆಂಧ್ರದಿಂದ ಕೊಚ್ಚಿಗೆ ಕೆಲಸ ಹುಡುಕಿಕೊಂಡು ಟಿಕೆಟ್ ಇಲ್ಲದೆ ಪಯಣಿಸುವ ಆರು ಮಂದಿಯ ಆಸಕ್ತಿಕರ ಕಥನ ‘ಟಿಕೆಟ್ ಇಲ್ಲ, ಪ್ರಯಾಣ ನಿಲ್ಲಲ್ಲ’ (ಸುಬೂಹಿ ಜಿವಾನಿ, ಕನ್ನಡಕ್ಕೆ: ಅಬ್ಬೂರು ಪ್ರಕಾಶ್, ಬೆಲೆ: ₹125), ಅಂಗವೈಕಲ್ಯ ಮೀರಿ ಪ್ಯಾರಾಲಂಪಿಕ್ನಲ್ಲಿ ಪಾಲ್ಗೊಳ್ಳುವ ಮಟ್ಟಕ್ಕೆ ಬೆಳೆಯುವ ಹುಡುಗಿಯ ಸ್ಫೂರ್ತಿದಾಯಕ ವಿಷಯದ ‘ಗೆದ್ದೇ ಬಿಟ್ಟೆ...!’ (ನಿವೇಧಾ ಗಣೇಶ್, ಕನ್ನಡಕ್ಕೆ: ಸಂತೋಷ ತಾಮ್ರಪರ್ಣಿ), ತಮಿಳುನಾಡಿನಲ್ಲಿ ಸಂಪಂಗಿ ಫಾರ್ಮ್ ನೋಡಿಕೊಳ್ಳುತ್ತಲೇ ಸಿಂಗಲ್ ಪೇರೆಂಟ್ ಆಗಿ ಯಶಸ್ಸು ಸಾಧಿಸುವ ವ್ಯಕ್ತಿಯ ಹೂರಣ ಇರುವ ‘ನಂದಿನಿ ಎಂಬ ಜಾಣೆ’ (ಅಪರ್ಣಾ ಕಾರ್ತಿಕೇಯನ್, ಕನ್ನಡಕ್ಕೆ: ವಿ. ಗಾಯತ್ರಿ, ಬೆಲೆ: ₹150), ಎಚ್ಐವಿ ಇರುವ ಮಕ್ಕಳೇ ಕಲಿಲಯುವ ಶಾಲೆಯಲ್ಲಿ ಗುರಿ ಇಟ್ಟುಕೊಂಡು ಮುನ್ನಡೆಯುವ ಮಗುವಿನ ಮನಕಲಕುವ ಕಥೆಯ ‘ಸ್ನೇಹಗ್ರಾಮದ ಸಂಸತ್ತು’ (ವಿಶಾಖ ಜಾರ್ಜ್, ಕನ್ನಡಕ್ಕೆ: ಪ್ರಸಾದ್ ನಾಯ್ಕ್, ಬೆಲೆ: ₹ 150) ಬಹುರೂಪಿ ಕನ್ನಡೀಕರಿಸಿರುವ ಪುಟ್ಟ ಕೃತಿಗಳ ಗುಚ್ಛ. </p>.<p>ಅಚ್ಚುಕಟ್ಟಾದ ಅನುವಾದ, ಸೊಗಸಾದ ಮುಖಪುಟಗಳು ಕೃತಿಯನ್ನು ಅಂದಗಾಣಿಸಿವೆ. ತಮ್ಮದೇ ಜಗತ್ತಿನಲ್ಲಿ ಇರುವ ಮಕ್ಕಳಿಗೆ ಸ್ಫೂರ್ತಿ ತುಂಬುವ, ಚಿಂತನೆಗೆ ಹಚ್ಚುವ, ವಿವೇಕ ವರ್ಧಿಸುವ ಇಂತಹ ಕಥೆಗಳು ನಿಜಕ್ಕೂ ಟಾನಿಕ್ನಂತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗ್ರಾಮ ಭಾರತದ ಸಮಕಾಲೀನ ಮಾನವೀಯ ಘಟನೆಗಳನ್ನು ಕತೆಯಾಗಿಸಿ ಮಕ್ಕಳಿಗೆ ತಿಳಿಸುವ ಯತ್ನ ವಿರಳವೇ. ಪಿ. ಸಾಯಿನಾಥ್ ಅವರ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (PARI) ಅಂತಹ ಕೆಲಸವನ್ನು ವೆಬ್ ಪೋರ್ಟಲ್ ಮೂಲಕ ಅದಾಗಲೇ ಪ್ರಾರಂಭಿಸಿದೆ. ಆ ಕಥಾಸರಣಿಯ ಐದನ್ನು ಬಹುರೂಪಿ ಪ್ರಕಾಶನ ಕಿರು ಪುಸ್ತಕಗಳಾಗಿ ಕನ್ನಡಕ್ಕೆ ತಂದಿದೆ.</p>.<p>ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ‘ಮರಳಿ ಮಣ್ಣಿಗೆ’ (ಪ್ರೀತಿ ಡೇವಿಡ್, ಕನ್ನಡಕ್ಕೆ: ರಾಜಾರಾಂ ತಲ್ಲೂರು, ಬೆಲೆ: ₹125), ಆಂಧ್ರದಿಂದ ಕೊಚ್ಚಿಗೆ ಕೆಲಸ ಹುಡುಕಿಕೊಂಡು ಟಿಕೆಟ್ ಇಲ್ಲದೆ ಪಯಣಿಸುವ ಆರು ಮಂದಿಯ ಆಸಕ್ತಿಕರ ಕಥನ ‘ಟಿಕೆಟ್ ಇಲ್ಲ, ಪ್ರಯಾಣ ನಿಲ್ಲಲ್ಲ’ (ಸುಬೂಹಿ ಜಿವಾನಿ, ಕನ್ನಡಕ್ಕೆ: ಅಬ್ಬೂರು ಪ್ರಕಾಶ್, ಬೆಲೆ: ₹125), ಅಂಗವೈಕಲ್ಯ ಮೀರಿ ಪ್ಯಾರಾಲಂಪಿಕ್ನಲ್ಲಿ ಪಾಲ್ಗೊಳ್ಳುವ ಮಟ್ಟಕ್ಕೆ ಬೆಳೆಯುವ ಹುಡುಗಿಯ ಸ್ಫೂರ್ತಿದಾಯಕ ವಿಷಯದ ‘ಗೆದ್ದೇ ಬಿಟ್ಟೆ...!’ (ನಿವೇಧಾ ಗಣೇಶ್, ಕನ್ನಡಕ್ಕೆ: ಸಂತೋಷ ತಾಮ್ರಪರ್ಣಿ), ತಮಿಳುನಾಡಿನಲ್ಲಿ ಸಂಪಂಗಿ ಫಾರ್ಮ್ ನೋಡಿಕೊಳ್ಳುತ್ತಲೇ ಸಿಂಗಲ್ ಪೇರೆಂಟ್ ಆಗಿ ಯಶಸ್ಸು ಸಾಧಿಸುವ ವ್ಯಕ್ತಿಯ ಹೂರಣ ಇರುವ ‘ನಂದಿನಿ ಎಂಬ ಜಾಣೆ’ (ಅಪರ್ಣಾ ಕಾರ್ತಿಕೇಯನ್, ಕನ್ನಡಕ್ಕೆ: ವಿ. ಗಾಯತ್ರಿ, ಬೆಲೆ: ₹150), ಎಚ್ಐವಿ ಇರುವ ಮಕ್ಕಳೇ ಕಲಿಲಯುವ ಶಾಲೆಯಲ್ಲಿ ಗುರಿ ಇಟ್ಟುಕೊಂಡು ಮುನ್ನಡೆಯುವ ಮಗುವಿನ ಮನಕಲಕುವ ಕಥೆಯ ‘ಸ್ನೇಹಗ್ರಾಮದ ಸಂಸತ್ತು’ (ವಿಶಾಖ ಜಾರ್ಜ್, ಕನ್ನಡಕ್ಕೆ: ಪ್ರಸಾದ್ ನಾಯ್ಕ್, ಬೆಲೆ: ₹ 150) ಬಹುರೂಪಿ ಕನ್ನಡೀಕರಿಸಿರುವ ಪುಟ್ಟ ಕೃತಿಗಳ ಗುಚ್ಛ. </p>.<p>ಅಚ್ಚುಕಟ್ಟಾದ ಅನುವಾದ, ಸೊಗಸಾದ ಮುಖಪುಟಗಳು ಕೃತಿಯನ್ನು ಅಂದಗಾಣಿಸಿವೆ. ತಮ್ಮದೇ ಜಗತ್ತಿನಲ್ಲಿ ಇರುವ ಮಕ್ಕಳಿಗೆ ಸ್ಫೂರ್ತಿ ತುಂಬುವ, ಚಿಂತನೆಗೆ ಹಚ್ಚುವ, ವಿವೇಕ ವರ್ಧಿಸುವ ಇಂತಹ ಕಥೆಗಳು ನಿಜಕ್ಕೂ ಟಾನಿಕ್ನಂತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>