ಉತ್ತರ ಕರ್ನಾಟಕದ ಪ್ರಸಿದ್ಧ ವಕೀಲರಲ್ಲಿ ಎಚ್.ಎಂ. ವೀರಭದ್ರಯ್ಯನವರೂ ಒಬ್ಬರು. ಸ್ವಾತಂತ್ರ್ಯ ಪೂರ್ವದಲ್ಲೇ ಕಾನೂನು ಪದವಿಯನ್ನು ಗಳಿಸಿ, ವಕೀಲಿ ವೃತ್ತಿಯಲ್ಲಿ ತೊಡಗಿದ ಅವರು, ಸಮಾಜ ಸೇವೆಯನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡವರು. ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡವರು. ಇಂತಹ ಸಾಧಕರ ಬದುಕು–ಬರಹದ ಮೇಲೆ ಬೆಳಕು ಚೆಲ್ಲುವ ಕಾವ್ಯಶ್ರೀ ಜಿ. ಅವರ ಕೃತಿಯೇ ‘ಬೆಳಕಿನ ತೇರು’.