ತೋಚಿದ್ದು ಗೀಚಿದ್ದು... ನೆನೆದಿದ್ದು ಮರೆತಿದ್ದು... ಅದೇ ಬರವಣಿಗೆ. ಹೀಗೆ ಚುಟುಕು ಕವನ ಸಂಕಲನದ ಒಟ್ಟಾರೆ ಆಶಯ ಮತ್ತು ವಸ್ತುವನ್ನು ಅಂಥದ್ದೇ ಸಾಲಿನಲ್ಲಿ ಹೇಳಿದ್ದಾರೆ ಸುರೇಶ್ ಎಸ್.ಹೌದು, ಬಹುತೇಕ ಸಾಲುಗಳು ತೋಚಿದಂತೇ ಗೀಚಿದ ಹಾಗೆಯೇ ಇವೆ. ಅನೇಕವು ಅರ್ಥವತ್ತಾಗಿಯೂ ಇವೆ. ಲೌಕಿಕದ ನೋಟಗಳು, ಸಾಂಸಾರಿಕ ವಸ್ತುಗಳು, ಅಧ್ಯಾತ್ಮದ ಆಯಾಮಗಳು, ಗಾಢ ಚಿಂತನೆಗಳು ಪುಟ್ಟ ಸಾಲುಗಳಲ್ಲಿ ಹರಳುಗಟ್ಟಿವೆ.‘ಮಡದಿ ಮೂದಲಿಸಿದಾಗ ಮಕ್ಕಳು ಸಿಡುಕಿದಾಗ ಮಾತಿಗೆ ಬೆಲೆ ಇಲ್ಲವಾದಾಗ ಶ್ವಾನವೂ ಮೂಸದಿದ್ದಾಗ ಬಾಳಿಗೆ ಸಿದ್ಧ ಪಥ – ವಾನಪ್ರಸ್ಥ...’, ಪಾಣಿಗ್ರಹಣ– ಪ್ರಪಂಚದ ಅತ್ಯಂತ ಪ್ರಬಲ ವಶೀಕರಣ, ವೈಕುಂಠ ಸಮಾರಾಧನೆ ಎಂದರೆ ‘ವೈಕುಂಠದ ಪಾಯಸ ನಾಲಗೆಗೆ ಬಿದ್ದ ಮಾರನೆಯ ದಿನ ಆಸ್ತಿ ಪತ್ರಗಳ ಹುಡುಕಾಟ...’, ಸತ್ತಾಗ ಒಂಟಿ ದೀಪಕ್ಕೆ ಎಳ್ಳೆಣ್ಣೆ... ಹೇಗೆ ಬದುಕಿದರೂ ಕೊನೆಗೆ ಮಣ್ಣೇ... ಹೀಗೆ ಲೌಕಿಕ– ಪಾರಮಾರ್ಥಿಕ ಚಿಂತನೆಗಳು, ಅಲ್ಲಲ್ಲಿ ತುಂಟ ಪಂಚ್ಗಳು ಓದಿಸಿಕೊಂಡು ಹೋಗುತ್ತವೆ.