<p><span style="font-size:36px;">ಭಾ</span>ಷಾವಿಜ್ಞಾನಿಗಳಾದ ಡಿ.ಎನ್. ಶಂಕರಭಟ್ಟರು ರೂಪಿಸಿದ ಹೊಸ ಬರಹದಲ್ಲಿ ಬರೆಯಲಾದ ಈ ಪುಸ್ತಕ ವಿಶಿಷ್ಟವಾಗಿಯೂ, ಕುತೂಹಲಕಾರಿಯಾಗಿಯೂ ಇದೆ. ಇದು ಮೊದಲಿಗೆ ಕನ್ನಡತನವನ್ನು ಹುಡುಕುವ ಬರಹವಾಗಿದ್ದು, ಸಂಸ್ಕೃತ ಪದಗಳನ್ನು, ಕನ್ನಡದ ಮಹಾಪ್ರಾಣ ಅಕ್ಷರಗಳನ್ನು ತ್ಯಜಿಸಿದ ಹೊಸ ಬರಹದಲ್ಲಿ ರಚಿಸಲಾದ ಬರಹವಾಗಿದೆ.<br /> <br /> `ಕನ್ನಡಿಗರು ಯಾರು? ಅವರ ನುಡಿ, ಮತ್ತವರ ಸಂಸ್ಕೃತಿ ಎಂಥದ್ದು' ಎಂಬುದನ್ನು ಲೇಖಕ ಎಚ್.ಎಸ್. ರಾಜ್ ತಮ್ಮ ಈ ಪುಸ್ತಕದಲ್ಲಿ ಶೋಧಿಸುತ್ತಾರೆ.ನಮ್ಮ (ಅಂದರೆ ಕನ್ನಡಿಗರ) ಶಕ್ತಿಯ ಅರಿವು ನಮಗೇ ಇಲ್ಲದೆ ಹೋದರೆ ಹೊರಗಿನ ಶಕ್ತಿಯನ್ನು ಎದುರಿಸಲು ಬೇಕಾದ ನೆಲೆಯನ್ನು ಕಳೆದುಕೊಳ್ಳತ್ತೇವೆ ಎಂಬ ಗ್ರಹಿಕೆ ಇಲ್ಲಿನ ಬರಹದ ಹಿನ್ನೆಲೆಯಲ್ಲಿದೆ.</p>.<p>ಹಾಗಾಗಿ ನಮ್ಮತನವನ್ನು ಸಂಗ್ರಹವಾಗಿ ಒಂದೆಡೆ ಹೇಳುವ ಪ್ರಯತ್ನದ ಫಲವಾಗಿ ಈ ಬರಹ ಮೂಡಿದೆ. ನಮ್ಮತನದ ಅರಿವಿಲ್ಲದೆ ಈವರೆಗೆ ಕನ್ನಡಿಗರಿಗೆ ಆಗಿರುವ ನಷ್ಟವನ್ನು ಮನವರಿಕೆ ಮಾಡಿಕೊಡುವುದೂ ಈ ಬರಹದ ಇನ್ನೊಂದು ಉದ್ದೇಶ. ಕನ್ನಡಿಗರಲ್ಲಿ ಕನ್ನಡತನವನ್ನು ಉದ್ದೀಪಿಸುವುದು ಇದರ ಪ್ರಮುಖ ಕಾಳಜಿಯಾಗಿದೆ ಎನ್ನಬಹುದು.<br /> <br /> ಆಧುನಿಕ ಶಿಷ್ಟ ಕನ್ನಡವನ್ನು ಓದಲು ಒಗ್ಗಿದ ಕಣ್ಣುಗಳು ಇಲ್ಲಿನ ಕನ್ನಡಕ್ಕೆ ಹೊಂದಿಕೊಳ್ಳಲು ಕೊಂಚ ಸಮಯಬೇಕಾಗುತ್ತದೆ. `ನಮ್ಮ ದೇಶದ ಬಹುತೇಕ ಇತರೆ ಭಾಷಿಕರಲ್ಲಿ ಇರುವಂತೆ ಕನ್ನಡಿಗರಲ್ಲಿ ಕೂಡ ಮಯ್ಬಣ್ಣದ ವಯ್ವಿದ್ಯತೆ ಬಹಳಶ್ಟು ಇದೆ. ಈ ವಯ್ವಿದ್ಯತೆಯ ಅಸ್ತಿತ್ವ ಎಶ್ಟು ವಿಶಾಲವಾಗಿ ಹರಡಿದೆ ಎಂದರೆ, ಕನ್ನಡಿಗರ ಯಾವುದೇ ಒಂದು ಸಮುದಾಯವಾಗಲೀ ಅತವ ಪ್ರದೇಶವಾಗಲೀ, ಇದರ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗುಳಿದಿಲ್ಲ'.</p>.<p>ಪುಸ್ತಕದ ಆರಂಭದಲ್ಲೇ ಇರುವ ಈ ವಾಕ್ಯ ಕೊಂಚ ಅಪರಿಚಿತ ಎನ್ನಿಸಬಹುದು. ಕನ್ನಡತನವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಇದೂ ಒಂದು ಹೆಜ್ಜೆಯಾಗಿರುವುದರಿಂದ ಅದಕ್ಕೆ ಹೊಂದಿಕೊಳ್ಳದೆ ಬೇರೆ ದಾರಿಯಿಲ್ಲ. ಬಳಿಕ ಕನ್ನಡತನದ ಹುಡುಕಾಟ ಸಮಸ್ಯೆಯಾಗಲಾರದು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size:36px;">ಭಾ</span>ಷಾವಿಜ್ಞಾನಿಗಳಾದ ಡಿ.ಎನ್. ಶಂಕರಭಟ್ಟರು ರೂಪಿಸಿದ ಹೊಸ ಬರಹದಲ್ಲಿ ಬರೆಯಲಾದ ಈ ಪುಸ್ತಕ ವಿಶಿಷ್ಟವಾಗಿಯೂ, ಕುತೂಹಲಕಾರಿಯಾಗಿಯೂ ಇದೆ. ಇದು ಮೊದಲಿಗೆ ಕನ್ನಡತನವನ್ನು ಹುಡುಕುವ ಬರಹವಾಗಿದ್ದು, ಸಂಸ್ಕೃತ ಪದಗಳನ್ನು, ಕನ್ನಡದ ಮಹಾಪ್ರಾಣ ಅಕ್ಷರಗಳನ್ನು ತ್ಯಜಿಸಿದ ಹೊಸ ಬರಹದಲ್ಲಿ ರಚಿಸಲಾದ ಬರಹವಾಗಿದೆ.<br /> <br /> `ಕನ್ನಡಿಗರು ಯಾರು? ಅವರ ನುಡಿ, ಮತ್ತವರ ಸಂಸ್ಕೃತಿ ಎಂಥದ್ದು' ಎಂಬುದನ್ನು ಲೇಖಕ ಎಚ್.ಎಸ್. ರಾಜ್ ತಮ್ಮ ಈ ಪುಸ್ತಕದಲ್ಲಿ ಶೋಧಿಸುತ್ತಾರೆ.ನಮ್ಮ (ಅಂದರೆ ಕನ್ನಡಿಗರ) ಶಕ್ತಿಯ ಅರಿವು ನಮಗೇ ಇಲ್ಲದೆ ಹೋದರೆ ಹೊರಗಿನ ಶಕ್ತಿಯನ್ನು ಎದುರಿಸಲು ಬೇಕಾದ ನೆಲೆಯನ್ನು ಕಳೆದುಕೊಳ್ಳತ್ತೇವೆ ಎಂಬ ಗ್ರಹಿಕೆ ಇಲ್ಲಿನ ಬರಹದ ಹಿನ್ನೆಲೆಯಲ್ಲಿದೆ.</p>.<p>ಹಾಗಾಗಿ ನಮ್ಮತನವನ್ನು ಸಂಗ್ರಹವಾಗಿ ಒಂದೆಡೆ ಹೇಳುವ ಪ್ರಯತ್ನದ ಫಲವಾಗಿ ಈ ಬರಹ ಮೂಡಿದೆ. ನಮ್ಮತನದ ಅರಿವಿಲ್ಲದೆ ಈವರೆಗೆ ಕನ್ನಡಿಗರಿಗೆ ಆಗಿರುವ ನಷ್ಟವನ್ನು ಮನವರಿಕೆ ಮಾಡಿಕೊಡುವುದೂ ಈ ಬರಹದ ಇನ್ನೊಂದು ಉದ್ದೇಶ. ಕನ್ನಡಿಗರಲ್ಲಿ ಕನ್ನಡತನವನ್ನು ಉದ್ದೀಪಿಸುವುದು ಇದರ ಪ್ರಮುಖ ಕಾಳಜಿಯಾಗಿದೆ ಎನ್ನಬಹುದು.<br /> <br /> ಆಧುನಿಕ ಶಿಷ್ಟ ಕನ್ನಡವನ್ನು ಓದಲು ಒಗ್ಗಿದ ಕಣ್ಣುಗಳು ಇಲ್ಲಿನ ಕನ್ನಡಕ್ಕೆ ಹೊಂದಿಕೊಳ್ಳಲು ಕೊಂಚ ಸಮಯಬೇಕಾಗುತ್ತದೆ. `ನಮ್ಮ ದೇಶದ ಬಹುತೇಕ ಇತರೆ ಭಾಷಿಕರಲ್ಲಿ ಇರುವಂತೆ ಕನ್ನಡಿಗರಲ್ಲಿ ಕೂಡ ಮಯ್ಬಣ್ಣದ ವಯ್ವಿದ್ಯತೆ ಬಹಳಶ್ಟು ಇದೆ. ಈ ವಯ್ವಿದ್ಯತೆಯ ಅಸ್ತಿತ್ವ ಎಶ್ಟು ವಿಶಾಲವಾಗಿ ಹರಡಿದೆ ಎಂದರೆ, ಕನ್ನಡಿಗರ ಯಾವುದೇ ಒಂದು ಸಮುದಾಯವಾಗಲೀ ಅತವ ಪ್ರದೇಶವಾಗಲೀ, ಇದರ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗುಳಿದಿಲ್ಲ'.</p>.<p>ಪುಸ್ತಕದ ಆರಂಭದಲ್ಲೇ ಇರುವ ಈ ವಾಕ್ಯ ಕೊಂಚ ಅಪರಿಚಿತ ಎನ್ನಿಸಬಹುದು. ಕನ್ನಡತನವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಇದೂ ಒಂದು ಹೆಜ್ಜೆಯಾಗಿರುವುದರಿಂದ ಅದಕ್ಕೆ ಹೊಂದಿಕೊಳ್ಳದೆ ಬೇರೆ ದಾರಿಯಿಲ್ಲ. ಬಳಿಕ ಕನ್ನಡತನದ ಹುಡುಕಾಟ ಸಮಸ್ಯೆಯಾಗಲಾರದು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>