<p><strong>ಬದುಕ ದಿಕ್ಕ ಬದಲಿಸಿದ ಆಸ್ಟಿಯೋ ಸರ್ಕೋಮಾ...</strong><br /> <strong>ಲೇ: ಶ್ರುತಿ ಬಿ.ಎಸ್.<br /> ಪು: 120; ಬೆ: ರೂ. 80<br /> ಪ್ರ: ಗೋಮಿನಿ ಪ್ರಕಾಶನ<br /> ಶ್ರೀ ವೀರಭದ್ರಸ್ವಾಮಿ ನಿಲಯ,<br /> 1ನೇ ಮುಖ್ಯರಸ್ತೆ,<br /> 5ನೇ ಅಡ್ಡ ರಸ್ತೆ, ವಿಶ್ವಣ್ಣ ಲೇಔಟ್, ಶಾಂತಿನಗರ,<br /> ತುಮಕೂರು–572105</strong><br /> <br /> ಆಸ್ಟಿಯೋ ಸರ್ಕೋಮಾ ಎಂಬ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಿ ಗೆದ್ದು ಬಂದ ಶ್ರುತಿ ಎಂಬ ಹುಡುಗಿಯೊಬ್ಬಳ ಕಥೆ ಇದು. ದೇಹದ ಉದ್ದದ ಮೂಳೆಗಳಲ್ಲಿ ಕಾಣಿಸಿಕೊಳ್ಳುವ ಈ ಕ್ಯಾನ್ಸರ್ ಟ್ಯೂಮರ್ ೧೦–೨೦ ವರ್ಷದ ಒಳಗಿನ ಮಕ್ಕಳಿಗೆ ಬರುವುದು ಹೆಚ್ಚು. ತನ್ನ ಎಳೆಯ ವಯಸ್ಸಿನಲ್ಲೇ ಸಾವಿನ ಭೀಕರ ಕನಸನ್ನು ಅದಕ್ಕೂ ಮುಖ್ಯವಾಗಿ ಅಪಾರ ನೋವನ್ನು ಸಹಿಸಿದ ಈ ಹುಡುಗಿ ಅದರಿಂದ ಪಾರಾಗಿ ಬಂದ ಮೇಲೆ ಆ ದುಃಸ್ವಪ್ನವನ್ನು, ತನ್ನ ಅರಿವಿಗೆ ಬಂದ ಅದರ ಪ್ರತಿ ಕ್ಷಣವನ್ನು ಇದರಲ್ಲಿ ದಾಖಲಿಸಿದ್ದಾಳೆ.<br /> <br /> ಸಾವು, ಮುಪ್ಪಿನ ಮುಂದೆ ಮನುಷ್ಯ ಅಸಹಾಯಕನಾಗುತ್ತಾನೆ. ಅವುಗಳ ವಿರುದ್ಧ ಅವನ ಹೋರಾಟ ಎಂದಿಗೂ ವ್ಯರ್ಥ. ಆದರೆ, ತನ್ನ ಗಟ್ಟಿಯಾದ ಮನೋಬಲದಿಂದ, ಸರಿಯಾದ ಚಿಕಿತ್ಸೆಯಿಂದ ಶ್ರುತಿ ಗುಣಮುಖಳಾದಳು. ಅವಳು ಮುಖ್ಯವಾಗಿ ಗುಣ ಹೊಂದಿದ್ದು ತನ್ನ ಆತ್ಮವಿಶ್ವಾಸದಿಂದ ಎಂಬುದನ್ನು ಅವಳ ಈ ಬರವಣಿಗೆ ಹೇಳುತ್ತದೆ. ಅದು ಈ ಪುಸ್ತಕವನ್ನು ಬರೆಯುವಲ್ಲೂ ಅವರ ನೆರವಿಗೆ ಬಂದಿದೆ. ಹಲವು ಮಾನವೀಯ ಹಸ್ತಗಳ ನೆರವಿನಿಂದ ತಾನು ಗುಣಹೊಂದಿದ್ದನ್ನು ವಿವರಿಸುವಲ್ಲಿ ಆಕೆಯ ಸೂಕ್ಷ್ಮಗ್ರಹಿಕೆ, ತಮಾಷೆ, ಬದುಕಿನ ಕುರಿತಾದ ಅಪಾರ ಪ್ರೀತಿ, ಛಲ ಇವೆಲ್ಲ ಕಾಣುತ್ತದೆ. ಈ ಬರಹ ತಲೆಯ ಮೇಲೆ ಆಕಾಶ ಬಿದ್ದಂತೆ ವರ್ತಿಸುವ ಅನೇಕರಿಗೆ ಆತ್ಮವಿಶ್ವಾಸ ತುಂಬಬಲ್ಲದು.<br /> <strong>–ಸಂದೀಪ ನಾಯಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬದುಕ ದಿಕ್ಕ ಬದಲಿಸಿದ ಆಸ್ಟಿಯೋ ಸರ್ಕೋಮಾ...</strong><br /> <strong>ಲೇ: ಶ್ರುತಿ ಬಿ.ಎಸ್.<br /> ಪು: 120; ಬೆ: ರೂ. 80<br /> ಪ್ರ: ಗೋಮಿನಿ ಪ್ರಕಾಶನ<br /> ಶ್ರೀ ವೀರಭದ್ರಸ್ವಾಮಿ ನಿಲಯ,<br /> 1ನೇ ಮುಖ್ಯರಸ್ತೆ,<br /> 5ನೇ ಅಡ್ಡ ರಸ್ತೆ, ವಿಶ್ವಣ್ಣ ಲೇಔಟ್, ಶಾಂತಿನಗರ,<br /> ತುಮಕೂರು–572105</strong><br /> <br /> ಆಸ್ಟಿಯೋ ಸರ್ಕೋಮಾ ಎಂಬ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಿ ಗೆದ್ದು ಬಂದ ಶ್ರುತಿ ಎಂಬ ಹುಡುಗಿಯೊಬ್ಬಳ ಕಥೆ ಇದು. ದೇಹದ ಉದ್ದದ ಮೂಳೆಗಳಲ್ಲಿ ಕಾಣಿಸಿಕೊಳ್ಳುವ ಈ ಕ್ಯಾನ್ಸರ್ ಟ್ಯೂಮರ್ ೧೦–೨೦ ವರ್ಷದ ಒಳಗಿನ ಮಕ್ಕಳಿಗೆ ಬರುವುದು ಹೆಚ್ಚು. ತನ್ನ ಎಳೆಯ ವಯಸ್ಸಿನಲ್ಲೇ ಸಾವಿನ ಭೀಕರ ಕನಸನ್ನು ಅದಕ್ಕೂ ಮುಖ್ಯವಾಗಿ ಅಪಾರ ನೋವನ್ನು ಸಹಿಸಿದ ಈ ಹುಡುಗಿ ಅದರಿಂದ ಪಾರಾಗಿ ಬಂದ ಮೇಲೆ ಆ ದುಃಸ್ವಪ್ನವನ್ನು, ತನ್ನ ಅರಿವಿಗೆ ಬಂದ ಅದರ ಪ್ರತಿ ಕ್ಷಣವನ್ನು ಇದರಲ್ಲಿ ದಾಖಲಿಸಿದ್ದಾಳೆ.<br /> <br /> ಸಾವು, ಮುಪ್ಪಿನ ಮುಂದೆ ಮನುಷ್ಯ ಅಸಹಾಯಕನಾಗುತ್ತಾನೆ. ಅವುಗಳ ವಿರುದ್ಧ ಅವನ ಹೋರಾಟ ಎಂದಿಗೂ ವ್ಯರ್ಥ. ಆದರೆ, ತನ್ನ ಗಟ್ಟಿಯಾದ ಮನೋಬಲದಿಂದ, ಸರಿಯಾದ ಚಿಕಿತ್ಸೆಯಿಂದ ಶ್ರುತಿ ಗುಣಮುಖಳಾದಳು. ಅವಳು ಮುಖ್ಯವಾಗಿ ಗುಣ ಹೊಂದಿದ್ದು ತನ್ನ ಆತ್ಮವಿಶ್ವಾಸದಿಂದ ಎಂಬುದನ್ನು ಅವಳ ಈ ಬರವಣಿಗೆ ಹೇಳುತ್ತದೆ. ಅದು ಈ ಪುಸ್ತಕವನ್ನು ಬರೆಯುವಲ್ಲೂ ಅವರ ನೆರವಿಗೆ ಬಂದಿದೆ. ಹಲವು ಮಾನವೀಯ ಹಸ್ತಗಳ ನೆರವಿನಿಂದ ತಾನು ಗುಣಹೊಂದಿದ್ದನ್ನು ವಿವರಿಸುವಲ್ಲಿ ಆಕೆಯ ಸೂಕ್ಷ್ಮಗ್ರಹಿಕೆ, ತಮಾಷೆ, ಬದುಕಿನ ಕುರಿತಾದ ಅಪಾರ ಪ್ರೀತಿ, ಛಲ ಇವೆಲ್ಲ ಕಾಣುತ್ತದೆ. ಈ ಬರಹ ತಲೆಯ ಮೇಲೆ ಆಕಾಶ ಬಿದ್ದಂತೆ ವರ್ತಿಸುವ ಅನೇಕರಿಗೆ ಆತ್ಮವಿಶ್ವಾಸ ತುಂಬಬಲ್ಲದು.<br /> <strong>–ಸಂದೀಪ ನಾಯಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>