<p>ಕಲಾಕ್ಷಿತಿ ಕಲಾ ಶಾಲೆಯ ಆಶ್ರಯದಲ್ಲಿ ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸುಚಿತ್ರ ದಿವಾಕರ್ ಅವರ ಭರತನಾಟ್ಯ ರಂಗಪ್ರವೇಶ ನಡೆಯಿತು. <br /> <br /> ಎಂ.ಆರ್. ಕೃಷ್ಣಮೂರ್ತಿ ಅವರ ಬಳಿ 8 ವರ್ಷದವರಿದ್ದಾಗಲೇ ನೃತ್ಯಾಭ್ಯಾಸ ಆರಂಭಿಸಿದ ಸುಚಿತ್ರಾ, ರಂಗಪ್ರವೇಶದ ದಿನ ನೃತ್ಯದಲ್ಲಿ ತಮಗಿರುವ ಪರಿಣತಿಯನ್ನು ಪ್ರದರ್ಶಿಸಿದರು. ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿರುವ `ಮಾರ್ಗಂ~ ಪ್ರಕಾರವನ್ನು ಅವರು ಅಭಿನಯಿಸಿದರು.<br /> <br /> ಸಾಂಪ್ರದಾಯಿಕ ಅಲರಿಪ್ಪುವಿನಿಂದ ಕಾರ್ಯಕ್ರಮ ಆರಂಭ. ನೃತ್ಯ ಸಮುದಾಯ ಮರೆಯುತ್ತಿರುವ `ಶಬ್ದಂ~ ಬಹು ಸುಂದರವಾಗಿ ಅಭಿನಯಿಸಿದರು. ಯಮುನಾ ತೀರದಲ್ಲಿ ಗೋಪಿಯರ ಜೊತೆ ಸರಸವಾಡುತ್ತಿರುವ ತುಂಟ ಕೃಷ್ಣನ ಲೀಲೆಗಳ ವರ್ಣನೆಯನ್ನು ಇದು ಒಳಗೊಂಡಿತ್ತು. <br /> <br /> 18ನೇ ಶತಮಾನದಲ್ಲಿ ಮೈಲಾಪುರ ಗೌರಿಅಮ್ಮಾಳ್ ಸಂಯೋಜಿಸಿದ ಬಹು ಅಪರೂಪದ ಹುಸೈನಿ ರಾಗವನ್ನು `ವರ್ಣಂ~ಗಾಗಿ ಆಯ್ದುಕೊಳ್ಳಲಾಗಿತ್ತು. <br /> ಗುರುವಂದನೆಯ ನಂತರದ ಎರಡನೇ ಭಾಗದಲ್ಲೂ ಸುಚಿತ್ರಾ ಅಪೂರ್ವ ನೃತ್ಯ ಪ್ರದರ್ಶಿಸಿದರು. <br /> <br /> ನೃತ್ತ, ಅಭಿನಯ, ಅಂಗಸುಧಾ ಎಲ್ಲ ವಿಭಾಗಗಳಲ್ಲೂ ಅವರು ಮೇಲುಗೈ ಸಾಧಿಸಿದ್ದರು. ಹರಿಪ್ರಸಾದ್ ಅವರ ಸಂಗೀತ ಈ ಕಾರ್ಯಕ್ರಮದ ಚೆಲುವು ಹೆಚ್ಚಿಸಿತು. ಒಟ್ಟಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾದ ಸುಚಿತ್ರಾಳ ರಂಗಪ್ರವೇಶದ ಪ್ರತಿ ಕ್ಷಣವೂ ಮನಮೋಹಕವಾಗಿತ್ತು. <br /> <br /> ನಟುವಾಂಗದಲ್ಲಿ ಸುಮನಾ ನಾಗೇಶ್, ಮೃದಂಗದಲ್ಲಿ ಅನಿಲ್ ಕುಮಾರ್, ವಯಲಿನ್ನಲ್ಲಿ ಡಾ. ನಟರಾಜ ಮೂರ್ತಿ ಮತ್ತು ಕೊಳಲಿನಲ್ಲಿ ಗಣೇಶ್ ಸಹಕಾರ ಪೂರಕವಾಗಿತ್ತು.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಾಕ್ಷಿತಿ ಕಲಾ ಶಾಲೆಯ ಆಶ್ರಯದಲ್ಲಿ ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸುಚಿತ್ರ ದಿವಾಕರ್ ಅವರ ಭರತನಾಟ್ಯ ರಂಗಪ್ರವೇಶ ನಡೆಯಿತು. <br /> <br /> ಎಂ.ಆರ್. ಕೃಷ್ಣಮೂರ್ತಿ ಅವರ ಬಳಿ 8 ವರ್ಷದವರಿದ್ದಾಗಲೇ ನೃತ್ಯಾಭ್ಯಾಸ ಆರಂಭಿಸಿದ ಸುಚಿತ್ರಾ, ರಂಗಪ್ರವೇಶದ ದಿನ ನೃತ್ಯದಲ್ಲಿ ತಮಗಿರುವ ಪರಿಣತಿಯನ್ನು ಪ್ರದರ್ಶಿಸಿದರು. ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿರುವ `ಮಾರ್ಗಂ~ ಪ್ರಕಾರವನ್ನು ಅವರು ಅಭಿನಯಿಸಿದರು.<br /> <br /> ಸಾಂಪ್ರದಾಯಿಕ ಅಲರಿಪ್ಪುವಿನಿಂದ ಕಾರ್ಯಕ್ರಮ ಆರಂಭ. ನೃತ್ಯ ಸಮುದಾಯ ಮರೆಯುತ್ತಿರುವ `ಶಬ್ದಂ~ ಬಹು ಸುಂದರವಾಗಿ ಅಭಿನಯಿಸಿದರು. ಯಮುನಾ ತೀರದಲ್ಲಿ ಗೋಪಿಯರ ಜೊತೆ ಸರಸವಾಡುತ್ತಿರುವ ತುಂಟ ಕೃಷ್ಣನ ಲೀಲೆಗಳ ವರ್ಣನೆಯನ್ನು ಇದು ಒಳಗೊಂಡಿತ್ತು. <br /> <br /> 18ನೇ ಶತಮಾನದಲ್ಲಿ ಮೈಲಾಪುರ ಗೌರಿಅಮ್ಮಾಳ್ ಸಂಯೋಜಿಸಿದ ಬಹು ಅಪರೂಪದ ಹುಸೈನಿ ರಾಗವನ್ನು `ವರ್ಣಂ~ಗಾಗಿ ಆಯ್ದುಕೊಳ್ಳಲಾಗಿತ್ತು. <br /> ಗುರುವಂದನೆಯ ನಂತರದ ಎರಡನೇ ಭಾಗದಲ್ಲೂ ಸುಚಿತ್ರಾ ಅಪೂರ್ವ ನೃತ್ಯ ಪ್ರದರ್ಶಿಸಿದರು. <br /> <br /> ನೃತ್ತ, ಅಭಿನಯ, ಅಂಗಸುಧಾ ಎಲ್ಲ ವಿಭಾಗಗಳಲ್ಲೂ ಅವರು ಮೇಲುಗೈ ಸಾಧಿಸಿದ್ದರು. ಹರಿಪ್ರಸಾದ್ ಅವರ ಸಂಗೀತ ಈ ಕಾರ್ಯಕ್ರಮದ ಚೆಲುವು ಹೆಚ್ಚಿಸಿತು. ಒಟ್ಟಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾದ ಸುಚಿತ್ರಾಳ ರಂಗಪ್ರವೇಶದ ಪ್ರತಿ ಕ್ಷಣವೂ ಮನಮೋಹಕವಾಗಿತ್ತು. <br /> <br /> ನಟುವಾಂಗದಲ್ಲಿ ಸುಮನಾ ನಾಗೇಶ್, ಮೃದಂಗದಲ್ಲಿ ಅನಿಲ್ ಕುಮಾರ್, ವಯಲಿನ್ನಲ್ಲಿ ಡಾ. ನಟರಾಜ ಮೂರ್ತಿ ಮತ್ತು ಕೊಳಲಿನಲ್ಲಿ ಗಣೇಶ್ ಸಹಕಾರ ಪೂರಕವಾಗಿತ್ತು.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>