ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಗುರು–ಶಿಷ್ಯರ ನಡುವೆ ದೈವೀಕ ಬಾಂಧವ್ಯವಿದೆ. ಶಾಲಾ ಶಿಕ್ಷಣದಲ್ಲಿ ಶಿಕ್ಷಕ– ವಿದ್ಯಾರ್ಥಿಗಳ ನಡುವೆ ಇರುವ ಅಂತರ ಸಂಗೀತದಲ್ಲಿ ಇರುವುದಿಲ್ಲ. ಸಂಗೀತ ಪಾಠಕ್ಕೆ ಬರುವ ಶಿಷ್ಯರು ಗುರುವಿನ ಪಾದಕ್ಕೆ ನಮಸ್ಕಾರ ಮಾಡುತ್ತಾರೆ. ಸಾಕ್ಷಾತ್ ದೇವರ ದರ್ಶನ ಪಡೆದ ಭಾವ ಅನುಭವಿಸುತ್ತಾರೆ. ಗುರು ಕೂಡ ಶ್ರದ್ಧೆಯುಳ್ಳ ಶಿಷ್ಯರನ್ನು ಮನಸಾರೆ ಪ್ರೀತಿಸುತ್ತಾರೆ, ಮನೆ ಮಕ್ಕಳಂತೆ ಕಾಣುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜ ದಿವಂಗತ ವಿದ್ವಾನ್ ಎಂ.ಬಾಲಮುರಳಿ ಕೃಷ್ಣ ಅವರ ಕಛೇರಿಯಲ್ಲಿ ಕಂಡ ಒಂದು ಘಟನೆಯ ಹಿತಾನುಭವ ಈ ವಾರದ ‘ಜಸ್ಟ್ ಮ್ಯೂಸಿಕ್’ ಸರಣಿಯಲ್ಲಿದೆ.