<p>ಊರು ಬಿಡುವ ಮುನ್ನ ದಿನ ತಿನ್ನುವ<br />ಬುತ್ತಿ ಕನಿಕರದಿಂದ ಹೇಳಿತ್ತು<br />ಕಂದಾ ಅಲ್ಲಿ ಹಸಿದಿರುವುದನ್ನೂ ಕಲಿ<br />ಹೊತ್ತು ಹೊತ್ತಿಗೆ ಬುತ್ತಿ ಸಿಕ್ಕಲಾರದು<br />ಮತ್ತೆ ಊರು ನೆನಪಾದೀತು..!</p>.<p>ಊರು ಬಿಡುವ ರಾತ್ರಿ ಆವರಿಸಲಿದ್ದ<br />ನಿದ್ದೆ ದುಃಖಪಟ್ಟು ಹೇಳಿತ್ತು<br />ಮಗು ಇಂದೇ ಬೇಕಾದಷ್ಟು ಮೊಗೆದು ಬಿಡು<br />ಅಲ್ಲಿ ನಿನಗೆ ನನ್ನ ಇರುವು ದುರ್ಲಭವೇ<br />ದೇಹ ಸಿರಿ ಕದಡೀತು..!</p>.<p>ಊರು ಬಿಟ್ಟು ಬರುವಾಗ ಕಾಲಿಗೆ<br />ಎಡವಿದ ಕಲ್ಲು ಮರುಕದಿಂದ ಹೇಳಿತ್ತು<br />ಕಂದಾ ಹುಷಾರು ಅಲ್ಲಿ-<br />-ಎಡವ ಬೇಡ ಬಿದ್ದರೆ ಎತ್ತುವವರಿಲ್ಲ<br />ಬಿದ್ದು ಗಾಯವಾದೀತು..!</p>.<p>ಎಡವಿ ಮುಗ್ಗರಿಸಿದಾಗ ಜೇಬಿನಿಂದ<br />ಹಾರಿ ಬಿದ್ದ ಪುಡಿಗಾಸಿ ಸಂಕಟಪಟ್ಟು<br />ಹೇಳಿತ್ತು<br />ಮಗಾ ಅಲ್ಲಿ ಕಾಸುಗಳಿಗೆ ಬೆಲೆ ಇಲ್ಲ<br />ನೀನು ನೋಟುಗಳನು ದುಡಿಯಬೇಕು<br />ಹೊಟ್ಟೆ ಖಾಲಿ ಉಳಿದೀತು..!</p>.<p>ಊರ ಬೀದಿಯಲಿ ಹಾದು ಬರುವಾಗ<br />ಮನೆಗಳಿಂದ ಹಾದು ಬಂದು<br />ಪರಿಚಿತ ದನಿಗಳು ಎಚ್ಚರಿಸಿದ್ದವು<br />ಅಲ್ಲಿ ಮಾತುಗಳಿರುವುದಿಲ್ಲ<br />ಅಪರಿಚಿತ ಮೌನ ಹುಚ್ಚು ಹಿಡಿಸೀತು..!</p>.<p>ಹೊಲದ ಎದೆಯಿಂದ ಹೆಜ್ಜೆ ಎತ್ತಿಡುವಾಗ<br />ಮಮತೆಯಲಿ ಮಣ್ಣು ಹೇಳಿತ್ತು<br />ಮಗು ಅಲ್ಲಿ ಅನ್ನ ಹುಟ್ಟದಿದ್ದಾಗ ಮರಳಿಬಿಡು<br />ನಾನೆಂದೂ ಬಂಜೆಯಲ್ಲ ಹಿಡಿ ಬೀಜ ಸಾಕು<br />ಗೇಣು ಹೊಟ್ಟೆಗೆ ಎಷ್ಟು ಬೇಕಾದೀತು..!</p>.<p>ಊರನ್ನು ಇಷ್ಟಿಷ್ಟೆ ಕೊಂದು ತಂದು<br />ರಕ್ತ ಮಾಂಸ ಮೂಳೆಗಳನು ರಂಗಾಗಿ<br />ಜೋಡಿಸಿದ ನಗರದ ಬೀದಿಯಲಿ<br />ಯಾರದೊ ನಿಟ್ಟುಸಿರ ಮೇಲೆ ನಡೆಯುವಾಗ<br />ಊರು ಮತ್ತೆ ಮತ್ತೆ ನೆನಪಾದೀತು..!</p>.<p>ಎಲ್ಲಾ ಇದ್ದು ಏನೂ ಇಲ್ಲವೆನಿಸಿದೆ ಇಲ್ಲಿ<br />ಬೆಳೆಸಿದ ನಗರವೇ ಕೈ ಬಿಟ್ಟು ನಡೆದಿದೆ<br />ಊರು ಹೇಳಿದ ಮಾತು ಆಗ ಕಿವಿತುಂಬದೆ<br />ಇಂದು ಎದೆಯೊಳಗೆ ಅಲೆ ಎಬ್ಬಿಸಿವೆ<br />ಹೆಣ ಹೋಗುವ ಮುನ್ನ ನಾವೇ ಹೋಗುವ<br />ಉಳಿದ ಬಾಳು ಎಷ್ಟಿದ್ದೀತು..!?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಊರು ಬಿಡುವ ಮುನ್ನ ದಿನ ತಿನ್ನುವ<br />ಬುತ್ತಿ ಕನಿಕರದಿಂದ ಹೇಳಿತ್ತು<br />ಕಂದಾ ಅಲ್ಲಿ ಹಸಿದಿರುವುದನ್ನೂ ಕಲಿ<br />ಹೊತ್ತು ಹೊತ್ತಿಗೆ ಬುತ್ತಿ ಸಿಕ್ಕಲಾರದು<br />ಮತ್ತೆ ಊರು ನೆನಪಾದೀತು..!</p>.<p>ಊರು ಬಿಡುವ ರಾತ್ರಿ ಆವರಿಸಲಿದ್ದ<br />ನಿದ್ದೆ ದುಃಖಪಟ್ಟು ಹೇಳಿತ್ತು<br />ಮಗು ಇಂದೇ ಬೇಕಾದಷ್ಟು ಮೊಗೆದು ಬಿಡು<br />ಅಲ್ಲಿ ನಿನಗೆ ನನ್ನ ಇರುವು ದುರ್ಲಭವೇ<br />ದೇಹ ಸಿರಿ ಕದಡೀತು..!</p>.<p>ಊರು ಬಿಟ್ಟು ಬರುವಾಗ ಕಾಲಿಗೆ<br />ಎಡವಿದ ಕಲ್ಲು ಮರುಕದಿಂದ ಹೇಳಿತ್ತು<br />ಕಂದಾ ಹುಷಾರು ಅಲ್ಲಿ-<br />-ಎಡವ ಬೇಡ ಬಿದ್ದರೆ ಎತ್ತುವವರಿಲ್ಲ<br />ಬಿದ್ದು ಗಾಯವಾದೀತು..!</p>.<p>ಎಡವಿ ಮುಗ್ಗರಿಸಿದಾಗ ಜೇಬಿನಿಂದ<br />ಹಾರಿ ಬಿದ್ದ ಪುಡಿಗಾಸಿ ಸಂಕಟಪಟ್ಟು<br />ಹೇಳಿತ್ತು<br />ಮಗಾ ಅಲ್ಲಿ ಕಾಸುಗಳಿಗೆ ಬೆಲೆ ಇಲ್ಲ<br />ನೀನು ನೋಟುಗಳನು ದುಡಿಯಬೇಕು<br />ಹೊಟ್ಟೆ ಖಾಲಿ ಉಳಿದೀತು..!</p>.<p>ಊರ ಬೀದಿಯಲಿ ಹಾದು ಬರುವಾಗ<br />ಮನೆಗಳಿಂದ ಹಾದು ಬಂದು<br />ಪರಿಚಿತ ದನಿಗಳು ಎಚ್ಚರಿಸಿದ್ದವು<br />ಅಲ್ಲಿ ಮಾತುಗಳಿರುವುದಿಲ್ಲ<br />ಅಪರಿಚಿತ ಮೌನ ಹುಚ್ಚು ಹಿಡಿಸೀತು..!</p>.<p>ಹೊಲದ ಎದೆಯಿಂದ ಹೆಜ್ಜೆ ಎತ್ತಿಡುವಾಗ<br />ಮಮತೆಯಲಿ ಮಣ್ಣು ಹೇಳಿತ್ತು<br />ಮಗು ಅಲ್ಲಿ ಅನ್ನ ಹುಟ್ಟದಿದ್ದಾಗ ಮರಳಿಬಿಡು<br />ನಾನೆಂದೂ ಬಂಜೆಯಲ್ಲ ಹಿಡಿ ಬೀಜ ಸಾಕು<br />ಗೇಣು ಹೊಟ್ಟೆಗೆ ಎಷ್ಟು ಬೇಕಾದೀತು..!</p>.<p>ಊರನ್ನು ಇಷ್ಟಿಷ್ಟೆ ಕೊಂದು ತಂದು<br />ರಕ್ತ ಮಾಂಸ ಮೂಳೆಗಳನು ರಂಗಾಗಿ<br />ಜೋಡಿಸಿದ ನಗರದ ಬೀದಿಯಲಿ<br />ಯಾರದೊ ನಿಟ್ಟುಸಿರ ಮೇಲೆ ನಡೆಯುವಾಗ<br />ಊರು ಮತ್ತೆ ಮತ್ತೆ ನೆನಪಾದೀತು..!</p>.<p>ಎಲ್ಲಾ ಇದ್ದು ಏನೂ ಇಲ್ಲವೆನಿಸಿದೆ ಇಲ್ಲಿ<br />ಬೆಳೆಸಿದ ನಗರವೇ ಕೈ ಬಿಟ್ಟು ನಡೆದಿದೆ<br />ಊರು ಹೇಳಿದ ಮಾತು ಆಗ ಕಿವಿತುಂಬದೆ<br />ಇಂದು ಎದೆಯೊಳಗೆ ಅಲೆ ಎಬ್ಬಿಸಿವೆ<br />ಹೆಣ ಹೋಗುವ ಮುನ್ನ ನಾವೇ ಹೋಗುವ<br />ಉಳಿದ ಬಾಳು ಎಷ್ಟಿದ್ದೀತು..!?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>