<p>ಹಿಂದೊಮ್ಮೆ ರಣಗುಡುವ ಬಿಸಿಲು<br />ಬಾಯಾರಿದರೂ ಬಾಯ್ತೆರೆಯಲಾಗದೆ,<br />ಇಷ್ಟೊಂದು ಜನರ ಸುಡು ಬಿಸಿಲಲಿಟ್ಟು<br />ನೀರು, ನೆಳಲುಗಳ ತಮಗೆ ಮಾತ್ರವೆಂದು<br />ಗೆರೆ ಎಳೆದು ಕೂತ ಸಣ್ಣತನದ ಜನರ<br />ಮಣಿಸಲಾಗದೆ, ಮಾತು ಮರೆತವರು<br />ಹಣೆಬರಹಕೆ ದೇವರ ಶಪಿಸತ್ತಿದ್ದರು…</p>.<p>ಅದೇ ಉರಿ ಬಿಸಿಲಲ್ಲೇ ಬೆಂದು, ಬಸವಳಿದು<br />ನೋವುಂಡರೂ ಅದೃಷ್ಟ, ಹಣೆಬರಹಗಳ<br />ಹಳಿಯುತ್ತ ಕೂರದೇ, ಬೇಗುದಿಯ ಮೆಟ್ಟಿನಿಂತ<br />ಮರಿ ಸೂರ್ಯನಂತೆ ತಾಪದೊಳಗೂ ತಣ್ಣಗೆ…<br />ಎಲ್ಲವನರಿತ, ಇನ್ನಷ್ಟು, ಮತ್ತಷ್ಟು, ಜಗದಷ್ಟು<br />ಅರಿವಿಗೆ ಪರ್ಯಾಯವಾದನೊಬ್ಬ ಛಲದಂಕಮಲ್ಲ.</p>.<p>ಬಿಸಿಲಲಿ ಬಸವಳಿದ ಸಹಚರರ ಸುಟ್ಟ ನೆತ್ತಿ,<br />ರಕ್ತವೊಸರುವ ನೊಂದ ಪಾದಗಳ ಬಿರುಕು,<br />ಹುಟ್ಟನೇ ನೆಪಮಾಡಿ, ನೂರಾರು ವರುಷ<br />ಬಿಸಿಲನೇ ಕುಡಿಸಿ ಬಿಸಿಲನೇ ತಿನ್ನಿಸಿ<br />ತನ್ನವರನೆಲ್ಲ ನೋವ ಕೂಪಕೆ ದೂಡಿ<br />ತಾವಷ್ಟೇ ತಿಂದುಂಡು ತೇಗಿ, ಉಟ್ಟು ಮರೆದಾಡಿ<br />ಗೆರೆ ಎಳೆದು, ನೆರಳ ವಶ ಮಾಡಿಕೊಂಡವರ<br />ನರಿತನದ ನಡು ಮುರಿದು ನೆರಳನರಸಿ ಹೊರಟ.<br />ಅವ ನೆಟ್ಟ ಗಿಡ, ಹೆಮ್ಮರವಾಯ್ತು<br />ಭದ್ರವಾದ ಬೇರು, ಸಹಸ್ರಾರು ಬಿಳಲುಗಳು<br />ಅರಸಿ ಬಂದ ಬಾಯಿ ಸತ್ತವರಿಗೆ ನೆರಳೋ, ನೆರಳು…<br />ಬರಿ ನೆರಳಲ್ಲ ಉಸಿರು, ಮಾತು ಕೊಟ್ಟಿತು ಮರ.<br />ತಲೆ ಎತ್ತಿ ನಡೆವುದ ಕಲಿಸಿದ ಮರದೊಡೆಯ.</p>.<p>ಅವನಂದು ನೆಟ್ಟ ಮರದಡಿಯೇ ಇಂದಿಗೂ<br />ಎಲ್ಲರಿಗೂ ಸಮನಾದ ತಂಪು ನೆಳಲು…<br />ಮರಕೆ ಅವನಿಟ್ಟ ಹೆಸರು ಭಾರತದ ಸಂವಿಧಾನ.<br />ನಡುರಾತ್ರಿ ಗಾಳಿ ಬೀಸುವಾಗ ಕಿವಿಗೊಟ್ಟು ಕೇಳಿ<br />ಮರವೂ ಅಂದು ಅವ ಕಲಿಸಿದ್ದ ಹಾಡು ಹಾಡುತ್ತದೆ<br />ಶಿಕ್ಷಣ- ಸಂಘಟನೆ- ಹೋರಾಟ ಎಲ್ಲರಿಗೂ…<br />ಸ್ವಾತಂತ್ರ್ಯ-ನ್ಯಾಯ- ಸಮಾನತೆ ಎಲ್ಲರಿಗೂ...</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿಂದೊಮ್ಮೆ ರಣಗುಡುವ ಬಿಸಿಲು<br />ಬಾಯಾರಿದರೂ ಬಾಯ್ತೆರೆಯಲಾಗದೆ,<br />ಇಷ್ಟೊಂದು ಜನರ ಸುಡು ಬಿಸಿಲಲಿಟ್ಟು<br />ನೀರು, ನೆಳಲುಗಳ ತಮಗೆ ಮಾತ್ರವೆಂದು<br />ಗೆರೆ ಎಳೆದು ಕೂತ ಸಣ್ಣತನದ ಜನರ<br />ಮಣಿಸಲಾಗದೆ, ಮಾತು ಮರೆತವರು<br />ಹಣೆಬರಹಕೆ ದೇವರ ಶಪಿಸತ್ತಿದ್ದರು…</p>.<p>ಅದೇ ಉರಿ ಬಿಸಿಲಲ್ಲೇ ಬೆಂದು, ಬಸವಳಿದು<br />ನೋವುಂಡರೂ ಅದೃಷ್ಟ, ಹಣೆಬರಹಗಳ<br />ಹಳಿಯುತ್ತ ಕೂರದೇ, ಬೇಗುದಿಯ ಮೆಟ್ಟಿನಿಂತ<br />ಮರಿ ಸೂರ್ಯನಂತೆ ತಾಪದೊಳಗೂ ತಣ್ಣಗೆ…<br />ಎಲ್ಲವನರಿತ, ಇನ್ನಷ್ಟು, ಮತ್ತಷ್ಟು, ಜಗದಷ್ಟು<br />ಅರಿವಿಗೆ ಪರ್ಯಾಯವಾದನೊಬ್ಬ ಛಲದಂಕಮಲ್ಲ.</p>.<p>ಬಿಸಿಲಲಿ ಬಸವಳಿದ ಸಹಚರರ ಸುಟ್ಟ ನೆತ್ತಿ,<br />ರಕ್ತವೊಸರುವ ನೊಂದ ಪಾದಗಳ ಬಿರುಕು,<br />ಹುಟ್ಟನೇ ನೆಪಮಾಡಿ, ನೂರಾರು ವರುಷ<br />ಬಿಸಿಲನೇ ಕುಡಿಸಿ ಬಿಸಿಲನೇ ತಿನ್ನಿಸಿ<br />ತನ್ನವರನೆಲ್ಲ ನೋವ ಕೂಪಕೆ ದೂಡಿ<br />ತಾವಷ್ಟೇ ತಿಂದುಂಡು ತೇಗಿ, ಉಟ್ಟು ಮರೆದಾಡಿ<br />ಗೆರೆ ಎಳೆದು, ನೆರಳ ವಶ ಮಾಡಿಕೊಂಡವರ<br />ನರಿತನದ ನಡು ಮುರಿದು ನೆರಳನರಸಿ ಹೊರಟ.<br />ಅವ ನೆಟ್ಟ ಗಿಡ, ಹೆಮ್ಮರವಾಯ್ತು<br />ಭದ್ರವಾದ ಬೇರು, ಸಹಸ್ರಾರು ಬಿಳಲುಗಳು<br />ಅರಸಿ ಬಂದ ಬಾಯಿ ಸತ್ತವರಿಗೆ ನೆರಳೋ, ನೆರಳು…<br />ಬರಿ ನೆರಳಲ್ಲ ಉಸಿರು, ಮಾತು ಕೊಟ್ಟಿತು ಮರ.<br />ತಲೆ ಎತ್ತಿ ನಡೆವುದ ಕಲಿಸಿದ ಮರದೊಡೆಯ.</p>.<p>ಅವನಂದು ನೆಟ್ಟ ಮರದಡಿಯೇ ಇಂದಿಗೂ<br />ಎಲ್ಲರಿಗೂ ಸಮನಾದ ತಂಪು ನೆಳಲು…<br />ಮರಕೆ ಅವನಿಟ್ಟ ಹೆಸರು ಭಾರತದ ಸಂವಿಧಾನ.<br />ನಡುರಾತ್ರಿ ಗಾಳಿ ಬೀಸುವಾಗ ಕಿವಿಗೊಟ್ಟು ಕೇಳಿ<br />ಮರವೂ ಅಂದು ಅವ ಕಲಿಸಿದ್ದ ಹಾಡು ಹಾಡುತ್ತದೆ<br />ಶಿಕ್ಷಣ- ಸಂಘಟನೆ- ಹೋರಾಟ ಎಲ್ಲರಿಗೂ…<br />ಸ್ವಾತಂತ್ರ್ಯ-ನ್ಯಾಯ- ಸಮಾನತೆ ಎಲ್ಲರಿಗೂ...</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>