ಏರುಪೇರುಗಳು, ಅವಘಡಗಳು, ಬದುಕಿನ ಬೆಂಗಾಡುಗಳು
ಮತ್ತೆ ಮತ್ತೆ ತಮ್ಮ ತಿರುಗಣೆಯಲ್ಲಿ ಹಾಕಿ ಅರೆಯುವಾಗ,
ಸೋಲನ್ನು ಮುಂದೊಡ್ಡುವಾಗ, ನಿಮಗೆ ಕೋಪ ಬರಲಿಲ್ಲ
ಸಿಡಿದೇಳಲಿಲ್ಲ, ಪರಿಸ್ಥಿತಿಯ ತಾಪಕ್ಕೆ ಕೊಂಚವೂ ಬೆದರಲಿಲ್ಲ
ಆಗಲೇ ನಿಮ್ಮನ್ನು ಮಟ್ಟ ಹಾಕಲು ನಾವು ಹತ್ತಾರು ಕಾನೂನು ತಂದೆವು
ಸೌಲಭ್ಯ ಒತ್ತಟ್ಟಿಗಿರಲಿ ಸಂಕಟಗಳ ನೂಲನ್ನೆ ನೇಯ್ದು ತೊಡಿಸಿದೆವು
ನೀವು ನಿಮ್ಮ ಅರಿವಿನ ಸಮಾಧಿಗೆ ಮೌನದ ಚಾದರ ಹೊದ್ದಿಸಿದ್ದಿರಿ.