ಮೈಸೂರಿನ ಕೆಎಸ್ಆರ್.ಪಿ. ಬ್ಯಾಂಡ್ 5ನೇ ಪಡೆಯಲ್ಲಿ ಡಿ.ನಾಗರಾಜು ನೇತೃತ್ವದಲ್ಲಿ 30 ಕಲಾವಿದರು ಭಾಗವಹಿಸಿದ್ದಾರೆ. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಅಪಾರ ಕೀರ್ತಿ ಮೆರೆವ ಭವ್ಯ ನಾಡಿದು, ಜೈ ಭಾರತ ಜನನಿಯ ತನುಜಾತೆ, ಇದೇ ಹಾಡು ಇದೇ ನಾಡು, ಟುವ್ವಿ ಟುವ್ವಿ ಮುಂತಾದ ಕನ್ನಡ ಗೀತೆಗಳನ್ನು ನುಡಿಸಲಿದ್ದಾರೆ.