ಫೆ. 17ರಂದು ಸಂಜೆ 6ಕ್ಕೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ, ಆಡಳಿತ ಮತ್ತು ಹಣಕಾಸು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಶೇರುಗಾರ, ವಿದ್ವಾಂಸ ಡಾ.ಆನಂದರಾಮ ಉಪಾಧ್ಯ, ಕೆ.ಪುರುಷೋತ್ತಮ ಅಡಿಗ ಅವರ ಉಪಸ್ಥಿತಿಯಲ್ಲಿ ಶಾಂತಾರಾಮ ಆಚಾರ್ಯ ಅವರನ್ನು ಸನ್ಮಾನಿಸಲಾಗುವುದು. ಕೀರಿಕ್ಕಾಡು ವಿಷ್ಣುಭಟ್ ರಚಿಸಿರುವ ‘ಪಾಂಚಜನ್ಯ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ನಿರ್ದೇಶನ ಕೆ. ಮೋಹನ್. ಕಲಾವಿದರಾಗಿ ಲಂಬೋದರ ಹೆಗಡೆ, ದೇವರಾಜದಾಸ್, ಗಣಪತಿ ಭಟ್, ಮಾಧವ, ಮಂಜುನಾಥ ಭಟ್, ಸುಜಯೀಂದ್ರ ಹಂದೆ, ತಮ್ಮಣ್ಣ ಗಾಂವ್ಕರ್, ಉಪ್ಪುಂದ ಗಣೇಶ್, ಪ್ರಶಾಂತ್ ಹೆಗಡೆ, ಮನೋಜ್ ಭಟ್, ನರಸಿಂಹ ತುಂಗ, ಉದಯ ಬೋವಿ, ನವೀನ್ ಮತ್ತಿತರರು ಭಾಗವಹಿಸುವರು.