ಅಪ್ಪ ಕೆ. ಹಿರಣ್ಣಯ್ಯ, ಮಗ ಮಾಸ್ಟರ್ ಹಿರಣ್ಣಯ್ಯ. ಈ ಎರಡೂ ಹೆಸರು ಹೇಳದಿದ್ದರೆ ಕನ್ನಡ ರಂಗಭೂಮಿಯ ಚರಿತ್ರೆಯೇ ಅಪೂರ್ಣ, ನರಸಿಂಹಮೂರ್ತಿ ಎಂಬುದು ಮಾಸ್ಟರ್ ಹಿರಣ್ಣಯ್ಯನವರ ನಿಜ ನಾಮಧೇಯ. ಮಾಸ್ಟರ್ಗೆ ಅಭಿನಯ, ರಂಗಮಾತು, ಒಟ್ಟಾರೆ ರಂಗ ಸಂಸ್ಕೃತಿಯನ್ನು ಕಲಿಸಿದ್ದು ಬದುಕಿನ ರಂಗಶಾಲೆ. ಎಳಮೆಯಿಂದಲೇ ಅಸ್ತಿತ್ವಕ್ಕಾಗಿ ಹೋರಾಟ. ರಂಗಸ್ಥಳಕ್ಕೆ ಕಾಲಿಟ್ಟ ಮೇಲೆ ಅಪ್ಪನನ್ನೇ ಮೀರಿಸಿದಂಥಅಪ್ರತಿಮ ಪ್ರತಿಭಾಶಾಲಿ, ಲಂಚವಿನ್ನೂ ಸಾಮಾಜಿಕ 'ಮೌಲ್ಯದಲೇಪ' ಧರಿಸುವಾಗಲೇ ಇವರಿಂದ ಲಂಚಾವತಾರ ನಾಟಕ ರಚನೆ, ಅದು ಎಂಟು ಸಾವಿರಕ್ಕೂ ಹೆಚ್ಚು ಪ್ರದರ್ಶನಗೊಂಡ ದೊಡ್ಡ ದಾಖಲೆ.