<p><strong>ಬೆಂಗಳೂರು:</strong> ವಿಧಾನಪರಿಷತ್ ಸದಸ್ಯ ಮತ್ತು ಮುಖಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜ್ ಅವರು ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಕರ್ನಾಟಕ ಒಲಿಂಪಿಕ್ ಭವನದಲ್ಲಿ ಭಾನುವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಂದಿನ ನಾಲ್ಕು ವರ್ಷಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.</p>.<p>ಉಪಾಧ್ಯಕ್ಷ ಸೋಮಶೇಖರ್ ಅವರ ಬದಲಿಗೆ ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಗೋರೆ ಅವರು ಆಯ್ಕೆಯಾದರು. ಈ ಬದಲಾವಣೆ ಬಿಟ್ಟರೆ ಉಳಿದಂತೆ ಎಲ್ಲರೂ ಪುನರಾಯ್ಕೆ ಆದರು.</p>.<p><strong>ಪದಾಧಿಕಾರಿಗಳು: </strong>ಕೆ.ಗೋವಿಂದರಾಜ್ (ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆ–ಅಧ್ಯಕ್ಷ); ಎಂ.ಮೋಹನರಾಜ್ (ಫುಟ್ಬಾಲ್ ಸಂಸ್ಥೆ), ಜೆ.ಪಿ.ಕಾರ್ನೆರೊ (ಟ್ರಯಾಥ್ಲಾನ್ ಸಂಸ್ಥೆ), ಎಸ್.ಎಂ.ಗೋರೆ (ಅಮೆಚೂರ್ ಸೈಕ್ಲಿಂಗ್ ಸಂಸ್ಥೆ), ಆರ್.ವೆಂಕಟೇಶ್ (ಅಮೆಚೂರ್ ಆರ್ಚರಿ ಸಂಸ್ಥೆ), ಡಿ.ಚಂದ್ರಹಾಸ ರೈ (ವೇಟ್ಲಿಫ್ಟಿಂಗ್ ಸಂಸ್ಥೆ–ಎಲ್ಲರೂ ಉಪಾಧ್ಯಕ್ಷರು); ಅನಂತರಾಜು (ಅಮೆಚೂರ್ ಆರ್ಚರಿ ಸಂಸ್ಥೆ–ಪ್ರಧಾನ ಕಾರ್ಯದರ್ಶಿ); ಎಸ್.ಆರ್.<br /> ಶಿವಾನಂದ (ಜೂಡೊ ಸಂಸ್ಥೆ–ಜಂಟಿ ಕಾರ್ಯದರ್ಶಿ), ಆರ್.ಪ್ರಕಾಶ್ (ಫೆನ್ಸಿಂಗ್ ಸಂಸ್ಥೆ–ಜಂಟಿ ಕಾರ್ಯದರ್ಶಿಗಳು); ರಾಜೇಶ್ ಎನ್.ಜಗ<br /> ದಾಳೆ (ಶೂಟಿಂಗ್ ಸಂಸ್ಥೆ–ಖಜಾಂಚಿ); ಬ್ಯಾಡ್ಮಿಂಟನ್ ಸಂಸ್ಥೆ, ಕನೋಯಿಂಗ್ ಮತ್ತು ಕಯಾಕಿಂಗ್ ಸಂಸ್ಥೆ, ಹಾಕಿ ಕರ್ನಾಟಕ, ಲಾನ್ ಟೆನಿಸ್ ಸಂಸ್ಥೆ, ಈಜು ಸಂಸ್ಥೆ, ಟೇಕ್ವಾಂಟೊ ಸಂಸ್ಥೆ, ವಾಲಿಬಾಲ್ ಸಂಸ್ಥೆ ಮತ್ತು ಕುಸ್ತಿ ಸಂಸ್ಥೆಗಳನ್ನು ಕಾರ್ಯಕಾರಿ ಸಮಿತಿಗೆ ಸೇರಿಸಲಾಯಿತು.</p>.<p>ಜಿಲ್ಲಾ ನಿವೃತ್ತ ನ್ಯಾಯಾಧೀಶ ಪಿ.ಎಸ್. ಹಿರೇಮಠ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಿಧಾನಪರಿಷತ್ ಸದಸ್ಯ ಮತ್ತು ಮುಖಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜ್ ಅವರು ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಕರ್ನಾಟಕ ಒಲಿಂಪಿಕ್ ಭವನದಲ್ಲಿ ಭಾನುವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಂದಿನ ನಾಲ್ಕು ವರ್ಷಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.</p>.<p>ಉಪಾಧ್ಯಕ್ಷ ಸೋಮಶೇಖರ್ ಅವರ ಬದಲಿಗೆ ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಗೋರೆ ಅವರು ಆಯ್ಕೆಯಾದರು. ಈ ಬದಲಾವಣೆ ಬಿಟ್ಟರೆ ಉಳಿದಂತೆ ಎಲ್ಲರೂ ಪುನರಾಯ್ಕೆ ಆದರು.</p>.<p><strong>ಪದಾಧಿಕಾರಿಗಳು: </strong>ಕೆ.ಗೋವಿಂದರಾಜ್ (ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆ–ಅಧ್ಯಕ್ಷ); ಎಂ.ಮೋಹನರಾಜ್ (ಫುಟ್ಬಾಲ್ ಸಂಸ್ಥೆ), ಜೆ.ಪಿ.ಕಾರ್ನೆರೊ (ಟ್ರಯಾಥ್ಲಾನ್ ಸಂಸ್ಥೆ), ಎಸ್.ಎಂ.ಗೋರೆ (ಅಮೆಚೂರ್ ಸೈಕ್ಲಿಂಗ್ ಸಂಸ್ಥೆ), ಆರ್.ವೆಂಕಟೇಶ್ (ಅಮೆಚೂರ್ ಆರ್ಚರಿ ಸಂಸ್ಥೆ), ಡಿ.ಚಂದ್ರಹಾಸ ರೈ (ವೇಟ್ಲಿಫ್ಟಿಂಗ್ ಸಂಸ್ಥೆ–ಎಲ್ಲರೂ ಉಪಾಧ್ಯಕ್ಷರು); ಅನಂತರಾಜು (ಅಮೆಚೂರ್ ಆರ್ಚರಿ ಸಂಸ್ಥೆ–ಪ್ರಧಾನ ಕಾರ್ಯದರ್ಶಿ); ಎಸ್.ಆರ್.<br /> ಶಿವಾನಂದ (ಜೂಡೊ ಸಂಸ್ಥೆ–ಜಂಟಿ ಕಾರ್ಯದರ್ಶಿ), ಆರ್.ಪ್ರಕಾಶ್ (ಫೆನ್ಸಿಂಗ್ ಸಂಸ್ಥೆ–ಜಂಟಿ ಕಾರ್ಯದರ್ಶಿಗಳು); ರಾಜೇಶ್ ಎನ್.ಜಗ<br /> ದಾಳೆ (ಶೂಟಿಂಗ್ ಸಂಸ್ಥೆ–ಖಜಾಂಚಿ); ಬ್ಯಾಡ್ಮಿಂಟನ್ ಸಂಸ್ಥೆ, ಕನೋಯಿಂಗ್ ಮತ್ತು ಕಯಾಕಿಂಗ್ ಸಂಸ್ಥೆ, ಹಾಕಿ ಕರ್ನಾಟಕ, ಲಾನ್ ಟೆನಿಸ್ ಸಂಸ್ಥೆ, ಈಜು ಸಂಸ್ಥೆ, ಟೇಕ್ವಾಂಟೊ ಸಂಸ್ಥೆ, ವಾಲಿಬಾಲ್ ಸಂಸ್ಥೆ ಮತ್ತು ಕುಸ್ತಿ ಸಂಸ್ಥೆಗಳನ್ನು ಕಾರ್ಯಕಾರಿ ಸಮಿತಿಗೆ ಸೇರಿಸಲಾಯಿತು.</p>.<p>ಜಿಲ್ಲಾ ನಿವೃತ್ತ ನ್ಯಾಯಾಧೀಶ ಪಿ.ಎಸ್. ಹಿರೇಮಠ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>