ಬಸವಣ್ಣನವರ ಸಮಗ್ರ ಕ್ರಾಂತಿಯನ್ನು ಚಿತ್ರೀಕರಿಸುತ್ತಾ ಆರಂಭವಾಗುವ ಕೃತಿ, ಲಿಂಗಾಯತ ಧರ್ಮ ಸಂವಿಧಾನ ಮತ್ತು ಭಾರತ ದೇಶದ ಸಂವಿಧಾನದ ತುಲನಾತ್ಮಕ ಅಧ್ಯಯನವನ್ನೂ ನಡೆಸಿದೆ. ಲಿಂಗಾಯತ ಧರ್ಮದ ಸಂಸ್ಕೃತಿಯಲ್ಲಾಗುತ್ತಿರುವ ಬದಲಾವಣೆಗಳನ್ನೂ ಅವರು ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಾರೆ. ‘ವಚನಗಳು ನಮ್ಮ ವರ್ತನೋಪದೇಶವಾಗಲಿ’ ಎನ್ನುವ ಅಧ್ಯಾಯದಲ್ಲಿ ವಚನಗಳು ಕೇವಲ ಬೇರೆಯವರಿಗೆ ಹೇಳುವ ಉಪದೇಶವಾಗದಿರಲಿ ಎನ್ನುವುದನ್ನು ಅವರು ವಿವರಿಸಿದ್ದಾರೆ. ಪ್ರತಿ ಅಧ್ಯಾಯದಲ್ಲೂ ಸಂದರ್ಭೋಚಿತವಾಗಿ ವಚನಗಳನ್ನು ಉಲ್ಲೇಖಿಸುತ್ತಾ, ವಿಷಯದ ವಿವರಣೆ ಇರುವುದು ವಿಶೇಷ.