ಕೃತಿಯ ಅಗತ್ಯವೇನೋ ಎಂಬಂತೆ ಒಂದಿಷ್ಟು ‘ರಾಷ್ಟ್ರೀಯವಾದಿ’, ‘ಪುರೋಹಿತಶಾಹಿ’ಗಳನ್ನು ಟೀಕಿಸಿದ್ದೂ ಇದೆ. ಚಿಂತನೆ ಮತ್ತು ವಾಸ್ತವದ ವೈರುಧ್ಯಗಳನ್ನು ತೆರೆದಿಟ್ಟದ್ದೂ ಇದೆ. ಲೇಖನಗಳನ್ನು ನಾಡಿನ ಖ್ಯಾತನಾಮ ವಿದ್ವಾಂಸರು, ಲೇಖಕರು, ಪತ್ರಕರ್ತರು ಬರೆದಿದ್ದಾರೆ. ಹಾಗಾಗಿ ವಿಶ್ಲೇಷಣೆಗಳಲ್ಲಿ ತೀಕ್ಷ್ಣತೆಯೂ ಉಂಟು. ಸಿದ್ದರಾಮಯ್ಯ ಅವರನ್ನು ತಿಳಿದುಕೊಳ್ಳುವ ನೆಪದಲ್ಲಿ, ಕಾಂಗ್ರೆಸ್, ರಾಜಕೀಯ ಸಿದ್ಧಾಂತ, ಸಮಕಾಲೀನ ರಾಜಕೀಯ ಪಲ್ಲಟಗಳನ್ನು ಓದುವ ಅವಕಾಶ ಇಲ್ಲಿದೆ.