ಕೃತಿಯಲ್ಲಿ ಮೂರು ಭಾಗಗಳಿವೆ. ವಂಶವೃಕ್ಷ, ಜಟಿಲಸಿಕ್ಕು, ಹಾಲಿ ಮತ್ತು ಭವಿಷ್ಯದ ಭಾರತದ ದೃಷ್ಟಿಯ ಅಸ್ತಿ ಭಾರ ಎಂಬ ವಿಭಾಗಗಳಿವು. ಒಟ್ಟಿನಲ್ಲಿ 2014ರ ನಂತರ ಬದಲಾದ, ಬದಲಾಗುತ್ತಿರುವ ಭಾರತದತ್ತ, ರಾಜಕೀಯ ವಿದ್ಯಮಾನಗಳತ್ತ ಹೆಚ್ಚು ಗಮನಹರಿಸಿದೆ ಈ ಕೃತಿ. ಸಹಜವಾಗಿ 2014ರ ನಂತರದ ಬದಲಾವಣೆಯನ್ನು ಬಲವಾಗಿ ಸ್ಥಿರೀಕರಿಸುವ ಆಶಯವೂ ಕೃತಿಗಿದೆ. ಹಾಗಾಗಿ ‘ಅಸ್ತಿಭಾರ’ ವಿಭಾಗದಲ್ಲಿ ಆಡಳಿತ ವ್ಯವಸ್ಥೆ (ಧರ್ಮ ರಾಜ್ಯ)ಯಿಂದ ಹಿಡಿದು ರಾಮ ರಾಜ್ಯ– ಆದರ್ಶ ರಾಜ್ಯ, ಆರ್ಥಿಕತೆ, ಸದ್ಯ ಪ್ರತಿಪಾದಿಸುತ್ತಿರುವ ಆತ್ಮ ನಿರ್ಭರ ಭಾರತದ ಕುರಿತೇ ಚರ್ಚೆ ಕೇಂದ್ರೀಕೃತವಾಗಿದೆ. ಸಣ್ಣ ಸಣ್ಣ ವಿಷಯಗಳಿಗೂ ವಿವರಗಳಿವೆ. ಆರ್ಥಿಕ ಸಮೃದ್ಧಿಯೇ ಅಂತಿಮವಲ್ಲ ಎಂಬ ಧೋರಣೆಯನ್ನು ಇಲ್ಲಿನ ಚರ್ಚೆ ಪ್ರತಿಪಾದಿಸುತ್ತಿದೆ. ಭಾರತೀಯನೊಬ್ಬ ಸ್ವಾವಲಂಬಿಯಾಗಿ ವ್ಯಕ್ತಿ ಘನತೆಯನ್ನು ಕಾಪಾಡಿಕೊಂಡು ಬಾಳುವ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಹೊಂದುವ ಪರಿಕಲ್ಪನೆಗಳನ್ನು ನೀಡಲಾಗಿದೆ.