ಹುಟ್ಟೂರು ಎಂದರೆ ಹಳ್ಳಿಯೇ ಎಂದು ನಿರ್ದಿಷ್ಟವಾಗಿ ಹೇಳಬೇಕಿಲ್ಲ. ಏಕೆಂದರೆ ಒಂದಾನೊಂದು ಕಾಲದಲ್ಲಿ ದೇಶವೆಲ್ಲಾ ಬಹುಪಾಲು ಹಳ್ಳಿಗಳಿಂದಲೇ ಕೂಡಿತ್ತು. ನಿಜಕ್ಕೂ ಗ್ರಾಮಭಾರತವಾಗಿತ್ತು. ಭೂತಕಾಲ ಅದು. ಈಗ ಇಂತಹ ಗ್ರಾಮಭಾರತದ ಕುರುಹು ಅಷ್ಟಿಷ್ಟು ಇನ್ನೂ ಉಳಿದುಕೊಂಡಿದೆ. ಹೀಗೊಂದು ಹಳ್ಳಿಯ ಈ ಯುವಕರು ನಕ್ಸಲಿಸಂ ಚಳವಳಿಯ ಕುರಿತು ಒಲವು ಬೆಳೆಸಿಕೊಂಡಿರುತ್ತಾರೆ. ಆದರೆ ಚಳವಳಿಯ ಆಳಕ್ಕೆ ಧುಮುಕದೆ, ಸಮಾಜದೊಂದಿಗೆ ಬೆರೆತುಕೊಂಡೇ ಸುಧಾರಣೆ, ಕ್ರಾಂತಿ ಸಾಧ್ಯವಾಗಿಸಿಕೊಳ್ಳುತ್ತಾರೆ.