ವಿದ್ಯಾರ್ಥಿಗಳಿಗೆ ಬೆಳಗಿನ ಆಹಾರ ಪೂರೈಸುವ ಸಲುವಾಗಿ ಹುಟ್ಟಿಕೊಂಡ ಕ್ಯಾಂಟೀನು ಎಂಬ ದಾಸೋಹ ಕೇಂದ್ರ ‘ಕೈಗೂ ಬಂದು ಮತ್ತೆ ಬಾಯಿಗೂ ಬಂದ ತುತ್ತು’ ಒದಗಿಸಿದ್ದು, ವಿದ್ಯಾರ್ಥಿಗಳಿಗೆ ಸಮವಸ್ತ್ರ ರೂಪಿಸಿದ್ದು, ಹರಸಾಹಸ ಮಾಡಿ ಬಯಲು ರಂಗಮಂದಿರ ಕಟ್ಟಿದ್ದು, ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಪ್ರಾಣ ರಕ್ಷಣೆಗಾಗಿ ರಸ್ತೆ ಉಬ್ಬು ಹಾಕಲು ಸಾಹಸಪಟ್ಟಿದ್ದು, ಕಾಲೇಜಿಗೆ 150 ವರ್ಷಗಳ ಸಂಭ್ರಮಾಚರಣೆಗೆ ನಿಂತಿದ್ದು... ಹೀಗೆ ಇದು ಪ್ರಾಂಶುಪಾಲರೊಬ್ಬರ ವೃತ್ತಿ ಬದುಕಿನ ದಾಖಲೆಯೂ ಹೌದು, ಅವಲೋಕನವೂ ಹೌದು. ಹೇಳಿಕೊಳ್ಳಲೇಬೇಕೆನಿಸಿದ ಆತ್ಮ ವೃತ್ತಾಂತದಂತೆಯೂ ಈ ಕೃತಿಯ ಲೇಖನಗಳು ಓದಿಸಿಕೊಂಡು ಹೋಗುತ್ತವೆ. ನಿರೂಪಣೆಯೂ ಚೆನ್ನಾಗಿದೆ. ಅನೇಕ ಬಾರಿ ಇಂಥ ಸಾಹಸಗಳಲ್ಲಿ ಗೆದ್ದೂ ವ್ಯವಸ್ಥೆಯ ನಡುವೆ ‘ದುಃಖ’ ಅನುಭವಿಸಿದ ಛಾಯೆಯೂ ಅಲ್ಲಲ್ಲಿ ಇಣುಕಿದೆ.