ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಹಾಡಷ್ಟೇ ಅಲ್ಲ, ಆಳಕ್ಕಿಳಿದ ಆಲಾಪ

Last Updated 28 ಜನವರಿ 2023, 19:31 IST
ಅಕ್ಷರ ಗಾತ್ರ

ಹಲವು ಸಾಹಿತ್ಯ ಪ್ರಕಾರಗಳ ಪರಿಚಯ (ಗಝಲ್‌, ಹಾಯ್ಕು, ಕವಿತೆ, ಬರಹ...), ಅವುಗಳ ಒಂದಿಷ್ಟು ಉದಾಹರಣೆ, ಸರಳವಾದ ನಿರೂಪಣೆ, ತನ್ನದೇ ಆದ ವಿಮರ್ಶೆಯ ಕಿರುನೋಟ –ಇವು ಈ ಕೃತಿಯ ಜೀವಾಳ. ಹೌದು ಒಲಿದಂತೆ ಹಾಡಿದ್ದಷ್ಟೇ ಅಲ್ಲ, ಆಳಕ್ಕಿಳಿದು ಆಲಾಪಿಸಿದ್ದೂ ಬರಹಗಳಲ್ಲಿ ಇಣುಕಿದಾಗ ಕಾಣುತ್ತದೆ.

ಕೃತಿಯಲ್ಲಿ ಲಂಕೇಶರ ನೆನಪುಗಳಿವೆ, ಪತ್ರಕರ್ತರ ಬಗೆಗೆ ಅಭಿಮಾನದ ನುಡಿಗಳಿವೆ. ನಾಡಿನ ಪ್ರಮುಖ ಬರಹಗಾರರ ಕೃತಿಗಳ ಆಳವಾದ ಓದು ಮತ್ತು ಒಳನೋಟ ಇದೆ. ಲೇಖಕರು ವಿಮರ್ಶೆಗೊಳಪಡಿಸಿದ ಹೆಚ್ಚಿನ ಸಾಹಿತ್ಯ ಕೃತಿಗಳು ಗಝಲ್‌, ಕವನ ಸಂಕಲನಗಳಿಗೆ ಸೇರಿದವುಗಳು. ಅವುಗಳನ್ನು ಅಲ್ಲಲ್ಲಿ ಉದಾಹರಿಸಿರುವುದರಿಂದ ಓದುವಿಕೆಯ ಓಘವನ್ನು ಸರಾಗವಾಗಿಸಿವೆ. ಏಕತಾನತೆ ನೀಗಿಸಿವೆ. ಮಾತ್ರವಲ್ಲ, ಕನ್ನಡದ ಪುಟ್ಟ ಪುಟ್ಟ ಕವಿಗಳು ವಿಮರ್ಶೆಯ ಮೂಸೆಯಲ್ಲಿ ಇಲ್ಲಿ ದಾಖಲಾಗಿದ್ದು ಕೂಡ ಗಮನಾರ್ಹವಾಗಿದೆ.

ಅಕ್ಬರನ ಮನೆಯಲ್ಲಿ ರಾಮ; ಕೃಷ್ಣನ ಮನೆಯಲ್ಲಿ ರಹೀಮ/ ಒಬ್ಬರನ್ನೊಬ್ಬರು ಬಚ್ಚಿಟ್ಟುಕೊಂಡು ಕಾಪಾಡಿದೆವು.../ ಇಂದು ರಾಮನನ್ನು ಕೊಲ್ಲಲು ಅಕ್ಬರನು ಕತ್ತಿ ಮಸೆಯುತಿಹನು/ ರಹೀಮನನ್ನು ಕೊಲ್ಲಲು ಕೃಷ್ಣನು ಹೊಂಚು ಹಾಕುತಿಹನು. (ಕವಯಿತ್ರಿ ನೂರ್‌ ಜಹಾನ್‌ ಅವರ ಸಾಲುಗಳು) ಇಂಥ ಉದಾಹರಣೆಗಳನ್ನು ಉಲ್ಲೇಖಿಸಿ ಕವಿಯ ಜವಾಬ್ದಾರಿಯನ್ನು ಎತ್ತಿ ಹಿಡಿದಿದ್ದಾರೆ ಲೇಖಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT