ಪಂ. ಸೋಮನಾಥ ಮರಡೂರ. ಹೆಸರು ಕೇಳಿದರೆ ಸಾಕು, ವೇದಿಕೆ ಮುಂದೆ ಹಾಜರಾಗುತ್ತಾರೆ ಸಂಗೀತಪ್ರೇಮಿಗಳು. ಪಂ. ಸೋಮನಾಥರ ಸಂಗೀತ ಸುಧೆಯ ವೈಖರಿಯೇ ಅಂಥದ್ದು. ಇದೇ 25ರಂದು, ಭಾನುವಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಖಯಾಲ್ ಸಂಗೀತ ಉತ್ಸವದಲ್ಲಿ ಅವರ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮವಿದೆ. ಇದೇ ಸಂದರ್ಭದಲ್ಲಿ ಅವರಿಗೆ ‘ಖಯಾಲ್ ಸಂಗೀತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.