ಮೈಸೂರು: ದಸರಾ ಅಂಗವಾಗಿ ಅರಮನೆ ವೇದಿಕೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ‘ಪ್ರಜಾವಾಣಿ’ ಫೇಸ್ಬುಕ್ನಲ್ಲಿ ಅರಮನೆ ಆವರಣದಿಂದ ನೇರ ಪ್ರಸಾರವಾಗುತ್ತಿವೆ.
ಇಂದು ಸಂಜೆ ಸಂಜೆ 7 ಗಂಟೆಗೆ ಜಾನಪದ ಗಾಯನ ಕಾರ್ಯಕ್ರಮ ನಡೆಯುತ್ತಿದ್ದು, ‘ಹೊನ್ನಾರು ಜನಪದ ಗಾಯಕರು’ ಮೈಸೂರಿನ ಡಾ. ಪಿ.ಕೆ. ರಾಜಶೇಖರ್ ಮತ್ತು ತಂಡ ನಡೆಸಿಕೊಡುತ್ತಿದೆ.
ಹಿಂದೂಸ್ತಾನಿ –ಕರ್ನಾಟಕ ಶಾಸ್ತ್ರೀಯ ಸಂಗೀತ ಜುಗಲ್ಬಂದಿ
ರಾತ್ರಿ 8 ಗಂಟೆಗೆಹಿಂದೂಸ್ತಾನಿ –ಕರ್ನಾಟಕ ಶಾಸ್ತ್ರೀಯ ಸಂಗೀತ ಜುಗಲ್ಬಂದಿ ನಡೆಯಲಿದೆ. ಮೈಸೂರಿನ ವಿದ್ವಾನ್ ಶಫೀಕ್ ಖಾನ್ (ಸಿತಾರ್) ಹಾಗೂ ವಿದ್ವಾನ್ ಕಾರ್ತಿಕ್ ನಾಗರಾಜ್ (ವಯೊಲಿನ್) ಮತ್ತು ತಂಡ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ನಿಮ್ಮ ಪ್ರಜಾವಾಣಿ ಫೇಸ್ಬುಕ್ ಲೈವ್ನಲ್ಲಿ https://www.facebook.com/prajavani.net/ ಇದ್ದಲ್ಲಿಯೇ ಕಾರ್ಯಕ್ರಮ ವೀಕ್ಷಿಸಬಹುದು.