<p><strong>ಶಿವನ ಸತಿ ಪಾರ್ವತಿಯು<br />ಸ್ನಾನ ಮಾಡಲು ಹೊರಟಿರಲು<br />ಮನದಿ ಮೂಡಿತು ಚಿಂತೆಯು<br />ಯಾರು ಕಾಯುವರು ಬಾಗಿಲು</strong></p>.<p><strong>ಮೈಯ ಮಣ್ಣಲಿ ಮೂರ್ತಿ ಮಾಡಿ<br />ಜೀವವ ತುಂಬಿ ಕಾವಲಿಟ್ಟಳು<br />ಯಾರೇ ಬಂದರೂ ಬಿಡದಂತೆ<br />ಕಟ್ಟುನಿಟ್ಟಿನ ಆಜ್ಞೆಯಿತ್ತಳು</strong></p>.<p><strong>ಬಾಗಿಲು ಬಳಿ ಬಂದ ಶಿವನು<br />ಪುಟ್ಟ ಬಾಲಕನ ಕಂಡನು<br />ಯಾರು ನೀನು ದಾರಿಬಿಡು<br />ಎನ್ನುತ ಕೋಪಗೊಂಡನು</strong></p>.<p><strong>ತಾಯಿಮಾತಿಗೆ ಬದ್ಧನಾಗಿಹೆನು<br />ಯಾರನ್ನೂ ಒಳಗೆ ಬಿಡಲಾರೆ<br />ಅಡ್ಡಗಟ್ಟಿ ನಿಲ್ಲುತ ಹೇಳಿದ<br />ಬನ್ನಿ ನೋಡುವೆ ಧೈರ್ಯವಿದ್ದರೆ</strong></p>.<p><strong>ಬಿಡದೆ ಇರಲು ಯುದ್ಧವಾಗಿ<br />ಮಾತಿಗೆ ಮಾತು ಬೆಳೆಯಿತು<br />ಶಿವನ ಕೋಪ ಹೆಚ್ಚಾಗಿ<br />ಬಾಲಕನ ತಲೆಯೇ ಹೋಯಿತು</strong></p>.<p><strong>ಪೂಜೆಯ ಮಾಡಲು ಅಣಿಯಾಗಿ<br />ಪಾರ್ವತಿ ಬಂದಳು ಹರುಷದಲಿ<br />ಮಗುವಿನ ದೇಹದ ರೂಪವ ಕಂಡು<br />ಕುಸಿದಳು ನೆಲಕೆ ದುಃಖದಲಿ</strong></p>.<p><strong>ಬೇಡಿಕೊಂಡಳು ಶಿವನನ್ನು<br />ಬದುಕಿಸುವಂತೆ ಮಗನನ್ನು<br />ಸತಿಯ ಸಂಕಟ ತಾಳಲಾರದೆ<br />ದೂತರ ಕರೆದನು ತಡಮಾಡದೆ</strong></p>.<p><strong>ಉತ್ತರ ದಿಕ್ಕಿಗೆ ಮಲಗಿರುವ<br />ಪ್ರಾಣಿಯ ತಲೆಯನ್ನು ತನ್ನಿರಿ<br />ಹುಡುಕುತ ಹೋದ ದೂತರು<br />ಆನೆಯ ತಲೆಯ ತಂದರು</strong></p>.<p><strong>ಬಾಲಕನಿಗೆ ಆನೆಯ ತಲೆಯನ್ನು<br />ಜೋಡಿಸಿ ಜೀವವ ನೀಡಿದ ಶಿವನು<br />ಉದ್ದ ಸೊಂಡಿಲಿನ ಅಗಲ ಕಿವಿಯ<br />ಗಜಮುಖನಾದನು ಗಣಪತಿಯು</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಶಿವನ ಸತಿ ಪಾರ್ವತಿಯು<br />ಸ್ನಾನ ಮಾಡಲು ಹೊರಟಿರಲು<br />ಮನದಿ ಮೂಡಿತು ಚಿಂತೆಯು<br />ಯಾರು ಕಾಯುವರು ಬಾಗಿಲು</strong></p>.<p><strong>ಮೈಯ ಮಣ್ಣಲಿ ಮೂರ್ತಿ ಮಾಡಿ<br />ಜೀವವ ತುಂಬಿ ಕಾವಲಿಟ್ಟಳು<br />ಯಾರೇ ಬಂದರೂ ಬಿಡದಂತೆ<br />ಕಟ್ಟುನಿಟ್ಟಿನ ಆಜ್ಞೆಯಿತ್ತಳು</strong></p>.<p><strong>ಬಾಗಿಲು ಬಳಿ ಬಂದ ಶಿವನು<br />ಪುಟ್ಟ ಬಾಲಕನ ಕಂಡನು<br />ಯಾರು ನೀನು ದಾರಿಬಿಡು<br />ಎನ್ನುತ ಕೋಪಗೊಂಡನು</strong></p>.<p><strong>ತಾಯಿಮಾತಿಗೆ ಬದ್ಧನಾಗಿಹೆನು<br />ಯಾರನ್ನೂ ಒಳಗೆ ಬಿಡಲಾರೆ<br />ಅಡ್ಡಗಟ್ಟಿ ನಿಲ್ಲುತ ಹೇಳಿದ<br />ಬನ್ನಿ ನೋಡುವೆ ಧೈರ್ಯವಿದ್ದರೆ</strong></p>.<p><strong>ಬಿಡದೆ ಇರಲು ಯುದ್ಧವಾಗಿ<br />ಮಾತಿಗೆ ಮಾತು ಬೆಳೆಯಿತು<br />ಶಿವನ ಕೋಪ ಹೆಚ್ಚಾಗಿ<br />ಬಾಲಕನ ತಲೆಯೇ ಹೋಯಿತು</strong></p>.<p><strong>ಪೂಜೆಯ ಮಾಡಲು ಅಣಿಯಾಗಿ<br />ಪಾರ್ವತಿ ಬಂದಳು ಹರುಷದಲಿ<br />ಮಗುವಿನ ದೇಹದ ರೂಪವ ಕಂಡು<br />ಕುಸಿದಳು ನೆಲಕೆ ದುಃಖದಲಿ</strong></p>.<p><strong>ಬೇಡಿಕೊಂಡಳು ಶಿವನನ್ನು<br />ಬದುಕಿಸುವಂತೆ ಮಗನನ್ನು<br />ಸತಿಯ ಸಂಕಟ ತಾಳಲಾರದೆ<br />ದೂತರ ಕರೆದನು ತಡಮಾಡದೆ</strong></p>.<p><strong>ಉತ್ತರ ದಿಕ್ಕಿಗೆ ಮಲಗಿರುವ<br />ಪ್ರಾಣಿಯ ತಲೆಯನ್ನು ತನ್ನಿರಿ<br />ಹುಡುಕುತ ಹೋದ ದೂತರು<br />ಆನೆಯ ತಲೆಯ ತಂದರು</strong></p>.<p><strong>ಬಾಲಕನಿಗೆ ಆನೆಯ ತಲೆಯನ್ನು<br />ಜೋಡಿಸಿ ಜೀವವ ನೀಡಿದ ಶಿವನು<br />ಉದ್ದ ಸೊಂಡಿಲಿನ ಅಗಲ ಕಿವಿಯ<br />ಗಜಮುಖನಾದನು ಗಣಪತಿಯು</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>