ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿಗೆ ಗಜಮುಖ

Last Updated 31 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಶಿವನ ಸತಿ ಪಾರ್ವತಿಯು
ಸ್ನಾನ ಮಾಡಲು ಹೊರಟಿರಲು
ಮನದಿ ಮೂಡಿತು ಚಿಂತೆಯು
ಯಾರು ಕಾಯುವರು ಬಾಗಿಲು

ಮೈಯ ಮಣ್ಣಲಿ ಮೂರ್ತಿ ಮಾಡಿ
ಜೀವವ ತುಂಬಿ ಕಾವಲಿಟ್ಟಳು
ಯಾರೇ ಬಂದರೂ ಬಿಡದಂತೆ
ಕಟ್ಟುನಿಟ್ಟಿನ ಆಜ್ಞೆಯಿತ್ತಳು

ಬಾಗಿಲು ಬಳಿ ಬಂದ ಶಿವನು
ಪುಟ್ಟ ಬಾಲಕನ ಕಂಡನು
ಯಾರು ನೀನು ದಾರಿಬಿಡು
ಎನ್ನುತ ಕೋಪಗೊಂಡನು

ತಾಯಿಮಾತಿಗೆ ಬದ್ಧನಾಗಿಹೆನು
ಯಾರನ್ನೂ ಒಳಗೆ ಬಿಡಲಾರೆ
ಅಡ್ಡಗಟ್ಟಿ ನಿಲ್ಲುತ ಹೇಳಿದ
ಬನ್ನಿ ನೋಡುವೆ ಧೈರ್ಯವಿದ್ದರೆ

ಬಿಡದೆ ಇರಲು ಯುದ್ಧವಾಗಿ
ಮಾತಿಗೆ ಮಾತು ಬೆಳೆಯಿತು
ಶಿವನ ಕೋಪ ಹೆಚ್ಚಾಗಿ
ಬಾಲಕನ ತಲೆಯೇ ಹೋಯಿತು

ಪೂಜೆಯ ಮಾಡಲು ಅಣಿಯಾಗಿ
ಪಾರ್ವತಿ ಬಂದಳು ಹರುಷದಲಿ
ಮಗುವಿನ ದೇಹದ ರೂಪವ ಕಂಡು
ಕುಸಿದಳು ನೆಲಕೆ ದುಃಖದಲಿ

ಬೇಡಿಕೊಂಡಳು ಶಿವನನ್ನು
ಬದುಕಿಸುವಂತೆ ಮಗನನ್ನು
ಸತಿಯ ಸಂಕಟ ತಾಳಲಾರದೆ
ದೂತರ ಕರೆದನು ತಡಮಾಡದೆ

ಉತ್ತರ ದಿಕ್ಕಿಗೆ ಮಲಗಿರುವ
ಪ್ರಾಣಿಯ ತಲೆಯನ್ನು ತನ್ನಿರಿ
ಹುಡುಕುತ ಹೋದ ದೂತರು
ಆನೆಯ ತಲೆಯ ತಂದರು

ಬಾಲಕನಿಗೆ ಆನೆಯ ತಲೆಯನ್ನು
ಜೋಡಿಸಿ ಜೀವವ ನೀಡಿದ ಶಿವನು
ಉದ್ದ ಸೊಂಡಿಲಿನ ಅಗಲ ಕಿವಿಯ
ಗಜಮುಖನಾದನು ಗಣಪತಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT