<p>ಊರ ಅಗಸ್ಯಾಗ ಬರಿಗಾಲಿಗೆ ಬರವಿಲ್ಲ<br />ಮೋಡ ಸೇರುವ ದೂಳದ್ಹುಡಿಗೆ ಕೊನೆಯಿಲ್ಲ<br />ದಣಿವಿಲ್ಲ ತಾಯಿ ತಲೆಮ್ಯಾಲಿನ ಸಿಂಬೀಗಿ<br />ಆಗಂತುಕದತ್ತ ಮುಖ ಮಾಡಿ...</p>.<p>ಹಳ್ಳದ ದಂಡ್ಯಾಗ ಮುಖ ಮಜ್ಜನ ಮಾಡಿ<br />ಕೂರಿಗೆ ಕುಂಟಿಗೆ ಎಡಿ ಮಾಡಿ..<br />ಜೋಡೆತ್ತ ಜೊತೆಗೂಡಿ ನಡೆಯುತ್ತ<br />ಆಗಂತುಕದತ್ತ ಮುಖ ಮಾಡಿ...</p>.<p>ಹರಿದ ಚಡ್ಡಿಗೆ ತ್ಯಾಪಿಯ ಹಚ್ಚಿಕೊಂಡು<br />ಮುಂಡಾಸ ಧರಿಸಿ ಮೈಯ ಮುಚ್ಚಿಕೊಂಡು<br />ಸೂರ್ಯ ಹುಟ್ಟಿದರೆಷ್ಟ..<br />ಸೂರ್ಯ ಮುಳುಗಿದರೆಷ್ಟ..</p>.<p>ಅರಿವಿಲ್ಲ ಪರಿವಿಲ್ಲ ಮುಖದ ನೆರಿಗೆಯ ಖಬರಿಲ್ಲ<br />ಆಗಂತುಕದತ್ತ ಮುಖ ಮಾಡಿ...</p>.<p>ಅಂಗಾಲ ಸೇರಿದ ಮುಳ್ಳು ಆನೆಯಾಗಿ..<br />ಅರೆಹೊಟ್ಟೆ ಅಂಬಲಿ ಜೀವಕಮೃತವಾಗಿ<br />ಅರಸನಾಗಲು ಅಲಿಯದ..<br />ಸಿರಿವಂತಿಕೆ ಬಯಸದ..</p>.<p>ಶ್ರಮಜೀವ!</p>.<p>ಆಗಂತುಕದತ್ತ ಮುಖ ಮಾಡಿ...</p>.<p>ದಿಂಡ ಹಚ್ಚಿದ ಪಡಕಿ ಸುತ್ತಿಕೊಂಡ ಮಡದಿ<br />ಒಣಗಿದ ರೊಟ್ಟಿ ಕಾರ್ ಪುಡಿ ಉಡಿಯಾಗ ಕಟ್ಟಿಕೊಂಡ<br />ಹುಳಿಯ ಅಂಬಲಿ ಗಡಿಗೆ ತಲೆ ಮ್ಯಾಲೆ ಇಟ್ಟುಕೊಂಡ<br />ಸಿಂಬಳ ಸೋರುವ ಮಕ್ಕಳೆರಡ್ಮೂರು ಎಳಕೊಂಡ<br />ತತ್ರಾಣಿಗಿ ನೀರ ತುಂಬಿಕೊಂಡ..<br />ಆಗಂತುಕದತ್ತ ಮುಖ ಮಾಡಿ...</p>.<p>ಶಿವಶಿವಾ ಅನ್ನುತ ಸಗಣಿ ಕಸ ಬಳಿಯುತ<br />ಸೊಕ್ಕಿಲ್ಲ..<br />ಸೋಗಿಲ್ಲ..<br />ರೂಪಾಯಿಗೆ ಗತಿಯಿಲ್ಲ..<br />ಗೊತ್ತಿಲ್ಲ ಗುರಿಯಿಲ್ಲ ಬದುಕಿಗೆ ನೆಲೆಯಿಲ್ಲ..</p>.<p>ಸುಟ್ಟ ಕೈ ಸೂರಾಗ ಇಟ್ಟುಕೊಂಡ<br />ಬೆವರು ಹನಿಗಳ ಹೊತಗೊಂಡ..<br />ಆಗಂತುಕದತ್ತ ಮುಖ ಮಾಡಿ...</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಊರ ಅಗಸ್ಯಾಗ ಬರಿಗಾಲಿಗೆ ಬರವಿಲ್ಲ<br />ಮೋಡ ಸೇರುವ ದೂಳದ್ಹುಡಿಗೆ ಕೊನೆಯಿಲ್ಲ<br />ದಣಿವಿಲ್ಲ ತಾಯಿ ತಲೆಮ್ಯಾಲಿನ ಸಿಂಬೀಗಿ<br />ಆಗಂತುಕದತ್ತ ಮುಖ ಮಾಡಿ...</p>.<p>ಹಳ್ಳದ ದಂಡ್ಯಾಗ ಮುಖ ಮಜ್ಜನ ಮಾಡಿ<br />ಕೂರಿಗೆ ಕುಂಟಿಗೆ ಎಡಿ ಮಾಡಿ..<br />ಜೋಡೆತ್ತ ಜೊತೆಗೂಡಿ ನಡೆಯುತ್ತ<br />ಆಗಂತುಕದತ್ತ ಮುಖ ಮಾಡಿ...</p>.<p>ಹರಿದ ಚಡ್ಡಿಗೆ ತ್ಯಾಪಿಯ ಹಚ್ಚಿಕೊಂಡು<br />ಮುಂಡಾಸ ಧರಿಸಿ ಮೈಯ ಮುಚ್ಚಿಕೊಂಡು<br />ಸೂರ್ಯ ಹುಟ್ಟಿದರೆಷ್ಟ..<br />ಸೂರ್ಯ ಮುಳುಗಿದರೆಷ್ಟ..</p>.<p>ಅರಿವಿಲ್ಲ ಪರಿವಿಲ್ಲ ಮುಖದ ನೆರಿಗೆಯ ಖಬರಿಲ್ಲ<br />ಆಗಂತುಕದತ್ತ ಮುಖ ಮಾಡಿ...</p>.<p>ಅಂಗಾಲ ಸೇರಿದ ಮುಳ್ಳು ಆನೆಯಾಗಿ..<br />ಅರೆಹೊಟ್ಟೆ ಅಂಬಲಿ ಜೀವಕಮೃತವಾಗಿ<br />ಅರಸನಾಗಲು ಅಲಿಯದ..<br />ಸಿರಿವಂತಿಕೆ ಬಯಸದ..</p>.<p>ಶ್ರಮಜೀವ!</p>.<p>ಆಗಂತುಕದತ್ತ ಮುಖ ಮಾಡಿ...</p>.<p>ದಿಂಡ ಹಚ್ಚಿದ ಪಡಕಿ ಸುತ್ತಿಕೊಂಡ ಮಡದಿ<br />ಒಣಗಿದ ರೊಟ್ಟಿ ಕಾರ್ ಪುಡಿ ಉಡಿಯಾಗ ಕಟ್ಟಿಕೊಂಡ<br />ಹುಳಿಯ ಅಂಬಲಿ ಗಡಿಗೆ ತಲೆ ಮ್ಯಾಲೆ ಇಟ್ಟುಕೊಂಡ<br />ಸಿಂಬಳ ಸೋರುವ ಮಕ್ಕಳೆರಡ್ಮೂರು ಎಳಕೊಂಡ<br />ತತ್ರಾಣಿಗಿ ನೀರ ತುಂಬಿಕೊಂಡ..<br />ಆಗಂತುಕದತ್ತ ಮುಖ ಮಾಡಿ...</p>.<p>ಶಿವಶಿವಾ ಅನ್ನುತ ಸಗಣಿ ಕಸ ಬಳಿಯುತ<br />ಸೊಕ್ಕಿಲ್ಲ..<br />ಸೋಗಿಲ್ಲ..<br />ರೂಪಾಯಿಗೆ ಗತಿಯಿಲ್ಲ..<br />ಗೊತ್ತಿಲ್ಲ ಗುರಿಯಿಲ್ಲ ಬದುಕಿಗೆ ನೆಲೆಯಿಲ್ಲ..</p>.<p>ಸುಟ್ಟ ಕೈ ಸೂರಾಗ ಇಟ್ಟುಕೊಂಡ<br />ಬೆವರು ಹನಿಗಳ ಹೊತಗೊಂಡ..<br />ಆಗಂತುಕದತ್ತ ಮುಖ ಮಾಡಿ...</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>