ಗಾಂಧೀಯ ಯುದ್ಧವೆಂದರೆ ಇಷ್ಚೇ,
ಪ್ರೀತಿಯಿಂದ ಕೊಲ್ಲಬೇಕು,
ಅಹಿಂಸೆಯಿಂದ ಕೊಲ್ಲಬೇಕು,
ಸತ್ಯಾಗ್ರಹದಿಂದ ಕೊಲ್ಲಬೇಕು,
ಅಸಹಕಾರದಿಂದ ಕೊಲ್ಲಬೇಕು,
ಕೊಲ್ಲುವುದಾದರೆ ಇವುಗಳಿಂದ ಕೊಲ್ಲಿ!
ಅಂಧಕಾರ ಅಜ್ಞಾನ ಅಸೂಯೆ ದ್ವೇಷವನ್ನು
ಕರುಣೆಯಿಂದ ಸುಟ್ಟು ಸಹನೆಯಿಂದ ಕೊಲ್ಲಿ,
ಯುದ್ಧ ಮಾಡಬೇಕೆಂದರೆ
ಪ್ರೀತಿಯಿಂದ ಯುದ್ಧ ಮಾಡಿ !