<p><strong>ಹೊಸಪೇಟೆ:</strong> ನಾವು ಮಾಡುವ ಸೇವೆ ಇತರರಿಗೆ ಪ್ರೇರಣೆ ಮತ್ತು ಹೊಸ ಚೈತನ್ಯ ತುಂಬುವಂತಾಗಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ಹೇಳಿದರು. <br /> <br /> ಹೊಸಪೇಟೆಯ ತಾಲ್ಲೂಕು ಕ್ರೀಡಾಂಗಣದಲ್ಲಿ ಎಂಎಸ್ಪಿಎಲ್, ಭಗವಾನ್ ಮಹಾವೀರ ಜೈಪುರ ಅಂಗವಿಕಲ ಸೇವಾ ಸಮಿತಿ ಸಹಯೋಗದಲ್ಲಿ ನಡೆದ 5 ದಿನಗಳ ಕೃತಕ ಕಾಲು ಜೋಡಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.<br /> <br /> ಆತ್ಮತೃಪ್ತಿಯಿಂದ ಕರ್ತವ್ಯ ನಿರ್ವಹಿಸಬೇಕು. ನಂತರ ಸಮಾಜಸೇವೆ ಮಾಡಬಹುದು ಎಂಬುದಕ್ಕೆ ವಿಶ್ವದಲ್ಲಿ 12 ಲಕ್ಷ ಅಂಗವಿಕಲರಿಗೆ ಸಹಕಾರಿ ಯಾದ ಪದ್ಮಭೂಷಣ ಮೆಹತಾ ಮಾದರಿಯಾಗಿದ್ದಾರೆ. ಪ್ರತಿಯೊಬ್ಬರೂ ಈ ಪ್ರೇರಣೆ ಪಡೆಯುವಂತಾಗಬೇಕು ಎಂದರು. <br /> <br /> ಡಿ.ಆರ್. ಮೆಹತಾ ಮಾತನಾಡಿ, ಸೇವಾ ಅವಧಿಯಲ್ಲಿ ಕಂಡ ಘಟನೆಗಳು ಜೈಪುರದಲ್ಲಿ ಸೇವಾ ಸಂಸ್ಥೆ ಸ್ಥಾಪನೆಗೆ ಪ್ರೇರಣೆ ನೀಡಿತು. ತಾಂತ್ರಿಕ ಬದಲಾವಣೆಯಂತೆ ಸೌಲಭ್ಯವೂ ಸಿಗುವಂತಾಗಬೇಕು. ಅಂಗವಿಕಲರು ಸಾಮಾನ್ಯರಂತಾಗಿ, ಸ್ವಾವಲಂಬಿಗಳಾಗ ಬೇಕು ಎಂಬುದು ತಮ್ಮ ಆಶಯ ಎಂದು ಹೇಳಿದರು.<br /> <br /> ಸಂಸ್ಥೆಯ ಅಧ್ಯಕ್ಷ ನರೇಂದ್ರಕುಮಾರ ಬಲ್ಡೋಟಾ ಮಾತನಾಡಿ, ಸಮಾಜ ದಿಂದ ದೊರೆತಿರುವ ಸಂಪತ್ತು ಸಮಾಜಕ್ಕೆ ಸಲ್ಲಿಕೆಯಾಗಬೇಕು ಎಂಬ ಕಾರಣದಿಂದ ಮೂರು ವರ್ಷಗಳಿಂದ ಗಣಿಗಾರಿಕೆ ಸ್ಥಗಿತಗೊಂಡಿದ್ದರೂ ಕೆಲಸ ನಿರ್ವಹಿಸುತ್ತಿದ್ದ 3 ಸಾವಿರ ಉದ್ಯೋಗಿ ಗಳಿಗೆ ರಕ್ಷಣೆ ನೀಡಲಾಗಿದೆ ಎಂದು ನುಡಿದರು.<br /> <br /> ಶಿಬಿರದಲ್ಲಿ ಒಟ್ಟು 461 ಫಲಾನುಭವಿಗಳು 110 ಲಿಂಬ್ಸ್, 120 ಕ್ಯಾಲಿಪರ್ಸ್ಗಳು, 12 ವೀಲ್ಚೇರ್ಗಳು, 12 ಟ್ರೈಸಿಕಲ್ಗಳನ್ನು ವಿತರಿಸಲಾಯಿತು. ಚಿಕಿತ್ಸೆ, ಸಲಹೆ, ಮಾರ್ಗದರ್ಶನ ನೀಡಿದ ಜೈಪುರದ ತಜ್ಞರನ್ನು ಸತ್ಕರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ನಾವು ಮಾಡುವ ಸೇವೆ ಇತರರಿಗೆ ಪ್ರೇರಣೆ ಮತ್ತು ಹೊಸ ಚೈತನ್ಯ ತುಂಬುವಂತಾಗಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ಹೇಳಿದರು. <br /> <br /> ಹೊಸಪೇಟೆಯ ತಾಲ್ಲೂಕು ಕ್ರೀಡಾಂಗಣದಲ್ಲಿ ಎಂಎಸ್ಪಿಎಲ್, ಭಗವಾನ್ ಮಹಾವೀರ ಜೈಪುರ ಅಂಗವಿಕಲ ಸೇವಾ ಸಮಿತಿ ಸಹಯೋಗದಲ್ಲಿ ನಡೆದ 5 ದಿನಗಳ ಕೃತಕ ಕಾಲು ಜೋಡಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.<br /> <br /> ಆತ್ಮತೃಪ್ತಿಯಿಂದ ಕರ್ತವ್ಯ ನಿರ್ವಹಿಸಬೇಕು. ನಂತರ ಸಮಾಜಸೇವೆ ಮಾಡಬಹುದು ಎಂಬುದಕ್ಕೆ ವಿಶ್ವದಲ್ಲಿ 12 ಲಕ್ಷ ಅಂಗವಿಕಲರಿಗೆ ಸಹಕಾರಿ ಯಾದ ಪದ್ಮಭೂಷಣ ಮೆಹತಾ ಮಾದರಿಯಾಗಿದ್ದಾರೆ. ಪ್ರತಿಯೊಬ್ಬರೂ ಈ ಪ್ರೇರಣೆ ಪಡೆಯುವಂತಾಗಬೇಕು ಎಂದರು. <br /> <br /> ಡಿ.ಆರ್. ಮೆಹತಾ ಮಾತನಾಡಿ, ಸೇವಾ ಅವಧಿಯಲ್ಲಿ ಕಂಡ ಘಟನೆಗಳು ಜೈಪುರದಲ್ಲಿ ಸೇವಾ ಸಂಸ್ಥೆ ಸ್ಥಾಪನೆಗೆ ಪ್ರೇರಣೆ ನೀಡಿತು. ತಾಂತ್ರಿಕ ಬದಲಾವಣೆಯಂತೆ ಸೌಲಭ್ಯವೂ ಸಿಗುವಂತಾಗಬೇಕು. ಅಂಗವಿಕಲರು ಸಾಮಾನ್ಯರಂತಾಗಿ, ಸ್ವಾವಲಂಬಿಗಳಾಗ ಬೇಕು ಎಂಬುದು ತಮ್ಮ ಆಶಯ ಎಂದು ಹೇಳಿದರು.<br /> <br /> ಸಂಸ್ಥೆಯ ಅಧ್ಯಕ್ಷ ನರೇಂದ್ರಕುಮಾರ ಬಲ್ಡೋಟಾ ಮಾತನಾಡಿ, ಸಮಾಜ ದಿಂದ ದೊರೆತಿರುವ ಸಂಪತ್ತು ಸಮಾಜಕ್ಕೆ ಸಲ್ಲಿಕೆಯಾಗಬೇಕು ಎಂಬ ಕಾರಣದಿಂದ ಮೂರು ವರ್ಷಗಳಿಂದ ಗಣಿಗಾರಿಕೆ ಸ್ಥಗಿತಗೊಂಡಿದ್ದರೂ ಕೆಲಸ ನಿರ್ವಹಿಸುತ್ತಿದ್ದ 3 ಸಾವಿರ ಉದ್ಯೋಗಿ ಗಳಿಗೆ ರಕ್ಷಣೆ ನೀಡಲಾಗಿದೆ ಎಂದು ನುಡಿದರು.<br /> <br /> ಶಿಬಿರದಲ್ಲಿ ಒಟ್ಟು 461 ಫಲಾನುಭವಿಗಳು 110 ಲಿಂಬ್ಸ್, 120 ಕ್ಯಾಲಿಪರ್ಸ್ಗಳು, 12 ವೀಲ್ಚೇರ್ಗಳು, 12 ಟ್ರೈಸಿಕಲ್ಗಳನ್ನು ವಿತರಿಸಲಾಯಿತು. ಚಿಕಿತ್ಸೆ, ಸಲಹೆ, ಮಾರ್ಗದರ್ಶನ ನೀಡಿದ ಜೈಪುರದ ತಜ್ಞರನ್ನು ಸತ್ಕರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>