<p><strong>ಬೆಂಗಳೂರು:</strong> ನಗರದಲ್ಲಿ ಜರುಗಿದ ಅಖಿಲ ಭಾರತ ಅಂಗವಿಕಲರ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ದೂರದ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದಿದ್ದ ಆಟಗಾರರು ಸರಿಯಾದ ವಿಳಾಸ ಗೊತ್ತಿಲ್ಲದೆ ಪರದಾಡಿದ ಘಟನೆ ನಡೆದಿದೆ.<br /> <br /> ಸರಿಯಾದ ವಿಳಾಸ ಗೊತ್ತಿಲ್ಲದೆ ಕೆಲವರು ವಿಠಲ ಮಲ್ಯ ರಸ್ತೆಯಲ್ಲಿಯಲ್ಲಿರುವ ಸೇಂಟ್ ಜೋಸೆಫ್ಸ್ ಪ್ರೌಢಶಾಲಾ ಕ್ರೀಡಾಂಗಣಕ್ಕೆ ತೆರಳಿ ಗೊಂದಲಕ್ಕೆ ಒಳಗಾದರು. ಆಹ್ವಾನ ಪತ್ರಿಕೆಯಲ್ಲಿ ಕೂಡ ಸ್ಪಷ್ಟ ಮಾಹಿತಿ ಇರಲಿಲ್ಲ. <br /> <br /> ಕೋರಮಂಗಲದಲ್ಲಿರುವ ಸೇಂಟ್ ಜೋಸೆಫ್ಸ್ ಕ್ರೀಡಾ ಸಮುಚ್ಛಯ ಕ್ರೀಡಾಂಗಣದಲ್ಲಿ ನಡೆದ ಎರಡು ದಿನಗಳ ಈ ಟೂರ್ನಿಯಲ್ಲಿ ಕೇವಲ ನಾಲ್ಕು ತಂಡಗಳು ಪಾಲ್ಗೊಂಡಿದ್ದವು. ಕರ್ನಾಟಕ ತಂಡದಲ್ಲಿ ದೂರದ ಜಿಲ್ಲೆಗಳಿಂದ ಬಂದ ಆಟಗಾರರೂ ಇದ್ದರು.<br /> <br /> ಆದರೆ ಈ ಕ್ರೀಡಾಂಗಣದಲ್ಲೂ ಸಂಘಟಕರು ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ. `ಟೂರ್ನಿಯ ಹಿಂದಿನ ದಿನವೂ ಆಟಗಾರರು ಒಟ್ಟಿಗೆ ಸೇರಿರಲಿಲ್ಲ. ಬ್ಯಾಟ್ ಹಾಗೂ ಚೆಂಡು ಹೊಂದಿಸಿಕೊಂಡ್ದ್ದಿದೇ ಟೂರ್ನಿಯ ದಿನ. ಅದೆಲ್ಲಾ ಬದಿಗಿರಲಿ, ಟೂರ್ನಿ ಎಲ್ಲಿ ನಡೆಯುುತ್ತದೆ ಎಂಬುದೇ ಗೊತ್ತಿರಲಿಲ್ಲ~ ಎಂದು ಕೆಲ ಅಂಗವಿಕಲ ಆಟಗಾರರು ದೂರಿದರು.<br /> <br /> ಈ ಟೂರ್ನಿಯ ಫೈನಲ್ನಲ್ಲಿ ಹರಿಯಾಣ ತಂಡವನ್ನು ಸೋಲಿಸಿದ ಪಶ್ಚಿಮ ಬಂಗಾಳ ಚಾಂಪಿಯನ್ ಆಯಿತು. ಕರ್ನಾಟಕ ತಂಡ ಆಂಧ್ರಪ್ರದೇಶ ವಿರುದ್ಧ ಸೋಲು ಕಂಡಿತು. ಚಾಂಪಿಯನ್ ತಂಡ 10 ಸಾವಿರ ರೂ. ಬಹುಮಾನ ಹಾಗೂ ಟ್ರೋಫಿ ಪಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದಲ್ಲಿ ಜರುಗಿದ ಅಖಿಲ ಭಾರತ ಅಂಗವಿಕಲರ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ದೂರದ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದಿದ್ದ ಆಟಗಾರರು ಸರಿಯಾದ ವಿಳಾಸ ಗೊತ್ತಿಲ್ಲದೆ ಪರದಾಡಿದ ಘಟನೆ ನಡೆದಿದೆ.<br /> <br /> ಸರಿಯಾದ ವಿಳಾಸ ಗೊತ್ತಿಲ್ಲದೆ ಕೆಲವರು ವಿಠಲ ಮಲ್ಯ ರಸ್ತೆಯಲ್ಲಿಯಲ್ಲಿರುವ ಸೇಂಟ್ ಜೋಸೆಫ್ಸ್ ಪ್ರೌಢಶಾಲಾ ಕ್ರೀಡಾಂಗಣಕ್ಕೆ ತೆರಳಿ ಗೊಂದಲಕ್ಕೆ ಒಳಗಾದರು. ಆಹ್ವಾನ ಪತ್ರಿಕೆಯಲ್ಲಿ ಕೂಡ ಸ್ಪಷ್ಟ ಮಾಹಿತಿ ಇರಲಿಲ್ಲ. <br /> <br /> ಕೋರಮಂಗಲದಲ್ಲಿರುವ ಸೇಂಟ್ ಜೋಸೆಫ್ಸ್ ಕ್ರೀಡಾ ಸಮುಚ್ಛಯ ಕ್ರೀಡಾಂಗಣದಲ್ಲಿ ನಡೆದ ಎರಡು ದಿನಗಳ ಈ ಟೂರ್ನಿಯಲ್ಲಿ ಕೇವಲ ನಾಲ್ಕು ತಂಡಗಳು ಪಾಲ್ಗೊಂಡಿದ್ದವು. ಕರ್ನಾಟಕ ತಂಡದಲ್ಲಿ ದೂರದ ಜಿಲ್ಲೆಗಳಿಂದ ಬಂದ ಆಟಗಾರರೂ ಇದ್ದರು.<br /> <br /> ಆದರೆ ಈ ಕ್ರೀಡಾಂಗಣದಲ್ಲೂ ಸಂಘಟಕರು ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ. `ಟೂರ್ನಿಯ ಹಿಂದಿನ ದಿನವೂ ಆಟಗಾರರು ಒಟ್ಟಿಗೆ ಸೇರಿರಲಿಲ್ಲ. ಬ್ಯಾಟ್ ಹಾಗೂ ಚೆಂಡು ಹೊಂದಿಸಿಕೊಂಡ್ದ್ದಿದೇ ಟೂರ್ನಿಯ ದಿನ. ಅದೆಲ್ಲಾ ಬದಿಗಿರಲಿ, ಟೂರ್ನಿ ಎಲ್ಲಿ ನಡೆಯುುತ್ತದೆ ಎಂಬುದೇ ಗೊತ್ತಿರಲಿಲ್ಲ~ ಎಂದು ಕೆಲ ಅಂಗವಿಕಲ ಆಟಗಾರರು ದೂರಿದರು.<br /> <br /> ಈ ಟೂರ್ನಿಯ ಫೈನಲ್ನಲ್ಲಿ ಹರಿಯಾಣ ತಂಡವನ್ನು ಸೋಲಿಸಿದ ಪಶ್ಚಿಮ ಬಂಗಾಳ ಚಾಂಪಿಯನ್ ಆಯಿತು. ಕರ್ನಾಟಕ ತಂಡ ಆಂಧ್ರಪ್ರದೇಶ ವಿರುದ್ಧ ಸೋಲು ಕಂಡಿತು. ಚಾಂಪಿಯನ್ ತಂಡ 10 ಸಾವಿರ ರೂ. ಬಹುಮಾನ ಹಾಗೂ ಟ್ರೋಫಿ ಪಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>