<p><strong>ಯಲಹಂಕ:</strong> ಇಲ್ಲಿನ ಅಂಚೆ ಕಚೇರಿಯಲ್ಲಿ ಸರ್ವರ್ ಡೌನ್ ಸಮಸ್ಯೆಯಿಂದ ಕಂಪ್ಯೂಟರ್ಗಳು ಕಾರ್ಯನಿರ್ವಹಿಸದ ಪರಿಣಾಮ ಶುಕ್ರವಾರ ಯಾವುದೇ ಕೆಲಸಗಳು ನಡೆಯದೆ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು.<br /> <br /> ಬೆಂಗಳೂರು ಉತ್ತರ ತಾಲ್ಲೂಕು ವ್ಯಾಪ್ತಿಯ ರಾಜಾನುಕುಂಟೆ, ಸಿಂಗ ನಾಯಕನಹಳ್ಳಿ, ಅಟ್ಟೂರು, ಅಗ್ರಹಾರ, ಪಾಲನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಈ ಕಚೇರಿಯು ಮುಖ್ಯ ಅಂಚೆ ಕಚೇರಿಯಾಗಿದ್ದು, ಪ್ರತಿದಿನ ಎಸ್ಬಿ ಖಾತೆ, ಆರ್ಡಿ, ಮನಿಯಾರ್ಡರ್, ವೃದ್ಧಾಪ್ಯ ವೇತನ, ರಿಜಿಸ್ಟರ್ ಪೋಸ್್ಟ, ಸ್ಪೀಡ್ಪೋಸ್್ಟ ಹಾಗೂ ಪಾರ್ಸಲ್ ಬುಕ್ಕಿಂಗ್ ಸೇರಿದಂತೆ ವಿವಿಧ ಸೌಲಭ್ಯಳನ್ನ ಪಡೆಯಲು ದೂರದ ಊರುಗಳಿಂದ ಸಾರ್ವಜನಿಕರು ಇಲ್ಲಿಗೆ ಬರುತ್ತಾರೆ.<br /> <br /> ಶುಕ್ರವಾರ ಬೆಳಗ್ಗೆ 10 ಗಂಟೆಗೆ ಇದ್ದಕ್ಕಿದ್ದಂತೆ ಸರ್ವರ್ ಡೌನ್ ಸಮಸ್ಯೆ ತಲೆದೋರಿದ ಪರಿಣಾಮ ಯಾವುದೇ ಕಂಪ್ಯೂಟರ್ಗಳು ಕಾರ್ಯ ನಿರ್ವಹಿಸಲಿಲ್ಲ. ಇದರಿಂದ ಹಲವಾರು ಸೇವೆಗಳನ್ನು ಪಡೆಯಲು ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರು ಮಧ್ಯಾಹ್ನ ಒಂದು ಗಂಟೆಯವರೆಗೆ ಕಾದರೂ ಕೆಲಸ ಆಗದೆ ಬೇಸರದಿಂದ ಮನೆಗೆ ಹಿಂದಿರುಗಿದರು.<br /> <br /> ಬೆಳಗ್ಗೆ 10 ಗಂಟೆಗೆ ಮನಿಯಾರ್ಡರ್ ಮಾಡಲು ಹೋದಾಗ, ಅಲ್ಲಿನ ಸಿಬ್ಬಂದಿ ಸರ್ವರ್ಡೌನ್ ಆಗಿದೆ ಎಂದು ಹೇಳಿದರು. ಮತ್ತೊಮ್ಮೆ 12 ಗಂಟೆಗೆ ಕಚೇರಿಗೆ ಹೋದಾಗಲೂ ಸಿಬ್ಬಂದಿ ಇದೇ ಕಾರಣ ನೀಡಿದರು. ‘ತಂದೆಗೆ ಇಂದು ತುರ್ತಾಗಿ ಹಣ ಕಳುಹಿಸಬೇಕಾಗಿತ್ತು. ಆದರೆ, ಹಣ ಕಳುಹಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಇದರಿಂದ ನನ್ನ ಒಂದು ದಿನದ ಕೆಲಸವೂ ತಪ್ಪಿಹೋಯಿತು’ ಎಂದು ಅಗ್ರಹಾರ ಬಡಾವಣೆ ನಿವಾಸಿ ಅಬ್ದುಲ್ ನಜೀರ್ ಬೇಸರ ವ್ಯಕ್ತಪಡಿಸಿದರು.<br /> <br /> ಈ ಹಿಂದೆಯೂ ಒಮ್ಮೆ ಕಚೇರಿಗೆ ಭೇಟಿ ನೀಡಿದ್ದಾಗ ಇದೇ ರೀತಿಯ ಸಮಸ್ಯೆ ಉಂಟಾಗಿತ್ತು. ಕಚೇರಿಯಲ್ಲಿ ಬಹಳ ವರ್ಷಗಳಿಂದ ಹಳೆಯ ಕಂಪ್ಯೂಟರ್ಗಳನ್ನು ಬಳಸುತ್ತಿರು ವುದರಿಂದ ಪದೇಪದೇ ಇಂತಹ ಸಮಸ್ಯೆ ಉಂಟಾಗುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ವರದಿ ನೀಡಿ, ಹಳೆಯ ಕಂಪ್ಯೂಟರ್ಗಳನ್ನು ಬದ ಲಾಯಿಸಿ ಹೊಸ ಕಂಪ್ಯೂಟರ್ಗಳನ್ನು ಅಳವಡಿಸಿ ಸಾರ್ವಜಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ಅವರು ಒತ್ತಾಯಿಸಿ ದರು.<br /> <br /> ಈ ಬಗ್ಗೆ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಯೋಗಾನಂದ್ ಅವರನ್ನು ಸಂಪರ್ಕಿಸಿದಾಗ, ‘ಬೆಳಿಗ್ಗೆ 10 ಗಂಟೆಯವರೆಗೆ ಎಂದಿನಂತೆ ಕಾರ್ಯನಿರ್ವಹಿಸಲಾಯಿತು. ಈ ಸಂದರ್ಭದಲ್ಲಿ ಎಸ್ಬಿ ವಹಿವಾಟು ನಡೆಸಲು ಸಾಧ್ಯವಾಯಿತು. ನಂತರ ಸರ್ವರ್ ಡೌನ್ ಸಮಸ್ಯೆ ಯಿಂದ ಕಂಪ್ಯೂಟರ್ಗಳು ಕಾರ್ಯನಿರ್ವಹಿಸದ ಪರಿಣಾಮ ರಿಜಿಸ್ಟರ್ ಪೋಸ್ಟ್, ಸ್ಪೀಡ್ಪೋಸ್್ಟ ಹಾಗೂ ಮನಿಯಾರ್ಡರ್ ಸಂಬಂಧಿತ ವ್ಯವಹಾರಗಳನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ:</strong> ಇಲ್ಲಿನ ಅಂಚೆ ಕಚೇರಿಯಲ್ಲಿ ಸರ್ವರ್ ಡೌನ್ ಸಮಸ್ಯೆಯಿಂದ ಕಂಪ್ಯೂಟರ್ಗಳು ಕಾರ್ಯನಿರ್ವಹಿಸದ ಪರಿಣಾಮ ಶುಕ್ರವಾರ ಯಾವುದೇ ಕೆಲಸಗಳು ನಡೆಯದೆ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು.<br /> <br /> ಬೆಂಗಳೂರು ಉತ್ತರ ತಾಲ್ಲೂಕು ವ್ಯಾಪ್ತಿಯ ರಾಜಾನುಕುಂಟೆ, ಸಿಂಗ ನಾಯಕನಹಳ್ಳಿ, ಅಟ್ಟೂರು, ಅಗ್ರಹಾರ, ಪಾಲನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಈ ಕಚೇರಿಯು ಮುಖ್ಯ ಅಂಚೆ ಕಚೇರಿಯಾಗಿದ್ದು, ಪ್ರತಿದಿನ ಎಸ್ಬಿ ಖಾತೆ, ಆರ್ಡಿ, ಮನಿಯಾರ್ಡರ್, ವೃದ್ಧಾಪ್ಯ ವೇತನ, ರಿಜಿಸ್ಟರ್ ಪೋಸ್್ಟ, ಸ್ಪೀಡ್ಪೋಸ್್ಟ ಹಾಗೂ ಪಾರ್ಸಲ್ ಬುಕ್ಕಿಂಗ್ ಸೇರಿದಂತೆ ವಿವಿಧ ಸೌಲಭ್ಯಳನ್ನ ಪಡೆಯಲು ದೂರದ ಊರುಗಳಿಂದ ಸಾರ್ವಜನಿಕರು ಇಲ್ಲಿಗೆ ಬರುತ್ತಾರೆ.<br /> <br /> ಶುಕ್ರವಾರ ಬೆಳಗ್ಗೆ 10 ಗಂಟೆಗೆ ಇದ್ದಕ್ಕಿದ್ದಂತೆ ಸರ್ವರ್ ಡೌನ್ ಸಮಸ್ಯೆ ತಲೆದೋರಿದ ಪರಿಣಾಮ ಯಾವುದೇ ಕಂಪ್ಯೂಟರ್ಗಳು ಕಾರ್ಯ ನಿರ್ವಹಿಸಲಿಲ್ಲ. ಇದರಿಂದ ಹಲವಾರು ಸೇವೆಗಳನ್ನು ಪಡೆಯಲು ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರು ಮಧ್ಯಾಹ್ನ ಒಂದು ಗಂಟೆಯವರೆಗೆ ಕಾದರೂ ಕೆಲಸ ಆಗದೆ ಬೇಸರದಿಂದ ಮನೆಗೆ ಹಿಂದಿರುಗಿದರು.<br /> <br /> ಬೆಳಗ್ಗೆ 10 ಗಂಟೆಗೆ ಮನಿಯಾರ್ಡರ್ ಮಾಡಲು ಹೋದಾಗ, ಅಲ್ಲಿನ ಸಿಬ್ಬಂದಿ ಸರ್ವರ್ಡೌನ್ ಆಗಿದೆ ಎಂದು ಹೇಳಿದರು. ಮತ್ತೊಮ್ಮೆ 12 ಗಂಟೆಗೆ ಕಚೇರಿಗೆ ಹೋದಾಗಲೂ ಸಿಬ್ಬಂದಿ ಇದೇ ಕಾರಣ ನೀಡಿದರು. ‘ತಂದೆಗೆ ಇಂದು ತುರ್ತಾಗಿ ಹಣ ಕಳುಹಿಸಬೇಕಾಗಿತ್ತು. ಆದರೆ, ಹಣ ಕಳುಹಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಇದರಿಂದ ನನ್ನ ಒಂದು ದಿನದ ಕೆಲಸವೂ ತಪ್ಪಿಹೋಯಿತು’ ಎಂದು ಅಗ್ರಹಾರ ಬಡಾವಣೆ ನಿವಾಸಿ ಅಬ್ದುಲ್ ನಜೀರ್ ಬೇಸರ ವ್ಯಕ್ತಪಡಿಸಿದರು.<br /> <br /> ಈ ಹಿಂದೆಯೂ ಒಮ್ಮೆ ಕಚೇರಿಗೆ ಭೇಟಿ ನೀಡಿದ್ದಾಗ ಇದೇ ರೀತಿಯ ಸಮಸ್ಯೆ ಉಂಟಾಗಿತ್ತು. ಕಚೇರಿಯಲ್ಲಿ ಬಹಳ ವರ್ಷಗಳಿಂದ ಹಳೆಯ ಕಂಪ್ಯೂಟರ್ಗಳನ್ನು ಬಳಸುತ್ತಿರು ವುದರಿಂದ ಪದೇಪದೇ ಇಂತಹ ಸಮಸ್ಯೆ ಉಂಟಾಗುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ವರದಿ ನೀಡಿ, ಹಳೆಯ ಕಂಪ್ಯೂಟರ್ಗಳನ್ನು ಬದ ಲಾಯಿಸಿ ಹೊಸ ಕಂಪ್ಯೂಟರ್ಗಳನ್ನು ಅಳವಡಿಸಿ ಸಾರ್ವಜಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ಅವರು ಒತ್ತಾಯಿಸಿ ದರು.<br /> <br /> ಈ ಬಗ್ಗೆ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಯೋಗಾನಂದ್ ಅವರನ್ನು ಸಂಪರ್ಕಿಸಿದಾಗ, ‘ಬೆಳಿಗ್ಗೆ 10 ಗಂಟೆಯವರೆಗೆ ಎಂದಿನಂತೆ ಕಾರ್ಯನಿರ್ವಹಿಸಲಾಯಿತು. ಈ ಸಂದರ್ಭದಲ್ಲಿ ಎಸ್ಬಿ ವಹಿವಾಟು ನಡೆಸಲು ಸಾಧ್ಯವಾಯಿತು. ನಂತರ ಸರ್ವರ್ ಡೌನ್ ಸಮಸ್ಯೆ ಯಿಂದ ಕಂಪ್ಯೂಟರ್ಗಳು ಕಾರ್ಯನಿರ್ವಹಿಸದ ಪರಿಣಾಮ ರಿಜಿಸ್ಟರ್ ಪೋಸ್ಟ್, ಸ್ಪೀಡ್ಪೋಸ್್ಟ ಹಾಗೂ ಮನಿಯಾರ್ಡರ್ ಸಂಬಂಧಿತ ವ್ಯವಹಾರಗಳನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>