<p> ನವದೆಹಲಿ (ಪಿಟಿಐ): ಸ್ಥಳೀಯ ಸಂಸ್ಥೆಗಳು ಹಾಗೂ ಖಾಸಗಿ ನೀರು ಬಳಕೆದಾರರ ನಡುವಿನ ಸ್ಪರ್ಧೆಯಿಂದಾಗಿ ಅಂತರ್ಜಲ ಬರಿದಾಗುತ್ತಿದ್ದು, ಅತ್ಯಮೂಲ್ಯ ಜಲಸಂಪನ್ಮೂಲ ರಕ್ಷಣೆಗಾಗಿ ಕಾನೂನಿನ ಚೌಕಟ್ಟಿಗೆ ಒಳಪಡಿಸುವ ಪ್ರಸ್ತಾವವನ್ನು ಗಂಭೀರವಾಗಿ ಪರಿಗಣಿಸುವ ಕಾಲ ಈಗ ಬಂದಿದೆ ಎಂದು ಪ್ರಧಾನಿ ಡಾ. ಮನಮೋಹನ್ ಸಿಂಗ್ ಇಲ್ಲಿ ಅಭಿಪ್ರಾಯಪಟ್ಟರು.<br /> <br /> ಮಂಗಳವಾರದಿಂದ ಆರಂಭವಾದ ದೇಶದ ಮೊಟ್ಟ ಮೊದಲ `ರಾಷ್ಟ್ರೀಯ ಜಲ ಸಪ್ತಾಹ~ವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಅಂತರ್ಜಲವನ್ನು ಸಾರ್ವಜನಿಕ ಸಂಪನ್ಮೂಲವಾಗಿ ಪರಿಗಣಿಸಬೇಕು~ ಎಂದು ಸಲಹೆ ನೀಡಿದರು.<br /> <br /> `ಅಂತರ್ಜಲ ದುರ್ಬಳಕೆ ನಿಯಂತ್ರಣಕ್ಕೆ ಪ್ರಸ್ತುತ ಕಠಿಣ ಕಾನೂನು ಇಲ್ಲ. ನೀರಿನ ಬಳಕೆಯಲ್ಲಿ ಸಮನ್ವಯತೆಯೂ ಇಲ್ಲ. ಜೊತೆಗೆ ಕಡಿಮೆ ಬೆಲೆಯಲ್ಲಿ ವಿದ್ಯುತ್ ಮತ್ತು ನೀರು ಪೂರೈಕೆ ಮಾಡುತ್ತಿರುವುದರಿಂದ ಅಂತರ್ಜಲ ದುರ್ಬಳಕೆಯಾಗುತ್ತಿದೆ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. <br /> <br /> ಸಹಭಾಗಿತ್ವ ಪ್ರಕ್ರಿಯೆಗೆ ಕರೆ: `ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಿದ್ಯುತ್ ಹಾಗೂ ನೀರನ್ನು ಪೂರೈಸುತ್ತಿರುವುದು ಅಂತರ್ಜಲ ದುರ್ಬಳಕೆಗೆ ಕಾರಣವಾಗಿದೆ ಎಂದು ಪ್ರಧಾನಿ ಹೇಳಿದರು.<br /> <br /> ಸ್ಥಳೀಯ ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು, ನೀರು ಪೂರೈಕೆಯನ್ನು ವಿಸ್ತರಿಸುವ ಕುರಿತು ಚಿಂತಿಸಬೇಕು. ನೀರಿನ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ಕಡಿತಗೊಳಿಸಿ, ಪರಿಣಾಮಕಾರಿಯಾಗಿ ನೀರನ್ನು ಬಳಕೆ ಮಾಡಬೇಕು~ ಎಂದು ಅವರು ಹೇಳಿದರು.<br /> <br /> ವ್ಯವಸ್ಥೆಗೆ ಸುಧಾರಣೆ ಅಗತ್ಯ:`ಪ್ರಸ್ತುತ ದೇಶದಲ್ಲಿರುವ ನೀರು ನಿರ್ವಹಣೆ ವ್ಯವಸ್ಥೆಗೆ ಸುಧಾರಣೆ ತರಬೇಕಿದೆ. ವಾಸ್ತವ ಪರಿಸ್ಥಿತಿಗೆ ಅನುಗುಣವಾಗಿ ಜಲಸಂಪನ್ಮೂಲ ಯೋಜನೆಯ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ರೂಪಿಸಬೇಕಿದೆ ಎಂದು ಅವರು ಸೂಚಿಸಿದರು.<br /> <br /> ಮುಂದಿನ ಐದು ವರ್ಷಗಳಲ್ಲಿ ನೀರಿಗೆ ಸಂಬಂಧಪಟ್ಟ ನವ ನವೀನ ಯೋಜನೆಗಳನ್ನು ರೂಪಿಸಬೇಕಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸಮಗ್ರ ಜಲಾನಯನ ನಿರ್ವಹಣೆಯಂತಹ ಯೋಜನೆಗಳೊಂದಿಗೆ ನೀರಿನ ಸಂರಕ್ಷಣೆ ಯೋಜನೆಗಳನ್ನು ಜೋಡಿಸಬೇಕಿದೆ ಎಂದು ಸಿಂಗ್ ಸಲಹೆ ನೀಡಿದರು.<br /> <br /> <strong>ಪರಿಣಾಮಕಾರಿ ನೀರು ನಿರ್ವಹಣೆ: `</strong>ಪರಿಣಾಮಕಾರಿ ಜಲಸಂಪನ್ಮೂಲ ನಿರ್ವಹಣೆಗಾಗಿ ಸರ್ಕಾರ ದೇಶದಲ್ಲಿರುವ ನೀರಿನ ಲಭ್ಯತೆ ಬಗ್ಗೆ ನಕ್ಷೆ ರೂಪಿಸುವ ಅಗತ್ಯವಿದ್ದು, ಇದಕ್ಕಾಗಿ ದೇಶದಾದ್ಯಂತ ಅಂತರ್ಜಲ ಲಭ್ಯತೆ ಕುರಿತು ಪ್ರಾಥಮಿಕ ಮಾಹಿತಿ ಸಂಗ್ರಹಿಸಬೇಕು. ಈ ಎಲ್ಲ ವಿಚಾರಗಳನ್ನು 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಸೇರಿಸಲಾಗುತ್ತಿದೆ~ ಎಂದು ತಿಳಿಸಿದರು.<br /> <br /> <strong>ಸಮುದಾಯ ತಂತ್ರಜ್ಞಾನ ಅಗತ್ಯ: </strong>ನಮ್ಮ ಹಿರಿಯರು ಉತ್ಕೃಷ್ಟವಾದ ಮಳೆ ನೀರು ಸಂಗ್ರಹ ವಿಧಾನಗಳನ್ನು, ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದರು. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಆ ವಿಧಾನಗಳನ್ನು ರೂಪಿಸುತ್ತಿದ್ದರು. ನೀರು ನಿರ್ವಹಣೆ ಸ್ಥಳೀಯ ಸಮುದಾಯದವರ ನಿಯಂತ್ರಣದಲ್ಲಿರುತ್ತಿತ್ತು. ಸಹಕಾರ ತತ್ವದ ಮೇಲೆ ನಡೆಯುತ್ತಿದ್ದ ಇಂಥ ವಿಧಾನಗಳನ್ನು ಮತ್ತೆ ಮರುಸ್ಥಾಪಿಸಬೇಕಿದ್ದು, ಆ ಮೂಲಕ ನೀರಿನ ಸಂಸ್ಕರಣೆ , ಮರುಬಳಕೆ ಮತ್ತು ಮರುಪೂರಣ ಕೆಲಸವಾಗಬೇಕಿದೆ ಎಂದು ಹೇಳಿದರು.<br /> <br /> </p>.<p><strong>ನದಿ ಜೋಡಣೆಗೆ ಸಮಿತಿ<br /> ನವದೆಹಲಿ (ಪಿಟಿಐ):</strong> ನದಿ ಜೋಡಣೆ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ನದಿ ಜೋಡಣೆ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಬೇಕೆಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ತಿಳಿಸಿದ್ದಾರೆ.<br /> <br /> `ಭಾರತ ಜಲ ಸಪ್ತಾಹ~ ಕಾರ್ಯಕ್ರಮದಲ್ಲಿ ತಾಂತ್ರಿಕ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತಾಪಿತ ಸಮಿತಿ ಜಲ ಸಂಪನ್ಮೂಲ ಸಚಿವಾಲಯದಡಿ ಕಾರ್ಯನಿರ್ವಹಿಸಬಹುದು. ನದಿ ಜೋಡಣೆಗೆ ಸಂಬಂಧಿಸಿದಂತೆ ತಾಂತ್ರಿಕ ಮತ್ತು ಆರ್ಥಿಕ ವಿಚಾರಗಳ ಕುರಿತು ಚರ್ಚೆಯಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> ನವದೆಹಲಿ (ಪಿಟಿಐ): ಸ್ಥಳೀಯ ಸಂಸ್ಥೆಗಳು ಹಾಗೂ ಖಾಸಗಿ ನೀರು ಬಳಕೆದಾರರ ನಡುವಿನ ಸ್ಪರ್ಧೆಯಿಂದಾಗಿ ಅಂತರ್ಜಲ ಬರಿದಾಗುತ್ತಿದ್ದು, ಅತ್ಯಮೂಲ್ಯ ಜಲಸಂಪನ್ಮೂಲ ರಕ್ಷಣೆಗಾಗಿ ಕಾನೂನಿನ ಚೌಕಟ್ಟಿಗೆ ಒಳಪಡಿಸುವ ಪ್ರಸ್ತಾವವನ್ನು ಗಂಭೀರವಾಗಿ ಪರಿಗಣಿಸುವ ಕಾಲ ಈಗ ಬಂದಿದೆ ಎಂದು ಪ್ರಧಾನಿ ಡಾ. ಮನಮೋಹನ್ ಸಿಂಗ್ ಇಲ್ಲಿ ಅಭಿಪ್ರಾಯಪಟ್ಟರು.<br /> <br /> ಮಂಗಳವಾರದಿಂದ ಆರಂಭವಾದ ದೇಶದ ಮೊಟ್ಟ ಮೊದಲ `ರಾಷ್ಟ್ರೀಯ ಜಲ ಸಪ್ತಾಹ~ವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಅಂತರ್ಜಲವನ್ನು ಸಾರ್ವಜನಿಕ ಸಂಪನ್ಮೂಲವಾಗಿ ಪರಿಗಣಿಸಬೇಕು~ ಎಂದು ಸಲಹೆ ನೀಡಿದರು.<br /> <br /> `ಅಂತರ್ಜಲ ದುರ್ಬಳಕೆ ನಿಯಂತ್ರಣಕ್ಕೆ ಪ್ರಸ್ತುತ ಕಠಿಣ ಕಾನೂನು ಇಲ್ಲ. ನೀರಿನ ಬಳಕೆಯಲ್ಲಿ ಸಮನ್ವಯತೆಯೂ ಇಲ್ಲ. ಜೊತೆಗೆ ಕಡಿಮೆ ಬೆಲೆಯಲ್ಲಿ ವಿದ್ಯುತ್ ಮತ್ತು ನೀರು ಪೂರೈಕೆ ಮಾಡುತ್ತಿರುವುದರಿಂದ ಅಂತರ್ಜಲ ದುರ್ಬಳಕೆಯಾಗುತ್ತಿದೆ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. <br /> <br /> ಸಹಭಾಗಿತ್ವ ಪ್ರಕ್ರಿಯೆಗೆ ಕರೆ: `ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಿದ್ಯುತ್ ಹಾಗೂ ನೀರನ್ನು ಪೂರೈಸುತ್ತಿರುವುದು ಅಂತರ್ಜಲ ದುರ್ಬಳಕೆಗೆ ಕಾರಣವಾಗಿದೆ ಎಂದು ಪ್ರಧಾನಿ ಹೇಳಿದರು.<br /> <br /> ಸ್ಥಳೀಯ ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು, ನೀರು ಪೂರೈಕೆಯನ್ನು ವಿಸ್ತರಿಸುವ ಕುರಿತು ಚಿಂತಿಸಬೇಕು. ನೀರಿನ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ಕಡಿತಗೊಳಿಸಿ, ಪರಿಣಾಮಕಾರಿಯಾಗಿ ನೀರನ್ನು ಬಳಕೆ ಮಾಡಬೇಕು~ ಎಂದು ಅವರು ಹೇಳಿದರು.<br /> <br /> ವ್ಯವಸ್ಥೆಗೆ ಸುಧಾರಣೆ ಅಗತ್ಯ:`ಪ್ರಸ್ತುತ ದೇಶದಲ್ಲಿರುವ ನೀರು ನಿರ್ವಹಣೆ ವ್ಯವಸ್ಥೆಗೆ ಸುಧಾರಣೆ ತರಬೇಕಿದೆ. ವಾಸ್ತವ ಪರಿಸ್ಥಿತಿಗೆ ಅನುಗುಣವಾಗಿ ಜಲಸಂಪನ್ಮೂಲ ಯೋಜನೆಯ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ರೂಪಿಸಬೇಕಿದೆ ಎಂದು ಅವರು ಸೂಚಿಸಿದರು.<br /> <br /> ಮುಂದಿನ ಐದು ವರ್ಷಗಳಲ್ಲಿ ನೀರಿಗೆ ಸಂಬಂಧಪಟ್ಟ ನವ ನವೀನ ಯೋಜನೆಗಳನ್ನು ರೂಪಿಸಬೇಕಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸಮಗ್ರ ಜಲಾನಯನ ನಿರ್ವಹಣೆಯಂತಹ ಯೋಜನೆಗಳೊಂದಿಗೆ ನೀರಿನ ಸಂರಕ್ಷಣೆ ಯೋಜನೆಗಳನ್ನು ಜೋಡಿಸಬೇಕಿದೆ ಎಂದು ಸಿಂಗ್ ಸಲಹೆ ನೀಡಿದರು.<br /> <br /> <strong>ಪರಿಣಾಮಕಾರಿ ನೀರು ನಿರ್ವಹಣೆ: `</strong>ಪರಿಣಾಮಕಾರಿ ಜಲಸಂಪನ್ಮೂಲ ನಿರ್ವಹಣೆಗಾಗಿ ಸರ್ಕಾರ ದೇಶದಲ್ಲಿರುವ ನೀರಿನ ಲಭ್ಯತೆ ಬಗ್ಗೆ ನಕ್ಷೆ ರೂಪಿಸುವ ಅಗತ್ಯವಿದ್ದು, ಇದಕ್ಕಾಗಿ ದೇಶದಾದ್ಯಂತ ಅಂತರ್ಜಲ ಲಭ್ಯತೆ ಕುರಿತು ಪ್ರಾಥಮಿಕ ಮಾಹಿತಿ ಸಂಗ್ರಹಿಸಬೇಕು. ಈ ಎಲ್ಲ ವಿಚಾರಗಳನ್ನು 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಸೇರಿಸಲಾಗುತ್ತಿದೆ~ ಎಂದು ತಿಳಿಸಿದರು.<br /> <br /> <strong>ಸಮುದಾಯ ತಂತ್ರಜ್ಞಾನ ಅಗತ್ಯ: </strong>ನಮ್ಮ ಹಿರಿಯರು ಉತ್ಕೃಷ್ಟವಾದ ಮಳೆ ನೀರು ಸಂಗ್ರಹ ವಿಧಾನಗಳನ್ನು, ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದರು. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಆ ವಿಧಾನಗಳನ್ನು ರೂಪಿಸುತ್ತಿದ್ದರು. ನೀರು ನಿರ್ವಹಣೆ ಸ್ಥಳೀಯ ಸಮುದಾಯದವರ ನಿಯಂತ್ರಣದಲ್ಲಿರುತ್ತಿತ್ತು. ಸಹಕಾರ ತತ್ವದ ಮೇಲೆ ನಡೆಯುತ್ತಿದ್ದ ಇಂಥ ವಿಧಾನಗಳನ್ನು ಮತ್ತೆ ಮರುಸ್ಥಾಪಿಸಬೇಕಿದ್ದು, ಆ ಮೂಲಕ ನೀರಿನ ಸಂಸ್ಕರಣೆ , ಮರುಬಳಕೆ ಮತ್ತು ಮರುಪೂರಣ ಕೆಲಸವಾಗಬೇಕಿದೆ ಎಂದು ಹೇಳಿದರು.<br /> <br /> </p>.<p><strong>ನದಿ ಜೋಡಣೆಗೆ ಸಮಿತಿ<br /> ನವದೆಹಲಿ (ಪಿಟಿಐ):</strong> ನದಿ ಜೋಡಣೆ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ನದಿ ಜೋಡಣೆ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಬೇಕೆಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ತಿಳಿಸಿದ್ದಾರೆ.<br /> <br /> `ಭಾರತ ಜಲ ಸಪ್ತಾಹ~ ಕಾರ್ಯಕ್ರಮದಲ್ಲಿ ತಾಂತ್ರಿಕ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತಾಪಿತ ಸಮಿತಿ ಜಲ ಸಂಪನ್ಮೂಲ ಸಚಿವಾಲಯದಡಿ ಕಾರ್ಯನಿರ್ವಹಿಸಬಹುದು. ನದಿ ಜೋಡಣೆಗೆ ಸಂಬಂಧಿಸಿದಂತೆ ತಾಂತ್ರಿಕ ಮತ್ತು ಆರ್ಥಿಕ ವಿಚಾರಗಳ ಕುರಿತು ಚರ್ಚೆಯಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>