<p>ಜಮಖಂಡಿ: ಬೆಂಗಳೂರಿನ ಎಸ್ಬಿಎಂ ತಂಡ ತಾಲ್ಲೂಕಿನ ಕುಂಚನೂರ ಗ್ರಾಮದ ನ್ಯೂ ಮಹಾದೇವ ಯುವಕ ಮಂಡಳದ ಆಶ್ರಯದಲ್ಲಿ ನಡೆಯುತ್ತಿರುವ ಅಂತರ ರಾಜ್ಯ ಕಬಡ್ಡಿ ಟೂರ್ನಿಯ ಪುರುಷರ ವಿಭಾಗದಲ್ಲಿ ಫೈನಲ್ ಪ್ರವೇಶಿಸಿತು.<br /> <br /> ಏಕಪಕ್ಷೀಯವಾಗಿದ್ದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈನ ದೇನಾ ಬ್ಯಾಂಕ್ ತಂಡವನ್ನು 29-9ರಿಂದ ಸುಲಭವಾಗಿ ಮಣಿಸಿತು. ಅರ್ಜುನ ಪ್ರಶಸ್ತಿ ಪುರಸ್ಕೃತ, ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಕಬಡ್ಡಿ ತಂಡದ ನೇತೃತ್ವ ವಹಿಸಿದ್ದ ಬಿ.ಸಿ.ರಮೇಶ ಎಸ್ಬಿಎಂ ತಂಡದ ಗೆಲುವಿನ ರೂವಾರಿ ಎನಿಸಿದರು.<br /> <br /> ಪುರುಷರ ವಿಭಾಗದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನಾಸಿಕ್ನ ಆರ್ಮಿ ತಂಡ 26-10ರಿಂದ ಮಂಗಳೂರಿನ ವೀರ ಮಾರುತಿ ತಂಡವನ್ನು ಸೋಲಿಸಿ ಫೈನಲ್ಗೆ ಮುನ್ನಡೆಯಿತು. <br /> <br /> ಇದಕ್ಕೂ ಮುನ್ನ ನಾಸಿಕ್ನ ಆರ್ಮಿ ತಂಡ 32-7ರಿಂದ ಮಹಾಲಿಂಗಪುರದ ಭೂಮಿಕಾ `ಎ~ ತಂಡವನ್ನು, ಮಂಗಳೂರಿನ ವೀರ ಮಾರುತಿ ತಂಡ 16-9ರಿಂದ ಬೆಂಗಳೂರಿನ ಹೂಡಿ ಸ್ಪೋರ್ಟ್ಸ್ ತಂಡವನ್ನು; ಮುಂಬೈನ ದೇನಾ ಬ್ಯಾಂಕ್ ತಂಡ 27-17ರಿಂದ ಮಹಾಲಿಂಗಪುರದ ಭೂಮಿಕಾ `ಬಿ~ ತಂಡವನ್ನು ಹಾಗೂ ಬೆಂಗಳೂರಿನ ಎಸ್ಬಿಎಂ ತಂಡ 35-8ರಿಂದ ಮುಂಬೈನ ಫೈಜರ್ ಜಿಮಖಾನಾ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿದ್ದವು.<br /> <br /> ಮಹಿಳೆಯರ ವಿಭಾಗದಲ್ಲಿ ಕಾರವಾರದ ಕಾತ್ಯಾಯಿನಿ, ಪುತ್ತೂರಿನ ಸೇಂಟ್ ಫೆಲೋಮಿನಾ, ಮೂಡಬಿದ್ರಿಯ ಆಳ್ವಾಸ್ ಹಾಗೂ ಮುಂಬೈನ ದೇನಾ ಬ್ಯಾಂಕ್ ತಂಡಗಳು ಸೆಮಿಫೈನಲ್ ಪ್ರವೇಶಿದವು.<br /> <br /> ಕಾರವಾರದ ಕಾತ್ಯಾಯಿನಿ ತಂಡ 18-6ರಿಂದ ಪನ್ನಾಲದ ಸಂಸ್ಕೃತಿ ತಂಡದ ವಿರುದ್ಧವೂ; ಪುತ್ತೂರಿನ ಸೇಂಟ್ ಫೆಲೋಮಿನಾ ತಂಡ 19-17 ರಿಂದ ಕೊಲ್ಲಾಪುರದ ಮಹಾಲಕ್ಷ್ಮೀ ತಂಡದ ಮೇಲೂ; ಮೂಡಬಿದ್ರಿಯ ಆಳ್ವಾಸ್ ತಂಡ 26-2ರಿಂದ ಬಾಚಣಿಯ ಜೈ ಹನುಮಾನ್ ತಂಡದ ವಿರುದ್ಧವೂ; ಮುಂಬೈನ ದೇನಾ ಬ್ಯಾಂಕ್ ತಂಡ 16-3 ರಿಂದ ಬೆಂಗಳೂರಿನ ಮಹಾರಾಣಿ ಮೇಲೂ ಗೆಲವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಮಖಂಡಿ: ಬೆಂಗಳೂರಿನ ಎಸ್ಬಿಎಂ ತಂಡ ತಾಲ್ಲೂಕಿನ ಕುಂಚನೂರ ಗ್ರಾಮದ ನ್ಯೂ ಮಹಾದೇವ ಯುವಕ ಮಂಡಳದ ಆಶ್ರಯದಲ್ಲಿ ನಡೆಯುತ್ತಿರುವ ಅಂತರ ರಾಜ್ಯ ಕಬಡ್ಡಿ ಟೂರ್ನಿಯ ಪುರುಷರ ವಿಭಾಗದಲ್ಲಿ ಫೈನಲ್ ಪ್ರವೇಶಿಸಿತು.<br /> <br /> ಏಕಪಕ್ಷೀಯವಾಗಿದ್ದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈನ ದೇನಾ ಬ್ಯಾಂಕ್ ತಂಡವನ್ನು 29-9ರಿಂದ ಸುಲಭವಾಗಿ ಮಣಿಸಿತು. ಅರ್ಜುನ ಪ್ರಶಸ್ತಿ ಪುರಸ್ಕೃತ, ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಕಬಡ್ಡಿ ತಂಡದ ನೇತೃತ್ವ ವಹಿಸಿದ್ದ ಬಿ.ಸಿ.ರಮೇಶ ಎಸ್ಬಿಎಂ ತಂಡದ ಗೆಲುವಿನ ರೂವಾರಿ ಎನಿಸಿದರು.<br /> <br /> ಪುರುಷರ ವಿಭಾಗದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನಾಸಿಕ್ನ ಆರ್ಮಿ ತಂಡ 26-10ರಿಂದ ಮಂಗಳೂರಿನ ವೀರ ಮಾರುತಿ ತಂಡವನ್ನು ಸೋಲಿಸಿ ಫೈನಲ್ಗೆ ಮುನ್ನಡೆಯಿತು. <br /> <br /> ಇದಕ್ಕೂ ಮುನ್ನ ನಾಸಿಕ್ನ ಆರ್ಮಿ ತಂಡ 32-7ರಿಂದ ಮಹಾಲಿಂಗಪುರದ ಭೂಮಿಕಾ `ಎ~ ತಂಡವನ್ನು, ಮಂಗಳೂರಿನ ವೀರ ಮಾರುತಿ ತಂಡ 16-9ರಿಂದ ಬೆಂಗಳೂರಿನ ಹೂಡಿ ಸ್ಪೋರ್ಟ್ಸ್ ತಂಡವನ್ನು; ಮುಂಬೈನ ದೇನಾ ಬ್ಯಾಂಕ್ ತಂಡ 27-17ರಿಂದ ಮಹಾಲಿಂಗಪುರದ ಭೂಮಿಕಾ `ಬಿ~ ತಂಡವನ್ನು ಹಾಗೂ ಬೆಂಗಳೂರಿನ ಎಸ್ಬಿಎಂ ತಂಡ 35-8ರಿಂದ ಮುಂಬೈನ ಫೈಜರ್ ಜಿಮಖಾನಾ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿದ್ದವು.<br /> <br /> ಮಹಿಳೆಯರ ವಿಭಾಗದಲ್ಲಿ ಕಾರವಾರದ ಕಾತ್ಯಾಯಿನಿ, ಪುತ್ತೂರಿನ ಸೇಂಟ್ ಫೆಲೋಮಿನಾ, ಮೂಡಬಿದ್ರಿಯ ಆಳ್ವಾಸ್ ಹಾಗೂ ಮುಂಬೈನ ದೇನಾ ಬ್ಯಾಂಕ್ ತಂಡಗಳು ಸೆಮಿಫೈನಲ್ ಪ್ರವೇಶಿದವು.<br /> <br /> ಕಾರವಾರದ ಕಾತ್ಯಾಯಿನಿ ತಂಡ 18-6ರಿಂದ ಪನ್ನಾಲದ ಸಂಸ್ಕೃತಿ ತಂಡದ ವಿರುದ್ಧವೂ; ಪುತ್ತೂರಿನ ಸೇಂಟ್ ಫೆಲೋಮಿನಾ ತಂಡ 19-17 ರಿಂದ ಕೊಲ್ಲಾಪುರದ ಮಹಾಲಕ್ಷ್ಮೀ ತಂಡದ ಮೇಲೂ; ಮೂಡಬಿದ್ರಿಯ ಆಳ್ವಾಸ್ ತಂಡ 26-2ರಿಂದ ಬಾಚಣಿಯ ಜೈ ಹನುಮಾನ್ ತಂಡದ ವಿರುದ್ಧವೂ; ಮುಂಬೈನ ದೇನಾ ಬ್ಯಾಂಕ್ ತಂಡ 16-3 ರಿಂದ ಬೆಂಗಳೂರಿನ ಮಹಾರಾಣಿ ಮೇಲೂ ಗೆಲವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>