<p><strong>ಬೆಂಗಳೂರು: </strong>ಹಾಲಿ ಚಾಂಪಿಯನ್ ಗುಜರಾತ್ನ ಅಶ್ವಿನ್ ಮಕ್ವಾನಾ ಹಾಗೂ ಮಹಾರಾಷ್ಟ್ರದ ಸ್ವಪ್ನಿಲ್ ಶಾ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಫಿಡೆ ರೇಟೆಡ್ ಅಂಧರ ಓಪನ್ ಚೆಸ್ ಟೂರ್ನಿಯಲ್ಲಿ ಜಂಟಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.<br /> <br /> ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ಕುತೂಹಲ ಮೂಡಿಸಿದ್ದ ಏಳನೇ ಸುತ್ತಿನ ಪಂದ್ಯದಲ್ಲಿ ಅಶ್ವಿನ್ ಕರ್ನಾಟಕದ ಕಿಷನ್ ಗಂಗೊಳ್ಳಿ ಅವರೊಂದಿಗೆ ಡ್ರಾ ಮಾಡಿಕೊಂಡರು. ಈ ಮೂಲಕ ಉಭಯ ಆಟಗಾರರ ಪಾಯಿಂಟ್ ಹಂಚಿಕೊಂಡರು.<br /> <br /> ಆದರೆ 6 ಪಾಯಿಂಟ್ ಹೊಂದಿರುವ ಮಕ್ವಾನ್ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ತಮ್ಮ ರಾಜ್ಯದವರೇ ಆದ ಅಮಿತ್ ದೇಶಪಾಂಡೆ ಜೊತೆ ಡ್ರಾ ಸಾಧಿಸಿದ ಸ್ವಪ್ನಿಲ್ ಕೂಡ ಆರು ಪಾಯಿಂಟ್ ಹೊಂದಿದ್ದಾರೆ. ಹಾಗಾಗಿ ಬುಧವಾರ ನಡೆಯಲಿರುವ ಕೊನೆಯ ಸುತ್ತಿನ ಪಂದ್ಯ ಕುತೂಹಲ ಮೂಡಿಸಿದೆ.<br /> <br /> ಕಿಷನ್ 5.5 ಪಾಯಿಂಟ್ಗಳೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಒಡಿಶಾದ ಪ್ರಚೂರ್ಯ ಕುಮಾರ್ ಪ್ರಧಾನ್ ಕೂಡ ಇಷ್ಟೇ ಪಾಯಿಂಟ್ ಹೊಂದಿದ್ದಾರೆ. ಅವರು ಏಳನೇ ಸುತ್ತಿನ ಪಂದ್ಯದಲ್ಲಿ ನವದೆಹಲಿಯ ಅಖಿಲೇಶ್ ಶ್ರೀವಾತ್ಸವ ಅವರೊಂದಿಗೆ ಡ್ರಾ ಮಾಡಿಕೊಂಡರು. <br /> <br /> ಕರ್ನಾಟಕದ ಮತ್ತೊಬ್ಬ ಆಟಗಾರ ಕೃಷ್ಣ ಉಡುಪ ಕೂಡ 5.5 ಪಾಯಿಂಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಒಡಿಶಾದ ಸೌಂದರ್ಯ ಕುಮಾರ್ ಪ್ರಧಾನ್ (4.5 ಪಾಯಿಂಟ್ಸ್) ಅವರನ್ನು ಮಣಿಸಿ ಪೂರ್ಣ ಪಾಯಿಂಟ್ ಗಿಟ್ಟಿಸಿಕೊಂಡರು. ಕರ್ನಾಟಕದ ಮತ್ತೊಬ್ಬ ಆಟಗಾರ ಎಸ್.ಶ್ರೀನಿವಾಸ್ ಏಳನೇ ಸುತ್ತಿನಲ್ಲಿ ಸೋಲು ಕಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಹಾಲಿ ಚಾಂಪಿಯನ್ ಗುಜರಾತ್ನ ಅಶ್ವಿನ್ ಮಕ್ವಾನಾ ಹಾಗೂ ಮಹಾರಾಷ್ಟ್ರದ ಸ್ವಪ್ನಿಲ್ ಶಾ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಫಿಡೆ ರೇಟೆಡ್ ಅಂಧರ ಓಪನ್ ಚೆಸ್ ಟೂರ್ನಿಯಲ್ಲಿ ಜಂಟಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.<br /> <br /> ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ಕುತೂಹಲ ಮೂಡಿಸಿದ್ದ ಏಳನೇ ಸುತ್ತಿನ ಪಂದ್ಯದಲ್ಲಿ ಅಶ್ವಿನ್ ಕರ್ನಾಟಕದ ಕಿಷನ್ ಗಂಗೊಳ್ಳಿ ಅವರೊಂದಿಗೆ ಡ್ರಾ ಮಾಡಿಕೊಂಡರು. ಈ ಮೂಲಕ ಉಭಯ ಆಟಗಾರರ ಪಾಯಿಂಟ್ ಹಂಚಿಕೊಂಡರು.<br /> <br /> ಆದರೆ 6 ಪಾಯಿಂಟ್ ಹೊಂದಿರುವ ಮಕ್ವಾನ್ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ತಮ್ಮ ರಾಜ್ಯದವರೇ ಆದ ಅಮಿತ್ ದೇಶಪಾಂಡೆ ಜೊತೆ ಡ್ರಾ ಸಾಧಿಸಿದ ಸ್ವಪ್ನಿಲ್ ಕೂಡ ಆರು ಪಾಯಿಂಟ್ ಹೊಂದಿದ್ದಾರೆ. ಹಾಗಾಗಿ ಬುಧವಾರ ನಡೆಯಲಿರುವ ಕೊನೆಯ ಸುತ್ತಿನ ಪಂದ್ಯ ಕುತೂಹಲ ಮೂಡಿಸಿದೆ.<br /> <br /> ಕಿಷನ್ 5.5 ಪಾಯಿಂಟ್ಗಳೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಒಡಿಶಾದ ಪ್ರಚೂರ್ಯ ಕುಮಾರ್ ಪ್ರಧಾನ್ ಕೂಡ ಇಷ್ಟೇ ಪಾಯಿಂಟ್ ಹೊಂದಿದ್ದಾರೆ. ಅವರು ಏಳನೇ ಸುತ್ತಿನ ಪಂದ್ಯದಲ್ಲಿ ನವದೆಹಲಿಯ ಅಖಿಲೇಶ್ ಶ್ರೀವಾತ್ಸವ ಅವರೊಂದಿಗೆ ಡ್ರಾ ಮಾಡಿಕೊಂಡರು. <br /> <br /> ಕರ್ನಾಟಕದ ಮತ್ತೊಬ್ಬ ಆಟಗಾರ ಕೃಷ್ಣ ಉಡುಪ ಕೂಡ 5.5 ಪಾಯಿಂಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಒಡಿಶಾದ ಸೌಂದರ್ಯ ಕುಮಾರ್ ಪ್ರಧಾನ್ (4.5 ಪಾಯಿಂಟ್ಸ್) ಅವರನ್ನು ಮಣಿಸಿ ಪೂರ್ಣ ಪಾಯಿಂಟ್ ಗಿಟ್ಟಿಸಿಕೊಂಡರು. ಕರ್ನಾಟಕದ ಮತ್ತೊಬ್ಬ ಆಟಗಾರ ಎಸ್.ಶ್ರೀನಿವಾಸ್ ಏಳನೇ ಸುತ್ತಿನಲ್ಲಿ ಸೋಲು ಕಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>