<p><strong>ಸಿದ್ದಾಪುರ: </strong>ಪಟ್ಟಣದ ಹಾಳದಕಟ್ಟಾದ ಜಗದ್ಗುರು ಮುರುಘರಾಜೇಂದ್ರ ಅಂಧರ ಶಾಲೆ ಕಣ್ಣಿಲ್ಲದ ಮಕ್ಕಳಿಗೆ ಅಕ್ಷರದ ಕಣ್ಣು ನೀಡುವ ಕೆಲಸ ಪ್ರಾರಂಭಿಸಿ ಎರಡು ದಶಕಗಳೇ ಕಳೆದಿವೆ. ಈ ಶಾಲೆಯಲ್ಲಿ ಕಣ್ಣಿಲ್ಲದ ಮಕ್ಕಳೊಂದಿಗೆ, ಶಾರೀರಿಕ ಅಂಗವಿಕಲತೆ ಹೊಂದಿದ ಬಾಲಕರೂ ವೃತ್ತಿಪರ ತರಬೇತಿ ಪಡೆಯುತ್ತಿರುವುದು ವಿಶೇಷ.<br /> <br /> 90ರ ದಶಕದಲ್ಲಿ ಆರಂಭಗೊಂಡ ಈ ಅಂಧರ ಶಾಲೆಯಲ್ಲಿ ಇಲ್ಲಿಯವರೆಗೆ ಸುಮಾರು 400 ಅಂಧ ಮಕ್ಕಳು ವಿದ್ಯೆ ಪಡೆದಿದ್ದಾರೆ. ಈ ಶಾಲೆಯಲ್ಲಿ ಮಕ್ಕಳಿಗೆ ವಿದ್ಯೆ ನೀಡುವುದರೊಂದಿಗೆ ವಸತಿ, ಬಟ್ಟೆ,ಆಹಾರ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅದರೊಂದಿಗೆ ಕಳೆದ 5 ವರ್ಷಗಳಿಂದ ಅಂಧ ಮಕ್ಕಳೊಂದಿಗೆ ಅಂಗವಿಕಲ ಮಕ್ಕಳಿಗೂ ವಿವಿಧ ತರಬೇತಿ ಕೋರ್ಸ್ ಗಳನ್ನು ಆರಂಭಿಸಲಾಗಿದೆ. ಆದರೆ ಅಂಗವಿಕಲ ಮಕ್ಕಳಿಗೆ ವಸತಿ ವ್ಯವಸ್ಥೆಯನ್ನು ಸಂಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಈ ವೃತ್ತಿಪರ ಕೋರ್ಸ್ ಮೂಲಕ 60–70 ಅಂಗವಿಕಲ ಮಕ್ಕಳು ಪೇಪರ್ ಬ್ಯಾಗ್, ಕವರ್, ರಾಖಿ ಮತ್ತಿತರ ವಸ್ತುಗಳ ತಯಾರಿಕೆ ಕಲಿತಿದ್ದಾರೆ.<br /> <br /> ‘ನಮ್ಮ ಶಾಲೆಯ ಅಂಧಮಕ್ಕಳು ಮತ್ತು ಇತರ ಅಂಗವಿಕಲ ಮಕ್ಕಳ ಸಲುವಾಗಿ ಭಾಷಾ ಪ್ರಯೋಗಾಲಯದ ಹೊಸ ಕಲ್ಪನೆಯನ್ನು ಬರುವ ದಿನಗಳಲ್ಲಿ ಸಾಕಾರಗೊಳಿಸುವ ಯೋಜನೆಯಿದೆ’ ಎಂದು ಆಶಾಕಿರಣ ಟ್ರಸ್ಟ್ ಅಧ್ಯಕ್ಷ ರವಿ ಹೆಗಡೆ ಹೂವಿನಮನೆ ಹೇಳುತ್ತಾರೆ.<br /> <br /> ‘ಆಗಾಗ ಅಲ್ಪ–ಸ್ವಲ್ಪ ಅಂಧತ್ವದೊಂದಿಗೆ ಶಾರೀರಿಕ ಅಂಗವೈಕಲ್ಯ ಹೊಂದಿರುವ ಮಕ್ಕಳು ಕೂಡ ಈ ಶಾಲೆಗೆ ಸೇರಲು ಬರುವುದುಂಟು.ಅವರಿಗೆ ಸ್ವಂತ ಕೆಲಸ ಮಾಡಿಕೊಳ್ಳಲು ಸಾಧ್ಯವಿದ್ದರೆ ಅಂತಹ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡಿದ್ದೇವೆ’ ಎನ್ನುತ್ತಾರೆ ಆಶಾಕಿರಣ ಟ್ರಸ್ಟ್ ಸದಸ್ಯ ಶ್ರೀಧರ ಭಟ್ಟ.<br /> <br /> ಪ್ರಸ್ತುತ 30 ಅಂಧಮಕ್ಕಳು ಹಾಳದಕಟ್ಟಾದ ಅಂಧರ ಶಾಲೆಯಲ್ಲಿ ಕಲಿಯುತ್ತಿದ್ದು, 9 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಮತ್ತು ಸಹೃದಯರ ಸಹಕಾರದಿಂದ ಎಲ್ಲ ವೆಚ್ಚವನ್ನು ಆಶಾಕಿರಣ ಟ್ರಸ್ಟ್ ನಿಭಾಯಿಸುತ್ತಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿದ್ದಾಪುರ: </strong>ಪಟ್ಟಣದ ಹಾಳದಕಟ್ಟಾದ ಜಗದ್ಗುರು ಮುರುಘರಾಜೇಂದ್ರ ಅಂಧರ ಶಾಲೆ ಕಣ್ಣಿಲ್ಲದ ಮಕ್ಕಳಿಗೆ ಅಕ್ಷರದ ಕಣ್ಣು ನೀಡುವ ಕೆಲಸ ಪ್ರಾರಂಭಿಸಿ ಎರಡು ದಶಕಗಳೇ ಕಳೆದಿವೆ. ಈ ಶಾಲೆಯಲ್ಲಿ ಕಣ್ಣಿಲ್ಲದ ಮಕ್ಕಳೊಂದಿಗೆ, ಶಾರೀರಿಕ ಅಂಗವಿಕಲತೆ ಹೊಂದಿದ ಬಾಲಕರೂ ವೃತ್ತಿಪರ ತರಬೇತಿ ಪಡೆಯುತ್ತಿರುವುದು ವಿಶೇಷ.<br /> <br /> 90ರ ದಶಕದಲ್ಲಿ ಆರಂಭಗೊಂಡ ಈ ಅಂಧರ ಶಾಲೆಯಲ್ಲಿ ಇಲ್ಲಿಯವರೆಗೆ ಸುಮಾರು 400 ಅಂಧ ಮಕ್ಕಳು ವಿದ್ಯೆ ಪಡೆದಿದ್ದಾರೆ. ಈ ಶಾಲೆಯಲ್ಲಿ ಮಕ್ಕಳಿಗೆ ವಿದ್ಯೆ ನೀಡುವುದರೊಂದಿಗೆ ವಸತಿ, ಬಟ್ಟೆ,ಆಹಾರ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅದರೊಂದಿಗೆ ಕಳೆದ 5 ವರ್ಷಗಳಿಂದ ಅಂಧ ಮಕ್ಕಳೊಂದಿಗೆ ಅಂಗವಿಕಲ ಮಕ್ಕಳಿಗೂ ವಿವಿಧ ತರಬೇತಿ ಕೋರ್ಸ್ ಗಳನ್ನು ಆರಂಭಿಸಲಾಗಿದೆ. ಆದರೆ ಅಂಗವಿಕಲ ಮಕ್ಕಳಿಗೆ ವಸತಿ ವ್ಯವಸ್ಥೆಯನ್ನು ಸಂಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಈ ವೃತ್ತಿಪರ ಕೋರ್ಸ್ ಮೂಲಕ 60–70 ಅಂಗವಿಕಲ ಮಕ್ಕಳು ಪೇಪರ್ ಬ್ಯಾಗ್, ಕವರ್, ರಾಖಿ ಮತ್ತಿತರ ವಸ್ತುಗಳ ತಯಾರಿಕೆ ಕಲಿತಿದ್ದಾರೆ.<br /> <br /> ‘ನಮ್ಮ ಶಾಲೆಯ ಅಂಧಮಕ್ಕಳು ಮತ್ತು ಇತರ ಅಂಗವಿಕಲ ಮಕ್ಕಳ ಸಲುವಾಗಿ ಭಾಷಾ ಪ್ರಯೋಗಾಲಯದ ಹೊಸ ಕಲ್ಪನೆಯನ್ನು ಬರುವ ದಿನಗಳಲ್ಲಿ ಸಾಕಾರಗೊಳಿಸುವ ಯೋಜನೆಯಿದೆ’ ಎಂದು ಆಶಾಕಿರಣ ಟ್ರಸ್ಟ್ ಅಧ್ಯಕ್ಷ ರವಿ ಹೆಗಡೆ ಹೂವಿನಮನೆ ಹೇಳುತ್ತಾರೆ.<br /> <br /> ‘ಆಗಾಗ ಅಲ್ಪ–ಸ್ವಲ್ಪ ಅಂಧತ್ವದೊಂದಿಗೆ ಶಾರೀರಿಕ ಅಂಗವೈಕಲ್ಯ ಹೊಂದಿರುವ ಮಕ್ಕಳು ಕೂಡ ಈ ಶಾಲೆಗೆ ಸೇರಲು ಬರುವುದುಂಟು.ಅವರಿಗೆ ಸ್ವಂತ ಕೆಲಸ ಮಾಡಿಕೊಳ್ಳಲು ಸಾಧ್ಯವಿದ್ದರೆ ಅಂತಹ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡಿದ್ದೇವೆ’ ಎನ್ನುತ್ತಾರೆ ಆಶಾಕಿರಣ ಟ್ರಸ್ಟ್ ಸದಸ್ಯ ಶ್ರೀಧರ ಭಟ್ಟ.<br /> <br /> ಪ್ರಸ್ತುತ 30 ಅಂಧಮಕ್ಕಳು ಹಾಳದಕಟ್ಟಾದ ಅಂಧರ ಶಾಲೆಯಲ್ಲಿ ಕಲಿಯುತ್ತಿದ್ದು, 9 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಮತ್ತು ಸಹೃದಯರ ಸಹಕಾರದಿಂದ ಎಲ್ಲ ವೆಚ್ಚವನ್ನು ಆಶಾಕಿರಣ ಟ್ರಸ್ಟ್ ನಿಭಾಯಿಸುತ್ತಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>