<p><strong>ನವದೆಹಲಿ (ಪಿಟಿಐ):</strong> `2 ಜಿ ತರಂಗಾಂತರ ಹಗರಣದ ವಿಚಾರಣೆಯಲ್ಲಿ ರಿಲಯನ್ಸ್ ಎಡಿಎ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ, ಅವರ ಪತ್ನಿ ಟೀನಾ ಅಂಬಾನಿ ಹಾಗೂ ಇತರ 11 ಜನರು ಸಾಕ್ಷಿಗಳಾಗಿ ಹೇಳಿಕೆ ನೀಡುವುದು ಅಗತ್ಯ' ಎಂದು ಹೇಳಿದ ನ್ಯಾಯಾಲಯ, ಈ ಸಂಬಂಧ ಇವರೆಲ್ಲರಿಗೂ ಸಮನ್ಸ್ ಜಾರಿಗೆ ಆದೇಶಿಸಿತು.<br /> <br /> `ಪ್ರಕರಣದಲ್ಲಿ ಸೂಕ್ತ ತೀರ್ಪು ನೀಡಬೇಕಾದರೆ ಈ ಸಾಕ್ಷಿಗಳು ನೀಡುವ ಹೇಳಿಕೆಗಳ ಪರಿಶೀಲನೆ ಅಗತ್ಯ' ಎಂದು ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ಶುಕ್ರವಾರ ಹೇಳಿದರು.<br /> <br /> `ಸ್ವಾನ್ ಟೆಲಿಕಾಂ ಕಂಪೆನಿ ಮೂಲಕ ರಿಲಯನ್ಸ್ ಎಡಿಎ ಕಂಪೆನಿ 990 ಕೋಟಿ ರೂಪಾಯಿಯನ್ನು ನಿಯಮಬಾಹಿರವಾಗಿ ಹೂಡಿಕೆ ಮಾಡಿದೆ ಎನ್ನಲಾಗಿದ್ದು, ಈ ಸಂಬಂಧ ಅನಿಲ್ ಅಂಬಾನಿ ಅವರ ಹೇಳಿಕೆ `ಬೆಳಕು ಚೆಲ್ಲಬಲ್ಲದು'; ಹೀಗಾಗಿ ಅವರನ್ನು ಸಾಕ್ಷಿಯಾಗಿ ಕರೆಸಬೇಕು' ಎಂದು ಸಿಬಿಐ, ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಕೋರಿತ್ತು.<br /> <br /> ನಕಲಿ ಕಂಪೆನಿಗಳ ಹಿನ್ನೆಲೆಯ ಬಗ್ಗೆ ತಿಳಿಯಲು ಅನಿಲ್ ಅಂಬಾನಿ ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. 990 ಕೋಟಿ ರೂಪಾಯಿ ಹೂಡಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾದ ಸಭೆಗೆ ಹಾಜರಾಗಿಲ್ಲದೇ ಇರಬಹುದು. ಆದರೆ ಈ ಸಂಬಂಧದ ಎಲ್ಲಾ ವಿದ್ಯಮಾನಗಳು ಅವರಿಗೆ ಗೊತ್ತಿದ್ದವು ಎಂದು ಸಿಬಿಐ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಯು.ಯು.ಲಲಿತ್ ಅವರು ವಾದಿಸಿದ್ದರು.<br /> <br /> ಮೊತ್ತದ ಮೇಲೆ ಯಾವುದೇ ಮಿತಿ ಇಲ್ಲದಂತೆ ಚೆಕ್ಗೆ ಸಹಿ ಹಾಕುವ ಅಧಿಕಾರ ಟೀನಾ ಅಂಬಾನಿ ಅವರಿಗೆ ಇತ್ತು. 990 ಕೋಟಿ ರೂಪಾಯಿ ಹೂಡಿಕೆ ಸಂಬಂಧ ನಡೆದಿದ್ದ ಎಲ್ಲಾ ಪ್ರಮುಖ ಸಭೆಗಳಲ್ಲಿ ಅವರು ಭಾಗವಹಿಸಿದ್ದರು ಎಂದೂ ಸಿಬಿಐ ಹೇಳಿತ್ತು.<br /> <br /> `ಈ ಪ್ರಕರಣದಲ್ಲಿ ಅಂಬಾನಿ ದಂಪತಿ ಮತ್ತು ಇತರರನ್ನು ಬೇಕೆಂತಲೇ ಎಳೆದು ತರಲು ಸಿಬಿಐ ಯತ್ನಿಸುತ್ತಿದೆ. ವಿಚಾರಣೆ ಪ್ರಕ್ರಿಯೆಯ ಕಡೆಯ ಹಂತದಲ್ಲಿ ಸಿಬಿಐ ಅರ್ಜಿ ಹಾಕಿರುವುದೇ ಅದರ ಉದ್ದೇಶವನ್ನು ತೋರಿಸುತ್ತದೆ' ಎಂದು ಅಂಬಾನಿ ಪರ ವಕೀಲರು ವಾದಿಸಿದ್ದರು.<br /> ಆದರೆ ಈ ವಾದವನ್ನು ನ್ಯಾಯಾಧೀಶರು ಒಪ್ಪಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> `2 ಜಿ ತರಂಗಾಂತರ ಹಗರಣದ ವಿಚಾರಣೆಯಲ್ಲಿ ರಿಲಯನ್ಸ್ ಎಡಿಎ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ, ಅವರ ಪತ್ನಿ ಟೀನಾ ಅಂಬಾನಿ ಹಾಗೂ ಇತರ 11 ಜನರು ಸಾಕ್ಷಿಗಳಾಗಿ ಹೇಳಿಕೆ ನೀಡುವುದು ಅಗತ್ಯ' ಎಂದು ಹೇಳಿದ ನ್ಯಾಯಾಲಯ, ಈ ಸಂಬಂಧ ಇವರೆಲ್ಲರಿಗೂ ಸಮನ್ಸ್ ಜಾರಿಗೆ ಆದೇಶಿಸಿತು.<br /> <br /> `ಪ್ರಕರಣದಲ್ಲಿ ಸೂಕ್ತ ತೀರ್ಪು ನೀಡಬೇಕಾದರೆ ಈ ಸಾಕ್ಷಿಗಳು ನೀಡುವ ಹೇಳಿಕೆಗಳ ಪರಿಶೀಲನೆ ಅಗತ್ಯ' ಎಂದು ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ಶುಕ್ರವಾರ ಹೇಳಿದರು.<br /> <br /> `ಸ್ವಾನ್ ಟೆಲಿಕಾಂ ಕಂಪೆನಿ ಮೂಲಕ ರಿಲಯನ್ಸ್ ಎಡಿಎ ಕಂಪೆನಿ 990 ಕೋಟಿ ರೂಪಾಯಿಯನ್ನು ನಿಯಮಬಾಹಿರವಾಗಿ ಹೂಡಿಕೆ ಮಾಡಿದೆ ಎನ್ನಲಾಗಿದ್ದು, ಈ ಸಂಬಂಧ ಅನಿಲ್ ಅಂಬಾನಿ ಅವರ ಹೇಳಿಕೆ `ಬೆಳಕು ಚೆಲ್ಲಬಲ್ಲದು'; ಹೀಗಾಗಿ ಅವರನ್ನು ಸಾಕ್ಷಿಯಾಗಿ ಕರೆಸಬೇಕು' ಎಂದು ಸಿಬಿಐ, ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಕೋರಿತ್ತು.<br /> <br /> ನಕಲಿ ಕಂಪೆನಿಗಳ ಹಿನ್ನೆಲೆಯ ಬಗ್ಗೆ ತಿಳಿಯಲು ಅನಿಲ್ ಅಂಬಾನಿ ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. 990 ಕೋಟಿ ರೂಪಾಯಿ ಹೂಡಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾದ ಸಭೆಗೆ ಹಾಜರಾಗಿಲ್ಲದೇ ಇರಬಹುದು. ಆದರೆ ಈ ಸಂಬಂಧದ ಎಲ್ಲಾ ವಿದ್ಯಮಾನಗಳು ಅವರಿಗೆ ಗೊತ್ತಿದ್ದವು ಎಂದು ಸಿಬಿಐ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಯು.ಯು.ಲಲಿತ್ ಅವರು ವಾದಿಸಿದ್ದರು.<br /> <br /> ಮೊತ್ತದ ಮೇಲೆ ಯಾವುದೇ ಮಿತಿ ಇಲ್ಲದಂತೆ ಚೆಕ್ಗೆ ಸಹಿ ಹಾಕುವ ಅಧಿಕಾರ ಟೀನಾ ಅಂಬಾನಿ ಅವರಿಗೆ ಇತ್ತು. 990 ಕೋಟಿ ರೂಪಾಯಿ ಹೂಡಿಕೆ ಸಂಬಂಧ ನಡೆದಿದ್ದ ಎಲ್ಲಾ ಪ್ರಮುಖ ಸಭೆಗಳಲ್ಲಿ ಅವರು ಭಾಗವಹಿಸಿದ್ದರು ಎಂದೂ ಸಿಬಿಐ ಹೇಳಿತ್ತು.<br /> <br /> `ಈ ಪ್ರಕರಣದಲ್ಲಿ ಅಂಬಾನಿ ದಂಪತಿ ಮತ್ತು ಇತರರನ್ನು ಬೇಕೆಂತಲೇ ಎಳೆದು ತರಲು ಸಿಬಿಐ ಯತ್ನಿಸುತ್ತಿದೆ. ವಿಚಾರಣೆ ಪ್ರಕ್ರಿಯೆಯ ಕಡೆಯ ಹಂತದಲ್ಲಿ ಸಿಬಿಐ ಅರ್ಜಿ ಹಾಕಿರುವುದೇ ಅದರ ಉದ್ದೇಶವನ್ನು ತೋರಿಸುತ್ತದೆ' ಎಂದು ಅಂಬಾನಿ ಪರ ವಕೀಲರು ವಾದಿಸಿದ್ದರು.<br /> ಆದರೆ ಈ ವಾದವನ್ನು ನ್ಯಾಯಾಧೀಶರು ಒಪ್ಪಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>