<p><strong>ಬೆಳಗಾವಿ:</strong> ನಗರದಲ್ಲಿ ಕಾನೂನು ಉಲ್ಲಂಘಿಸಿ ಬಹುಮಹಡಿ ಕಟ್ಟಿಕೊಂಡಿರುವ ನೂರಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳನ್ನು ತೆರವು ಗೊಳಿಸಲು ಮಹಾನಗರ ಪಾಲಿಕೆ ಮುಂದಾಗಿರುವುದಕ್ಕೆ ಸಂಸದ ಸುರೇಶ ಅಂಗಡಿ ಅವರು ಅಡ್ಡಗಾಲು ಹಾಕಲು ಯತ್ನಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಿಂದ ತೀವ್ರವಾದ ಖಂಡನೆ ವ್ಯಕ್ತವಾಗಿದೆ.<br /> <br /> ನಗರದಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವುದು ಬೇಡ ಎಂದು ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರಿಗೆ ಕಾನೂನು ರೂಪಿಸ ಬೇಕಾದ ಸಂಸದರೇ ಜುಲೈ 13ರಂದು ಲಿಖಿತವಾಗಿ ಸೂಚಿಸುವ ಮೂಲಕ ಕಾನೂನು ಉಲ್ಲಂಘಿಸಿದ ಬಿಲ್ಡರ್ಗಳ ಬೆಂಬಲಕ್ಕೆ ನಿಂತಿರುವುದು ನಾಗರಿಕರಲ್ಲಿ ನಿರಾಸೆ ಮೂಡಿಸಿದೆ. <br /> <br /> ನಿಯಮ ಬಾಹಿರವಾಗಿ ಮಹಡಿ ಮೇಲೆ ಮಹಡಿ ನಿರ್ಮಿಸುತ್ತಿರುವ ಕಟ್ಟಡಗಳು ನಗರದಲ್ಲಿ `ನಾಯಿ ಕೊಡೆ~ಗಳಂತೆ ತಲೆ ಎತ್ತುತ್ತಿವೆ. ಹೀಗಾಗಿಯೇ ಪಾಲಿಕೆಯ ಅಧಿಕಾರಿಗಳು ಇವುಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಆದರೆ, ಇದೀಗ ಸಂಸದರು ಕಟ್ಟಡಗಳನ್ನು ತೆರವುಗೊಳಿಸದಂತೆ ಸೂಚಿಸಿರುವುದರಿಂದ ಕಾನೂನು ಬಾಹಿರವಾಗಿ ಬಹುಮಹಡಿಗಳನ್ನು ನಿರ್ಮಿಸುವ ಬಿಲ್ಡರ್ಸ್ಗಳಿಗೆ `ಆನೆ ಬಲ~ ಬಂದಂತಾಗಿದೆ. <br /> <br /> `ಬೆಳಗಾವಿಯು ಅತಿ ವೇಗದಿಂದ ಬೆಳೆಯುತ್ತಿರುವ ನಗರವಾಗಿದ್ದು, ಸುವರ್ಣ ಸೌಧ ನಿರ್ಮಾಣವಾಗುವ ಮೂಲಕ ಎರಡನೇ ರಾಜಧಾನಿಯಾಗಿದೆ. ಇಲ್ಲಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುತ್ತಿರುವುದು ಸಹಜ ವಾಗಿದೆ. ಹೀಗಾಗಿ ಇಂದಿನ ನಗರದ ಬೆಳವಣಿಗೆಗೆ ತಕ್ಕಂತೆ `ಸಮಗ್ರ ಅಭಿವೃದ್ಧಿ ಯೋಜನೆ~ (ಸಿಡಿಪಿ)ಯಲ್ಲಿಮಾರ್ಪಾಡಾಗುವವರೆಗೂ ಕಟ್ಟಡ ಗಳನ್ನು ತೆರವುಗೊಳಿಸಬಾರದು~ ಎಂದು ಅಂಗಡಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. <br /> <br /> ಕಾನೂನು ರೂಪಿಸುವ ಸಂಸದರು ಕಾನೂನು ಬಾಹಿರ ಕಟ್ಟಡ ನಿರ್ಮಾಣವನ್ನು ಬೆಂಬಲಿ ಸುತ್ತಿರುವುದು ಸರಿಯಲ್ಲ. ಇದರ ಹಿಂದೆ ಅವರ ವೈಯಕ್ತಿಕ ಹಿತಾಸಕ್ತಿ ಇದೆ. ಇದರಿಂದಾಗಿ ಸಾರ್ವಜನಿಕರು ಏಕೆ ತೊಂದರೆ ಪಡಬೇಕು ಎಂದು ವ್ಯಾಪಾರಿ ಬಸವರಾಜ ಪ್ರಶ್ನಿಸುತ್ತಾರೆ. <br /> <br /> ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಸಣ್ಣ ಪುಟ್ಟ ಅತಿಕ್ರಮಣ ಮಾಡಿದ್ದ ಮನೆಯನ್ನೂ ಒಡೆಯಲಾಗಿತ್ತು. ಆಗ ಸಂಸದರು ಯಾರೊಬ್ಬರ ಬೆಂಬಲಕ್ಕೂ ಬಂದಿರಲಿಲ್ಲ. ಆದರೆ, ಇದೀಗ ಬಿಲ್ಡರ್ಸ್ಗಳ ಬೆಂಬಲಕ್ಕೆ ನಿಂತಿರುವುದು ವಿಪರ್ಯಾಸ ಎನ್ನುತ್ತಾರೆ ಉದ್ಯಮಿ ರಾಜು ಹಿರೇಮಠ. <br /> <br /> ಪಾಲಿಕೆಯಲ್ಲಿರುವ ದಾಖಲೆಗಳ ಪ್ರಕಾರ ನೆಲ ಮಹಡಿ ಸೇರಿದಂತೆ ಎರಡು ಮಹಡಿ ನಿರ್ಮಿಸಲು 285 ಕಟ್ಟಡಗಳಿಗೆ ಪರವಾನಿಗೆ ನೀಡಲಾಗುತ್ತು. ಆದರೆ, ಇವುಗಳ ಪೈಕಿ 104 ಕಟ್ಟಡಗಳಲ್ಲಿ ನಿಯಮ ಬಾಹಿರವಾಗಿ ಮಹಡಿಗಳನ್ನು ನಿರ್ಮಿಸಲಾಗಿದೆ. ನಿಯಮ ಬಾಹಿರವಾಗಿ ಬಹುಮಹಡಿ ಕಟ್ಟಡ ನಿರ್ಮಿಸುತ್ತಿರುವುದನ್ನು ತಡೆಯಲಾಗುತ್ತಿದೆ. <br /> <br /> ಕರ್ನಾಟಕ ವಿಧಾನಮಂಡಲದ ಅಂದಾಜು ಸಮಿತಿಯು ಅನಧಿಕೃತ ಕಟ್ಟಡ ನಿರ್ಮಾಣವನ್ನು ತಡೆಯುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ನಾವು ಕಾರ್ಯಾಚರಣೆ ಮಾಡಲಿದ್ದೇವೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು `ಪ್ರಜಾವಾಣಿ~ಗೆ ತಿಳಿಸಿದರು. <br /> <br /> ನಿಯಮ ಉಲ್ಲಂಗಿಸಿದ ಕಟ್ಟಡಗಳ ತಪಾಸಣೆ ನಡೆಸಲಾಗುತ್ತಿದೆ. ಅನಧಿಕೃತವಾಗಿ ಛಾವಣಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವುದನ್ನೂ ತೆರವುಗೊಳಿಸಲಾಗುವುದು ಎಂದು ತಿಳಿಸಿದರು. <br /> <br /> <strong>ನೆಲಮಾಳಿಗೆ ಅಬಾಧಿತ!: </strong><br /> ನಗರದ ಮಾರ್ಕೆಟ್ ಪ್ರದೇಶಗಳಲ್ಲಿನ ಹಲವು ಬಹುಮಹಡಿ ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕಿದ್ದ `ನೆಲ ಮಾಳಿಗೆ~ಯಲ್ಲೂ ಅನಧಿಕೃತವಾಗಿ ನೂರಾರು ಅಂಗಡಿಗಳು ನಡೆಯುತ್ತಿವೆ. <br /> ಪಾಲಿಕೆಯಿಂದ ಪರವಾನಿಗೆ ಪಡೆದುಕೊಳ್ಳು ವಾಗಿ ಪಾರ್ಕಿಂಗ್ಗೆ ಜಾಗ ತೋರಿಸಿರುವ ಸ್ಥಳಗಳಲ್ಲಿ ನೂರಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ತಲೆ ಎತ್ತಿವೆ. ಗಣಪತಿ ಗಲ್ಲಿ, ಖಡೇಬಜಾರ, ರಾಮದೇವ ಗಲ್ಲಿ ಸೇರಿದಂತೆ ಹಲವೆಡೆ ಪಾರವಾನಿಗೆ ಪಡೆಯದೇ ನಿಯಮಬಾಹಿರವಾಗಿ ಅಂಗಡಿಗಳನ್ನು ನಡೆಸಲಾಗುತ್ತಿದೆ. <br /> <br /> ಈ ಬಗ್ಗೆ ಪಾಲಿಕೆಯ ಆಯುಕ್ತರ ಗಮನಕ್ಕೆ ತಂದಾಗ, ಪಾರ್ಕಿಂಗ್ಗೆ ಅವಕಾಶ ಕಲ್ಪಿಸಬೇಕಾದ ಜಾಗದಲ್ಲಿ ಪರವಾನಿಗೆ ಪಡೆಯದೇ ಅಂಗಡಿ ಇಟ್ಟುಕೊಂಡಿರುವ ಬಗ್ಗೆ ಸಮೀಕ್ಷೆ ನಡೆಸಿ, ಅವುಗಳ ಮೇಲೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಅವರು ಸೂಚಿಸಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ನಗರದಲ್ಲಿ ಕಾನೂನು ಉಲ್ಲಂಘಿಸಿ ಬಹುಮಹಡಿ ಕಟ್ಟಿಕೊಂಡಿರುವ ನೂರಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳನ್ನು ತೆರವು ಗೊಳಿಸಲು ಮಹಾನಗರ ಪಾಲಿಕೆ ಮುಂದಾಗಿರುವುದಕ್ಕೆ ಸಂಸದ ಸುರೇಶ ಅಂಗಡಿ ಅವರು ಅಡ್ಡಗಾಲು ಹಾಕಲು ಯತ್ನಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಿಂದ ತೀವ್ರವಾದ ಖಂಡನೆ ವ್ಯಕ್ತವಾಗಿದೆ.<br /> <br /> ನಗರದಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವುದು ಬೇಡ ಎಂದು ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರಿಗೆ ಕಾನೂನು ರೂಪಿಸ ಬೇಕಾದ ಸಂಸದರೇ ಜುಲೈ 13ರಂದು ಲಿಖಿತವಾಗಿ ಸೂಚಿಸುವ ಮೂಲಕ ಕಾನೂನು ಉಲ್ಲಂಘಿಸಿದ ಬಿಲ್ಡರ್ಗಳ ಬೆಂಬಲಕ್ಕೆ ನಿಂತಿರುವುದು ನಾಗರಿಕರಲ್ಲಿ ನಿರಾಸೆ ಮೂಡಿಸಿದೆ. <br /> <br /> ನಿಯಮ ಬಾಹಿರವಾಗಿ ಮಹಡಿ ಮೇಲೆ ಮಹಡಿ ನಿರ್ಮಿಸುತ್ತಿರುವ ಕಟ್ಟಡಗಳು ನಗರದಲ್ಲಿ `ನಾಯಿ ಕೊಡೆ~ಗಳಂತೆ ತಲೆ ಎತ್ತುತ್ತಿವೆ. ಹೀಗಾಗಿಯೇ ಪಾಲಿಕೆಯ ಅಧಿಕಾರಿಗಳು ಇವುಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಆದರೆ, ಇದೀಗ ಸಂಸದರು ಕಟ್ಟಡಗಳನ್ನು ತೆರವುಗೊಳಿಸದಂತೆ ಸೂಚಿಸಿರುವುದರಿಂದ ಕಾನೂನು ಬಾಹಿರವಾಗಿ ಬಹುಮಹಡಿಗಳನ್ನು ನಿರ್ಮಿಸುವ ಬಿಲ್ಡರ್ಸ್ಗಳಿಗೆ `ಆನೆ ಬಲ~ ಬಂದಂತಾಗಿದೆ. <br /> <br /> `ಬೆಳಗಾವಿಯು ಅತಿ ವೇಗದಿಂದ ಬೆಳೆಯುತ್ತಿರುವ ನಗರವಾಗಿದ್ದು, ಸುವರ್ಣ ಸೌಧ ನಿರ್ಮಾಣವಾಗುವ ಮೂಲಕ ಎರಡನೇ ರಾಜಧಾನಿಯಾಗಿದೆ. ಇಲ್ಲಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುತ್ತಿರುವುದು ಸಹಜ ವಾಗಿದೆ. ಹೀಗಾಗಿ ಇಂದಿನ ನಗರದ ಬೆಳವಣಿಗೆಗೆ ತಕ್ಕಂತೆ `ಸಮಗ್ರ ಅಭಿವೃದ್ಧಿ ಯೋಜನೆ~ (ಸಿಡಿಪಿ)ಯಲ್ಲಿಮಾರ್ಪಾಡಾಗುವವರೆಗೂ ಕಟ್ಟಡ ಗಳನ್ನು ತೆರವುಗೊಳಿಸಬಾರದು~ ಎಂದು ಅಂಗಡಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. <br /> <br /> ಕಾನೂನು ರೂಪಿಸುವ ಸಂಸದರು ಕಾನೂನು ಬಾಹಿರ ಕಟ್ಟಡ ನಿರ್ಮಾಣವನ್ನು ಬೆಂಬಲಿ ಸುತ್ತಿರುವುದು ಸರಿಯಲ್ಲ. ಇದರ ಹಿಂದೆ ಅವರ ವೈಯಕ್ತಿಕ ಹಿತಾಸಕ್ತಿ ಇದೆ. ಇದರಿಂದಾಗಿ ಸಾರ್ವಜನಿಕರು ಏಕೆ ತೊಂದರೆ ಪಡಬೇಕು ಎಂದು ವ್ಯಾಪಾರಿ ಬಸವರಾಜ ಪ್ರಶ್ನಿಸುತ್ತಾರೆ. <br /> <br /> ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಸಣ್ಣ ಪುಟ್ಟ ಅತಿಕ್ರಮಣ ಮಾಡಿದ್ದ ಮನೆಯನ್ನೂ ಒಡೆಯಲಾಗಿತ್ತು. ಆಗ ಸಂಸದರು ಯಾರೊಬ್ಬರ ಬೆಂಬಲಕ್ಕೂ ಬಂದಿರಲಿಲ್ಲ. ಆದರೆ, ಇದೀಗ ಬಿಲ್ಡರ್ಸ್ಗಳ ಬೆಂಬಲಕ್ಕೆ ನಿಂತಿರುವುದು ವಿಪರ್ಯಾಸ ಎನ್ನುತ್ತಾರೆ ಉದ್ಯಮಿ ರಾಜು ಹಿರೇಮಠ. <br /> <br /> ಪಾಲಿಕೆಯಲ್ಲಿರುವ ದಾಖಲೆಗಳ ಪ್ರಕಾರ ನೆಲ ಮಹಡಿ ಸೇರಿದಂತೆ ಎರಡು ಮಹಡಿ ನಿರ್ಮಿಸಲು 285 ಕಟ್ಟಡಗಳಿಗೆ ಪರವಾನಿಗೆ ನೀಡಲಾಗುತ್ತು. ಆದರೆ, ಇವುಗಳ ಪೈಕಿ 104 ಕಟ್ಟಡಗಳಲ್ಲಿ ನಿಯಮ ಬಾಹಿರವಾಗಿ ಮಹಡಿಗಳನ್ನು ನಿರ್ಮಿಸಲಾಗಿದೆ. ನಿಯಮ ಬಾಹಿರವಾಗಿ ಬಹುಮಹಡಿ ಕಟ್ಟಡ ನಿರ್ಮಿಸುತ್ತಿರುವುದನ್ನು ತಡೆಯಲಾಗುತ್ತಿದೆ. <br /> <br /> ಕರ್ನಾಟಕ ವಿಧಾನಮಂಡಲದ ಅಂದಾಜು ಸಮಿತಿಯು ಅನಧಿಕೃತ ಕಟ್ಟಡ ನಿರ್ಮಾಣವನ್ನು ತಡೆಯುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ನಾವು ಕಾರ್ಯಾಚರಣೆ ಮಾಡಲಿದ್ದೇವೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು `ಪ್ರಜಾವಾಣಿ~ಗೆ ತಿಳಿಸಿದರು. <br /> <br /> ನಿಯಮ ಉಲ್ಲಂಗಿಸಿದ ಕಟ್ಟಡಗಳ ತಪಾಸಣೆ ನಡೆಸಲಾಗುತ್ತಿದೆ. ಅನಧಿಕೃತವಾಗಿ ಛಾವಣಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವುದನ್ನೂ ತೆರವುಗೊಳಿಸಲಾಗುವುದು ಎಂದು ತಿಳಿಸಿದರು. <br /> <br /> <strong>ನೆಲಮಾಳಿಗೆ ಅಬಾಧಿತ!: </strong><br /> ನಗರದ ಮಾರ್ಕೆಟ್ ಪ್ರದೇಶಗಳಲ್ಲಿನ ಹಲವು ಬಹುಮಹಡಿ ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕಿದ್ದ `ನೆಲ ಮಾಳಿಗೆ~ಯಲ್ಲೂ ಅನಧಿಕೃತವಾಗಿ ನೂರಾರು ಅಂಗಡಿಗಳು ನಡೆಯುತ್ತಿವೆ. <br /> ಪಾಲಿಕೆಯಿಂದ ಪರವಾನಿಗೆ ಪಡೆದುಕೊಳ್ಳು ವಾಗಿ ಪಾರ್ಕಿಂಗ್ಗೆ ಜಾಗ ತೋರಿಸಿರುವ ಸ್ಥಳಗಳಲ್ಲಿ ನೂರಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ತಲೆ ಎತ್ತಿವೆ. ಗಣಪತಿ ಗಲ್ಲಿ, ಖಡೇಬಜಾರ, ರಾಮದೇವ ಗಲ್ಲಿ ಸೇರಿದಂತೆ ಹಲವೆಡೆ ಪಾರವಾನಿಗೆ ಪಡೆಯದೇ ನಿಯಮಬಾಹಿರವಾಗಿ ಅಂಗಡಿಗಳನ್ನು ನಡೆಸಲಾಗುತ್ತಿದೆ. <br /> <br /> ಈ ಬಗ್ಗೆ ಪಾಲಿಕೆಯ ಆಯುಕ್ತರ ಗಮನಕ್ಕೆ ತಂದಾಗ, ಪಾರ್ಕಿಂಗ್ಗೆ ಅವಕಾಶ ಕಲ್ಪಿಸಬೇಕಾದ ಜಾಗದಲ್ಲಿ ಪರವಾನಿಗೆ ಪಡೆಯದೇ ಅಂಗಡಿ ಇಟ್ಟುಕೊಂಡಿರುವ ಬಗ್ಗೆ ಸಮೀಕ್ಷೆ ನಡೆಸಿ, ಅವುಗಳ ಮೇಲೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಅವರು ಸೂಚಿಸಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>