<p><strong>ಮೈಸೂರು:</strong> ಲೆದರ್ ವಸ್ತುಗಳನ್ನು ತಯಾರು ಮಾಡುವ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ನಾಲ್ವರು ಅಗ್ನಿ ದುರಂತದಿಂದ ಪಾರಾದ ಘಟನೆ ಶನಿವಾರ ಮುಂಜಾನೆ ನಗರದಲ್ಲಿ ಜರುಗಿದೆ.</p>.<p>ತೊಗರಿ ಬೀದಿಯಲ್ಲಿ ಮಾದೇಶ್ ಎಂಬುವರಿಗೆ ಸೇರಿದ ಸ್ಕೂಲ್ ಬ್ಯಾಗ್ ಮತ್ತು ಜರ್ಕಿನ್ಗಳನ್ನು ಮಾರಾಟ ಮಾಡುವ ಅಂಗಡಿಗೆ ಶಾರ್ಟ್ ಷರ್ಕ್ಯೂಟ್ನಿಂದ ಮುಂಜಾನೆ 3.30ರ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತು.</p>.<p>ಇದರಿಂದ ಟೈಲರಿಂಗ್ ಯಂತ್ರ ಹಾಗೂ ಸುಮಾರು 50 ಸಾವಿರ ಮೌಲ್ಯದ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಕರಕಲಾದವು. ಅಂಗಡಿಯ ಮೇಲಿರುವ ಮೊದಲನೇ ಮಹಡಿ ಯಲ್ಲಿ ಮಾದೇಶ್ ಕುಟುಂಬ ವಾಸವಿತ್ತು.</p>.<p>ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಎಚ್ಚತ್ತುಕೊಂಡ ಮಾದೇಶ್ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಹಡಿಯಿಂದ ಕೆಳಗಿಳಿದರು. ಕೂಡಲೇ ಅಂಗಡಿಯ ಛಾವಣಿ ಕುಸಿದುಬಿತ್ತು. ಅದೃಷ್ಟವಶಾತ್ ಮಾದೇಶ್ ಕುಟುಂಬ ಯಾವುದೇ ಅಪಾಯವಿಲ್ಲದೆ ಪಾರಾಯಿತು.</p>.<p>38 ಬಂಧನ, ರೂ.49 ಸಾವಿರ ವಶ: ಕ್ಲಬ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಜೂಜಿನಲ್ಲಿ ತೊಡಗಿದ್ದ 38 ಮಂದಿಯನ್ನು ಬಂಧಿಸಿ, ಪಣಕ್ಕಿಟ್ಟಿದ್ದ ರೂ.49 ಸಾವಿರ ನಗದು ವಶಪಡಿಸಿಕೊಂಡಿರುವ ಘಟನೆ ಶನಿವಾರ ನಗರದಲ್ಲಿ ಜರುಗಿದೆ.</p>.<p>ಹೆಬ್ಬಾಳು 1ನೇ ಹಂತದ ರಿಂಗ್ ರಸ್ತೆಯ ಬಳಿಯ ಪ್ರಗತಿ ಸ್ಪೋರ್ಟ್ಸ್ ಕ್ಲಬ್ನಲ್ಲಿ ಜೂಜಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಂಜೆ ದಾಳಿ ನಡೆಸಿದಾಗ 38 ಮಂದಿ ಸಿಕ್ಕಿಬಿದ್ದಿದ್ದಾರೆ. ಕ್ಲಬ್ನ ಮುಂದೆ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳು ಸೇರಿದಂತೆ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.</p>.<p>ಮಹಿಳೆಯ ಬಂಧನ: ಆಲನಹಳ್ಳಿಯ ಜುವೆಲ್ಲರಿ ಅಂಗಡಿಯಲ್ಲಿ ಕಳವು ಮಾಡಿದ ಆರೋಪದ ಮೇರೆಗೆ ಮಹಿಳೆಯನ್ನು ನಜರ್ಬಾದ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.</p>.<p>ಚಿಕ್ಕಹುಣಸೂರಿನ ಪಾರ್ವತಿ (60) ಬಂಧಿತ ಮಹಿಳೆ. ಅಂಗಡಿಯಲ್ಲಿ ವ್ಯಾಪಾರ ಮಾಡುವ ನಾಟಕವಾಡಿದ ಈಕೆ ಬೆಳ್ಳಿ ಪದಾರ್ಥಗಳನ್ನು ಬ್ಯಾಗ್ಗೆ ಹಾಕಿಕೊಳ್ಳುವಾಗ ಸಿಕ್ಕಿಬಿದ್ದಿದ್ದಾಳೆ ಎನ್ನಲಾಗಿದೆ. ಪ್ರಕರಣ ದಾಖಲಾಗಿದೆ.</p>.<p>ವೃದ್ಧೆಯ ಶವ ಪತ್ತೆ: ನಗರದ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ 6ರಲ್ಲಿ ಅಪರಿಚಿತ ವೃದ್ಧೆಯ ಶವ ಶನಿವಾರ ಪತ್ತೆಯಾಗಿದೆ. 5 ಅಡಿ ಎತ್ತರ, ದುಂಡುಮುಖ ಹೊಂದಿದ್ದು, ಶವದ ವಾರಸುದಾರರು ಇದ್ದಲ್ಲಿ ರೈಲ್ವೆ ಪೊಲೀಸ್ ದೂ:2516579 ಸಂಪರ್ಕಿಸಬಹುದು.</p>.<p>ವ್ಯಕ್ತಿ ನಾಪತ್ತೆ: ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ರಂಗಚಾರಿಹುಂಡಿ ಗ್ರಾಮದ ಸಿದ್ದಯ್ಯ ಎಂಬುವರು ಕಳೆದ ಫೆ.5ರಂದು ಕಾಣೆಯಾಗಿದ್ದಾರೆ. ಇವರ ಬಗ್ಗೆ ಸುಳಿವು ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಲೆದರ್ ವಸ್ತುಗಳನ್ನು ತಯಾರು ಮಾಡುವ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ನಾಲ್ವರು ಅಗ್ನಿ ದುರಂತದಿಂದ ಪಾರಾದ ಘಟನೆ ಶನಿವಾರ ಮುಂಜಾನೆ ನಗರದಲ್ಲಿ ಜರುಗಿದೆ.</p>.<p>ತೊಗರಿ ಬೀದಿಯಲ್ಲಿ ಮಾದೇಶ್ ಎಂಬುವರಿಗೆ ಸೇರಿದ ಸ್ಕೂಲ್ ಬ್ಯಾಗ್ ಮತ್ತು ಜರ್ಕಿನ್ಗಳನ್ನು ಮಾರಾಟ ಮಾಡುವ ಅಂಗಡಿಗೆ ಶಾರ್ಟ್ ಷರ್ಕ್ಯೂಟ್ನಿಂದ ಮುಂಜಾನೆ 3.30ರ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತು.</p>.<p>ಇದರಿಂದ ಟೈಲರಿಂಗ್ ಯಂತ್ರ ಹಾಗೂ ಸುಮಾರು 50 ಸಾವಿರ ಮೌಲ್ಯದ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಕರಕಲಾದವು. ಅಂಗಡಿಯ ಮೇಲಿರುವ ಮೊದಲನೇ ಮಹಡಿ ಯಲ್ಲಿ ಮಾದೇಶ್ ಕುಟುಂಬ ವಾಸವಿತ್ತು.</p>.<p>ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಎಚ್ಚತ್ತುಕೊಂಡ ಮಾದೇಶ್ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಹಡಿಯಿಂದ ಕೆಳಗಿಳಿದರು. ಕೂಡಲೇ ಅಂಗಡಿಯ ಛಾವಣಿ ಕುಸಿದುಬಿತ್ತು. ಅದೃಷ್ಟವಶಾತ್ ಮಾದೇಶ್ ಕುಟುಂಬ ಯಾವುದೇ ಅಪಾಯವಿಲ್ಲದೆ ಪಾರಾಯಿತು.</p>.<p>38 ಬಂಧನ, ರೂ.49 ಸಾವಿರ ವಶ: ಕ್ಲಬ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಜೂಜಿನಲ್ಲಿ ತೊಡಗಿದ್ದ 38 ಮಂದಿಯನ್ನು ಬಂಧಿಸಿ, ಪಣಕ್ಕಿಟ್ಟಿದ್ದ ರೂ.49 ಸಾವಿರ ನಗದು ವಶಪಡಿಸಿಕೊಂಡಿರುವ ಘಟನೆ ಶನಿವಾರ ನಗರದಲ್ಲಿ ಜರುಗಿದೆ.</p>.<p>ಹೆಬ್ಬಾಳು 1ನೇ ಹಂತದ ರಿಂಗ್ ರಸ್ತೆಯ ಬಳಿಯ ಪ್ರಗತಿ ಸ್ಪೋರ್ಟ್ಸ್ ಕ್ಲಬ್ನಲ್ಲಿ ಜೂಜಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಂಜೆ ದಾಳಿ ನಡೆಸಿದಾಗ 38 ಮಂದಿ ಸಿಕ್ಕಿಬಿದ್ದಿದ್ದಾರೆ. ಕ್ಲಬ್ನ ಮುಂದೆ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳು ಸೇರಿದಂತೆ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.</p>.<p>ಮಹಿಳೆಯ ಬಂಧನ: ಆಲನಹಳ್ಳಿಯ ಜುವೆಲ್ಲರಿ ಅಂಗಡಿಯಲ್ಲಿ ಕಳವು ಮಾಡಿದ ಆರೋಪದ ಮೇರೆಗೆ ಮಹಿಳೆಯನ್ನು ನಜರ್ಬಾದ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.</p>.<p>ಚಿಕ್ಕಹುಣಸೂರಿನ ಪಾರ್ವತಿ (60) ಬಂಧಿತ ಮಹಿಳೆ. ಅಂಗಡಿಯಲ್ಲಿ ವ್ಯಾಪಾರ ಮಾಡುವ ನಾಟಕವಾಡಿದ ಈಕೆ ಬೆಳ್ಳಿ ಪದಾರ್ಥಗಳನ್ನು ಬ್ಯಾಗ್ಗೆ ಹಾಕಿಕೊಳ್ಳುವಾಗ ಸಿಕ್ಕಿಬಿದ್ದಿದ್ದಾಳೆ ಎನ್ನಲಾಗಿದೆ. ಪ್ರಕರಣ ದಾಖಲಾಗಿದೆ.</p>.<p>ವೃದ್ಧೆಯ ಶವ ಪತ್ತೆ: ನಗರದ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ 6ರಲ್ಲಿ ಅಪರಿಚಿತ ವೃದ್ಧೆಯ ಶವ ಶನಿವಾರ ಪತ್ತೆಯಾಗಿದೆ. 5 ಅಡಿ ಎತ್ತರ, ದುಂಡುಮುಖ ಹೊಂದಿದ್ದು, ಶವದ ವಾರಸುದಾರರು ಇದ್ದಲ್ಲಿ ರೈಲ್ವೆ ಪೊಲೀಸ್ ದೂ:2516579 ಸಂಪರ್ಕಿಸಬಹುದು.</p>.<p>ವ್ಯಕ್ತಿ ನಾಪತ್ತೆ: ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ರಂಗಚಾರಿಹುಂಡಿ ಗ್ರಾಮದ ಸಿದ್ದಯ್ಯ ಎಂಬುವರು ಕಳೆದ ಫೆ.5ರಂದು ಕಾಣೆಯಾಗಿದ್ದಾರೆ. ಇವರ ಬಗ್ಗೆ ಸುಳಿವು ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>