<p>ಬೆಂಗಳೂರು: ಟರ್ಕಿಯಲ್ಲಿ ಏಪ್ರಿಲ್ 4ರಿಂದ 7ರ ವರೆಗೆ ನಡೆಯಲಿರುವ ಟರ್ಕಿ ಪ್ಯಾರಾಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಬೋರೆಗೌಡ ಆನಂದ್ ಕುಮಾರ್ ಪಾಲ್ಗೊಳ್ಳಲಿದ್ದು, ಅಗ್ರಸ್ಥಾನ ಪಡೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.<br /> <br /> ವಿಶ್ವ ಪ್ಯಾರಾಬ್ಯಾಡ್ಮಿಂಟನ್ ಪಟ್ಟಿಯಲ್ಲಿ ಎರಡನೇ ರ್ಯಾಂಕ್ ಹೊಂದಿರುವ ಬೆಂಗಳೂರಿನ ಪ್ರತಿಭೆ ಟರ್ಕಿಯಲ್ಲಿ ಪದಕ ಗೆಲ್ಲುವ ಗುರಿ ಹೊಂದಿದೆ. ಹೋದ ವರ್ಷದ ನವೆಂಬರ್ನಲ್ಲಿ ಸೋಲ್ನಲ್ಲಿ ನಡೆದ ಮೂರನೇ ವಿಕ್ಟರ್ ಏಷ್ಯನ್ ಪ್ಯಾರಾಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಸಿಂಗಲ್ಸ್ ಹಾಗೂ ಡಬಲ್ಸ್ ಎರಡೂ ವಿಭಾಗಗಳಲ್ಲಿ ಕಂಚಿನ ಪದಕ ಜಯಿಸಿದ್ದರು. ಪದಕದ ನಿರೀಕ್ಷೆ ಹೊತ್ತ ಆನಂದ್ ಮಂಗಳವಾರ ಟರ್ಕಿಗೆ ಪ್ರಯಾಣ ಬೆಳೆಸಿದರು.<br /> <br /> `ಟರ್ಕಿ ಟೂರ್ನಿಯಲ್ಲಿ ಪದಕ ಗೆದ್ದು ಅಗ್ರಸ್ಥಾನ ಪಡೆಯಬೇಕು ಎನ್ನುವ ಛಲದೊಂದಿಗೆ ತೆರಳುತ್ತಿದ್ದೇನೆ. ಈ ಟೂರ್ನಿಗೆ ತೆರಳಲು ಆರ್ಥಿಕ ಸಮಸ್ಯೆ ಕಾಡಿತು. ಈ ವೇಳೆ `ಕಮ್ಯೂನಿ ಮತ್ತು ಟಾರ್ಗೆಟ್ ಗೇಮ್ಸ ಫೆಸಲೀಟಿಸ್' ಎನ್ನುವ ಕಂಪೆನಿ ಪ್ರಾಯೋಜಕತ್ವ ನೀಡಿದೆ. ಟರ್ಕಿಯಲ್ಲಿ ಭಾರತದ ಧ್ವಜ ಹಾರಾಡಿಸಬೇಕು ಎನ್ನುವುದು ಗುರಿ. ಅದಕ್ಕಾಗಿ ಸಾಕಷ್ಟು ಕಠಿಣ ಅಭ್ಯಾಸ ನಡೆಸಿದ್ದೇನೆ' ಎಂದು ಆನಂದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಟರ್ಕಿಯಲ್ಲಿ ಏಪ್ರಿಲ್ 4ರಿಂದ 7ರ ವರೆಗೆ ನಡೆಯಲಿರುವ ಟರ್ಕಿ ಪ್ಯಾರಾಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಬೋರೆಗೌಡ ಆನಂದ್ ಕುಮಾರ್ ಪಾಲ್ಗೊಳ್ಳಲಿದ್ದು, ಅಗ್ರಸ್ಥಾನ ಪಡೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.<br /> <br /> ವಿಶ್ವ ಪ್ಯಾರಾಬ್ಯಾಡ್ಮಿಂಟನ್ ಪಟ್ಟಿಯಲ್ಲಿ ಎರಡನೇ ರ್ಯಾಂಕ್ ಹೊಂದಿರುವ ಬೆಂಗಳೂರಿನ ಪ್ರತಿಭೆ ಟರ್ಕಿಯಲ್ಲಿ ಪದಕ ಗೆಲ್ಲುವ ಗುರಿ ಹೊಂದಿದೆ. ಹೋದ ವರ್ಷದ ನವೆಂಬರ್ನಲ್ಲಿ ಸೋಲ್ನಲ್ಲಿ ನಡೆದ ಮೂರನೇ ವಿಕ್ಟರ್ ಏಷ್ಯನ್ ಪ್ಯಾರಾಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಸಿಂಗಲ್ಸ್ ಹಾಗೂ ಡಬಲ್ಸ್ ಎರಡೂ ವಿಭಾಗಗಳಲ್ಲಿ ಕಂಚಿನ ಪದಕ ಜಯಿಸಿದ್ದರು. ಪದಕದ ನಿರೀಕ್ಷೆ ಹೊತ್ತ ಆನಂದ್ ಮಂಗಳವಾರ ಟರ್ಕಿಗೆ ಪ್ರಯಾಣ ಬೆಳೆಸಿದರು.<br /> <br /> `ಟರ್ಕಿ ಟೂರ್ನಿಯಲ್ಲಿ ಪದಕ ಗೆದ್ದು ಅಗ್ರಸ್ಥಾನ ಪಡೆಯಬೇಕು ಎನ್ನುವ ಛಲದೊಂದಿಗೆ ತೆರಳುತ್ತಿದ್ದೇನೆ. ಈ ಟೂರ್ನಿಗೆ ತೆರಳಲು ಆರ್ಥಿಕ ಸಮಸ್ಯೆ ಕಾಡಿತು. ಈ ವೇಳೆ `ಕಮ್ಯೂನಿ ಮತ್ತು ಟಾರ್ಗೆಟ್ ಗೇಮ್ಸ ಫೆಸಲೀಟಿಸ್' ಎನ್ನುವ ಕಂಪೆನಿ ಪ್ರಾಯೋಜಕತ್ವ ನೀಡಿದೆ. ಟರ್ಕಿಯಲ್ಲಿ ಭಾರತದ ಧ್ವಜ ಹಾರಾಡಿಸಬೇಕು ಎನ್ನುವುದು ಗುರಿ. ಅದಕ್ಕಾಗಿ ಸಾಕಷ್ಟು ಕಠಿಣ ಅಭ್ಯಾಸ ನಡೆಸಿದ್ದೇನೆ' ಎಂದು ಆನಂದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>