<p>ಬೆಂಗಳೂರು: ಅಣು ವಿದ್ಯುತ್ ಸ್ಥಾವರಗಳಿಂದ ನೈಸರ್ಗಿಕ ಅರಣ್ಯಕ್ಕೆ ಯಾವುದೇ ಅಪಾಯ ಇಲ್ಲ. ದೇಶದ ಕೆಲವು ಪ್ರದೇಶಗಳಲ್ಲಿ ಅಣು ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಜನರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅಭಿಪ್ರಾಯಪಟ್ಟರು.<br /> <br /> ಇಲ್ಲಿನ `ಅರಣ್ಯ ಭವನ~ದಲ್ಲಿ ಗುರುವಾರ ಆಯೋಜಿಸಲಾಗಿದ್ದ `ಗ್ರೀನ್ ಇಂಡಿಯಾ ಮಿಷನ್~ ಪ್ರಾದೇಶಿಕ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, `ಅಣು ವಿದ್ಯುತ್ನಂತಹ ಸ್ವಚ್ಛ ಇಂಧನ ಮೂಲಗಳಿಗೆ ಇಂದು ಅನಗತ್ಯ ವಿರೋಧ ಕಂಡುಬರುತ್ತಿದೆ~ ಎಂದು ವಿಷಾದಿಸಿದರು.<br /> <br /> ಗುಜರಾತ್ ಮತ್ತು ರಾಜಸ್ತಾನದಲ್ಲಿ ಸೌರವಿದ್ಯುತ್ ಉತ್ಪಾದನೆಗೆ ನೀಡುತ್ತಿರುವ ಪ್ರೋತ್ಸಾಹ ದೇಶದ ಇತರ ರಾಜ್ಯಗಳು ಅನುಸರಿಸಲು ಯೋಗ್ಯವಾಗಿದೆ. ಜರ್ಮನಿಯಲ್ಲಿ ಹಲವು ಮನೆಗಳಲ್ಲಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಲಾಗಿದೆ. ಸೂರ್ಯನ ಚಲನೆ ಆಧರಿಸಿ ತಮ್ಮ ಕೋನ ಬದಲಾಯಿಸಿಕೊಳ್ಳುವ ಸೌರ ಫಲಕಗಳನ್ನೂ ಅಲ್ಲಿ ಅಭಿವೃದ್ಧಿಪಡಿಸಲಾಗಿದೆ~ ಎಂದು ತಿಳಿಸಿದರು. <br /> <br /> `ದೇಶದ ಇಂಧನದಲ್ಲಿ ಶೇಕಡ 70ರಷ್ಟು ಭಾಗ ಜೈವಿಕ ದ್ರವ್ಯರಾಶಿಯಿಂದಲೇ ಪೂರೈಕೆಯಾಗುತ್ತಿದೆ. ಆದರೆ ಇತರ ಶಕ್ತಿಮೂಲಗಳ ಕುರಿತೂ ನಾವು ಸಾಕಷ್ಟು ಗಮನ ನೀಡಬೇಕು~ ಎಂದರು.<br /> <br /> ನವೆಂಬರ್ ಅಂತ್ಯದ ವೇಳೆಗೆ `ಗ್ರೀನ್ ಇಂಡಿಯಾ ಮಿಷನ್~ನ ಮುಂದಿನ ಸಾಲಿನ ಯೋಜನೆಗಳಿಗೆ ಅಂತಿಮ ರೂಪ ದೊರೆಯಲಿದೆ ಎಂದು ಕೇಂದ್ರ ಅರಣ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ಡಾ.ಪಿ.ಜೆ. ದಿಲೀಪ್ಕುಮಾರ್ ತಿಳಿಸಿದರು. ಐಎಫ್ಎಸ್ ಅಧಿಕಾರಿಗಳಾದ ಜಿ.ವಿ. ಸುಗೂರ್, ಡಾ.ವಿ.ಕೆ.ಬಹುಗುಣ ಮತ್ತಿತರರು ಪಾಲ್ಗೊಂಡಿದ್ದರು.<br /> <br /> <strong>`ಗ್ರೀನ್ ಇಂಡಿಯಾ ಮಿಷನ್~: </strong>ಹವಾಮಾನ ಬದಲಾವಣೆಯಿಂದ ಆಗಬಹುದಾದ ದುಷ್ಪರಿಣಾಮಗಳನ್ನು ತಗ್ಗಿಸುವ ಉದ್ದೇಶದಿಂದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು 2008ರಲ್ಲಿ ಅನಾವರಣಗೊಳಿಸಿದ ರಾಷ್ಟ್ರೀಯ ಕ್ರಿಯಾ ಯೋಜನೆಯ ಎಂಟು ಅಂಶಗಳಲ್ಲಿ `ಗ್ರೀನ್ ಇಂಡಿಯಾ ಮಿಷನ್~ ಕೂಡ ಒಂದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಅಣು ವಿದ್ಯುತ್ ಸ್ಥಾವರಗಳಿಂದ ನೈಸರ್ಗಿಕ ಅರಣ್ಯಕ್ಕೆ ಯಾವುದೇ ಅಪಾಯ ಇಲ್ಲ. ದೇಶದ ಕೆಲವು ಪ್ರದೇಶಗಳಲ್ಲಿ ಅಣು ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಜನರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅಭಿಪ್ರಾಯಪಟ್ಟರು.<br /> <br /> ಇಲ್ಲಿನ `ಅರಣ್ಯ ಭವನ~ದಲ್ಲಿ ಗುರುವಾರ ಆಯೋಜಿಸಲಾಗಿದ್ದ `ಗ್ರೀನ್ ಇಂಡಿಯಾ ಮಿಷನ್~ ಪ್ರಾದೇಶಿಕ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, `ಅಣು ವಿದ್ಯುತ್ನಂತಹ ಸ್ವಚ್ಛ ಇಂಧನ ಮೂಲಗಳಿಗೆ ಇಂದು ಅನಗತ್ಯ ವಿರೋಧ ಕಂಡುಬರುತ್ತಿದೆ~ ಎಂದು ವಿಷಾದಿಸಿದರು.<br /> <br /> ಗುಜರಾತ್ ಮತ್ತು ರಾಜಸ್ತಾನದಲ್ಲಿ ಸೌರವಿದ್ಯುತ್ ಉತ್ಪಾದನೆಗೆ ನೀಡುತ್ತಿರುವ ಪ್ರೋತ್ಸಾಹ ದೇಶದ ಇತರ ರಾಜ್ಯಗಳು ಅನುಸರಿಸಲು ಯೋಗ್ಯವಾಗಿದೆ. ಜರ್ಮನಿಯಲ್ಲಿ ಹಲವು ಮನೆಗಳಲ್ಲಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಲಾಗಿದೆ. ಸೂರ್ಯನ ಚಲನೆ ಆಧರಿಸಿ ತಮ್ಮ ಕೋನ ಬದಲಾಯಿಸಿಕೊಳ್ಳುವ ಸೌರ ಫಲಕಗಳನ್ನೂ ಅಲ್ಲಿ ಅಭಿವೃದ್ಧಿಪಡಿಸಲಾಗಿದೆ~ ಎಂದು ತಿಳಿಸಿದರು. <br /> <br /> `ದೇಶದ ಇಂಧನದಲ್ಲಿ ಶೇಕಡ 70ರಷ್ಟು ಭಾಗ ಜೈವಿಕ ದ್ರವ್ಯರಾಶಿಯಿಂದಲೇ ಪೂರೈಕೆಯಾಗುತ್ತಿದೆ. ಆದರೆ ಇತರ ಶಕ್ತಿಮೂಲಗಳ ಕುರಿತೂ ನಾವು ಸಾಕಷ್ಟು ಗಮನ ನೀಡಬೇಕು~ ಎಂದರು.<br /> <br /> ನವೆಂಬರ್ ಅಂತ್ಯದ ವೇಳೆಗೆ `ಗ್ರೀನ್ ಇಂಡಿಯಾ ಮಿಷನ್~ನ ಮುಂದಿನ ಸಾಲಿನ ಯೋಜನೆಗಳಿಗೆ ಅಂತಿಮ ರೂಪ ದೊರೆಯಲಿದೆ ಎಂದು ಕೇಂದ್ರ ಅರಣ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ಡಾ.ಪಿ.ಜೆ. ದಿಲೀಪ್ಕುಮಾರ್ ತಿಳಿಸಿದರು. ಐಎಫ್ಎಸ್ ಅಧಿಕಾರಿಗಳಾದ ಜಿ.ವಿ. ಸುಗೂರ್, ಡಾ.ವಿ.ಕೆ.ಬಹುಗುಣ ಮತ್ತಿತರರು ಪಾಲ್ಗೊಂಡಿದ್ದರು.<br /> <br /> <strong>`ಗ್ರೀನ್ ಇಂಡಿಯಾ ಮಿಷನ್~: </strong>ಹವಾಮಾನ ಬದಲಾವಣೆಯಿಂದ ಆಗಬಹುದಾದ ದುಷ್ಪರಿಣಾಮಗಳನ್ನು ತಗ್ಗಿಸುವ ಉದ್ದೇಶದಿಂದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು 2008ರಲ್ಲಿ ಅನಾವರಣಗೊಳಿಸಿದ ರಾಷ್ಟ್ರೀಯ ಕ್ರಿಯಾ ಯೋಜನೆಯ ಎಂಟು ಅಂಶಗಳಲ್ಲಿ `ಗ್ರೀನ್ ಇಂಡಿಯಾ ಮಿಷನ್~ ಕೂಡ ಒಂದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>